ಹೇಮಂತ

ಹೇಮಂತದ ಚಳಿ ಮೈಯೆಲ್ಲಾ ಗಡಗಡ
ಆಗಸದಲ್ಲಿ ಮಂಜಿನ ತೇರನೇರಿ
ವಿರಹ ಹೃದಯಗಳ ಮೇಲೆ ದಂಡೆತ್ತಿ ಬರುತಿಹನು ಚಂದ್ರ
ಎದುರಿಸುವರಾರು? ಮೋಹಿಸುವವರಾರು?
ಚಳಿಗೆ ಬೆದರಿ ಮೂಲೆ ಸೇರಿದರೆಲ್ಲರೂ
ಒಂದು ಕಡೆ ಚಳಿಯ ಧಾಳಿ,
ಮತ್ತೊಂದೆಡೆ ವಿರಹಾಗ್ನಿ!
ತನು-ಮನದ ಮೇಲೆ ಧಾಳಿ!
ಮೂಲೆ ಸೇರಿ ಬೆಚ್ಚಗೆ ಮಲಗಿದವರೇ ಹೆಚ್ಚು!
ಗಾಳಿಯ ಜೊತೆ ಸೆಣಸಿ ಬೆವರಿಳಿಸುವವರಾರು?
ಬರುತ್ತದೆ!, ಹೋಗುತ್ತದೆ! ಕಾಲಚಕ್ರ ನಿಲ್ಲದೆ...

ಬೆಳಗು ಬಾ

ನನ್ನೊಳಗಿನ ಅರಿವಿನ ಬೆಳಕು ಹೊಮ್ಮಲಿ
ಈ ಜಗದೆಲ್ಲೆಡೆ ಹಬ್ಬಲಿ
ನೋವು,ಸಂಕಟ,ತುಮುಲಗಳೆಲ್ಲವ ತೊಳೆಯಲಿ
ಓ ಬೆಳಕೇ, ಈ ಹೃದಯಕೆ ಬಾ||

ಕಡಲ ನೀರು ಆವಿಯಾಗಿ ನಭವ ಸೇರಿದಂತೆ
ಮೋಡವಾಗಿ ಆಗಸದಲ್ಲಿ ತೇಲಿದಂತೆ
ಓ ಙ್ಞಾನವೇ ಬೆಳಕಾಗಿ ಬಾ
ಓ ಬೆಳಕೇ ಕವನವಾಗು ಬಾ||

ಎಲ್ಲೋ ಹುಟ್ಟಿ,ಎಲ್ಲೋ ಸಾಗುವ ನದಿಯಂತೆ
ಹೆಣ್ಣಾಗಿ ಹುಟ್ಟಿ ಮನೆ ಬೆಳಗುವ ದೀಪದಂತೆ
ಓ ಹೆಣ್ಣೇ ಬೆಳಕಾಗಿ ಬಾ
ಓ ಹೆಣ್ಣೇ ಮನೆಯ ಬೆಳಗು ಬಾ||

ಗುಲ್ ಮೊಹರ್

ಮನೆಯ ಪಕ್ಕದ ರಸ್ತೆ
ನೆಟ್ಟೆ ಪುಟ್ಟ ಗುಲ್ ಮೊಹರ್ ಸಸ್ಯ;
ನೀರ್ಹಾಕಿದೆ, ಆರೈಕೆ ಮಾಡಿದೆ
ಅದು ಬೆಳೆಯುತ್ತಿತ್ತು ನನ್ನ ಕನಸಿನಂತೆ||

ಪುಟ್ಟ ಸಸಿಯ ಎಲೆಗಳು ಬಾಡುತ್ತಿತ್ತು
ಕಂಡ ಮನಸು ಮರುಗಿತು;
ಹೊಸ ಚಿಗುರ ಕಂಡಾಗ
ಮನಸು ಸಂತೋಷದಲಿ ತೇಲಿತು||

ಬೆಳೆದು ದೊಡ್ಡದಾಗುತಿತ್ತು
ಮನದಲ್ಲಿ ಅಳುಕೂ ದಿನೇ ದಿನೇ ಹೆಚ್ಚಾಗುತ್ತಿತ್ತು;
ದಾರಿಹೋಕ ದನ, ಕುರಿ, ಮೇಕೆಗಳು ತೊಂದುಬಿಟ್ಟಾವೆಂದು
ದಾರಿಹೋಕ ನಿರ್ಲಜ್ಜ ಜನ ಹೊಸಕ್ಹಾಕುವರೆಂದು||

ಎಲ್ಲೇ ಇದ್ದರೂ ಅದರದೇ ಚಿಂತೆ
ದಿನೆ ದಿನೇ ಕಾಳಜಿ ಮಾತ್ರ ಹೆಚ್ಚಾಗುತ್ತಲ್ಲೇ ಇತ್ತು:
ಎತ್ತರೆತ್ತರಕೆ ಬೆಳವುದ ಕಂಡೆ
ಬೆಳೆದು ಹೆಮ್ಮರವಾಗಿ ನೆರಳುಕೊಟ್ಟಾಗ ಹಿರಿಹಿರಿ ಹಿಗ್ಗಿದೆ||

ವಸಂತದಲ್ಲಂತೂ ಅದರ ನೋಟವೇ ಚಂದ
ಮೈಯೆಲ್ಲಾ ಹಸಿರು,ಕೆಂಪು,ಬಿಳಿಯ ಬಣ್ಣದ
ಹೂವು, ಕಂಪಸೂಸಿ ಹಕ್ಕಿಗಳ ಆಕಷರ್ಿಸಿಸಿ
ದೇವತೆಯಂತೆ ಕಂಗಳಿಗೆ ಕಂಗೊಳಿಸುತ್ತಿತ್ತು||

ಅದ ಕಂಡಾಗಲೆಲ್ಲಾ
ಮನಸು ನಲಿಯುತ್ತೆ;
ಹೃದಯ ಕಾಣದ ಹಾಡ ಹಾಡುತ್ತೆ
ಮತ್ತೆ ಮತ್ತೆ ಅದ ನೋಡುತ್ತಾ ಆಗಸದಲಿ ತೇಲುತ್ತೆ||

ಪ್ರಕೃತಿಗೆ ನಾನು ನಿನ್ನ ಕೊಟ್ಟೆ
ನೀನು ನನಗೆಲ್ಲವನ್ನೂ ಹಿಂತಿರುಗಿಸಿದೆ;
ಒಳಿತಮಾಡಿ ಒಳಿತ ಬೇಡಿದರೆ
ಒಳಿತೇ ನಮ್ಮ ಕಾಯ್ವದು||

ಪ್ರೇರಣೆ: "ದಿ ಟ್ರೀ" ಕೇಕಿ ಎನ್ ದಾರುವಾಲ

ದಿವ್ಯಜ್ಯೋತಿ

ಪುಟ್ಟ ಪ್ರೀತಿಯ ದೇವತೆ ಮಲಗಿಹುದು
ಕಾಲನೊಳಗೆ ಹುದುಗಿಹುದು
ನಿದಿರೆಯ ನೆಪವ್ವೊಡ್ಡಿ
ತಲೆಯ ಮೇಲೆ ಕೈ ನೇವರಿಸೆ
ಹೃದಯ ದೀವಿಗೆಯ ಬೆಳಕು
ಮುಖದಲ್ಲಿ ಶಾಂತತೆಯ ಹರವು
ತುಟಿಯಲ್ಲಿ ಬೆಲೆಕಟ್ಟಲಾಗದ ಮಂದಹಾಸ
ನೋಡು ನೋಡು ಮತ್ತೆ ಸಿಗದೀ ದಿವ್ಯತೆ
ತುಂಬಿಕೋ ಹೃದಯ ತುಂಬಾ
ಮತ್ತೊಮ್ಮೆ ಸಿಗದೀ ಅಮೃತಗಳಿಗೆ
ಯಾವ ಜನುಮದ ಸುಕೃತವೋ!
ಕ್ಷಣಕಾಲ ಕಂಡೆ ದಿವ್ಯಜ್ಯೋತಿ
ಕಣ್ಣು ಮಬ್ಬುಗಟ್ಟಿದೆ ಕ್ಷಣದಲ್ಲೇ
ರಾತ್ರಿಯ ನೀರವತೆಯ ಸೆಳೆತಕ್ಕೆ ಸಿಕ್ಕು
ನಿದಿರೆಗೆ ಜಾರಿದೆ ಅಚ್ಚರಿಯಲ್ಲೇ....
ಮತ್ತೆ ಬರದೀ ಸುಸಮಯ
ಜಾರಿಹೋಗಿದೆ ಕಣ್ಣಮುಂದೆ.....
ಕಣ್ಣುಗಳೇ ಧನ್ಯ
ಹೃದಯವೇ ಧನ್ಯ
ಮತ್ತೊಮ್ಮೆ ಬಾ ದೈವವೇ.....

ತಾಯ ಮಡಿಲ ತಂಪು

ಕಣ್ಣರಳಿವೆ ಈ ಹಸಿರ ಸೊಬಗ ಸವಿಯಲು
ಎಷ್ಟು ನೋಡಿದರೂ ಹಸಿವೆ ನೀಗದು|
ಬೆಟ್ಟ,ಕಣಿವೆ ತುಂಬಿಕೊಂಡು ನಲಿದಿದೆ
ಮತ್ತೆ,ಮತ್ತೆ ನೋಡಬಯಸಿದೆ ಹೃದಯ ಅರಳಿಸಿ||

ಹರಿವ ನೀರ ಸಪ್ಪಳ
ಮನದಲ್ಲೇನೋ ಹುಚ್ಚು ಸಡಗರ|
ಕರೆವ ಹಕ್ಕಿಗಳ ಇಂಚರ
ತಾಯ ಕರುಳ ಸಪ್ತಸ್ವರ||

ಕಂಡಷ್ಟೂ ಕಣ್ಣರಳಿಸಿ ತವಕ
ಕೇಳುವಷ್ಟೂ ಕಿವಿ ತೆರೆದು ಭಾವುಕ|
ತಾಯ ಮಡಿಲ ತಂಪು-ಒನಪು
ಅನುಭವಿಸುವ ನಾ ಪುಟ್ಟ ಬಾಲಕ||

ಮರಳಿ ನೋಡುವೆ.....
ಮರಳಿ ಬರುವೆ.....
ನಿನ್ನ ಮಡಿಲ ತಂಪಿಗೆ
ಹೃದಯ ತೆರೆದು ನೋಡಿದೆ
ತವಕಿಸಿದೆ ನಿನ್ನ ನೋಟಕೆ.......||

ಪರಿತಾಪ

ಕಾಯುತಿಹೆನು ಬಹಳ ವರ್ಷಗಳಿಂದೆ
ತಾಳ್ಮೆಗೆಡದೆ ತಗ್ಗಿ-ಬಗ್ಗಿ ನಡೆಯುತಿಹೆನು|
ಈ ಪರಿತಾಪಕೆ ಕೊನೆ ಎಂದೋ ತಿಳಿಯದಾಗಿದೆ
ಇಂದೋ-ನಾಳೆಯೋ ನನ್ನದು ದಕ್ಕುವುದೆಂದು||

ಬಂದದೆಲ್ಲಾ ಸ್ವೀಕರಿಸಿರುವೆ ಸರಿ-ಸಮನಾಗಿ
ಸಿಹಿಯೋ-ಕಹಿಯೋ ಬಯಕೆಯಿಂದಲೇ|
ಅನುಭವಕೆ ಮಣೆಹಾಕಿ ಅಮೃತವುಂಡಿದ್ದೇನೆ
ಅರಿವ ಬೆಳಕಲ್ಲೇ ಧನಾತ್ಮಕವಾಗಿಯೇ ಚಿಂತಿಸಿದ್ದೇನೆ||

ಕಾಲ ಮುಂದೆ ಓಡುತ್ತಿದೆಯಾದರೂ
ಮನದ ಹೆಬ್ಬಯಕೆಯ ರಾಮನ ಬರುವಿಕೆಯಿಲ್ಲ|
ಕಾಯುತಿಹೆನು,ಕಾಯುತಿಹೆನು ರಾಮ-ರಾಮ
ಕಣ್ಣತುಂಬಿಕೊಳ್ಳಲು ಹೃದಯ ಬರಿದು ಮಾಡಿಹೆನು||

ರಾಮ ನೀ ಬರುವಿಯೆಂದು ಕಾಯುತಿಹೆನು ಆಶಾವಾದದಿಂದಲೇ......

ನೀನ್ಯಾರೆ ಹಕ್ಕಿ?

ಮರದ ಮೇಲೊಂದು ಹಕ್ಕಿ
ರಾತ್ರಿ ಮಾತ್ರ ಮುಖ ತೋರುವ ಹಕ್ಕಿ
ಕಂಡರೆ ಅಪಶಕುನವೆನ್ನುವ ಹಕ್ಕಿ
ರಾತ್ರಿಗಳ್ಳರಿಗೂ ಕಾಡುವ ಹಕ್ಕಿ
ಹಕ್ಕಿ,ಹಕ್ಕಿ ನೀನ್ಯಾರೆ ಹಕ್ಕಿ?

ದೊಡ್ಡ,ದೊಡ್ಡ ಕಂಗಳ ಹಕ್ಕಿ
ಅಗಲದ ಮುಖದ ಹಕ್ಕಿ
ಕತ್ತನ್ನು ತಿರುಗಿಸುವ ಹಕ್ಕಿ
ನಿನ್ನ ಕಂಡರೆ ಭಯವ್ಯಾಕೆ ಹಕ್ಕಿ
ಹಕ್ಕಿ,ಹಕ್ಕಿ ನೀನ್ಯಾರೆ ಹಕ್ಕಿ ?

ಓ ಗುರುವೇ

ಲೋಕದ ಬಯಕೆಗಳೆಲ್ಲಾ ತಾನೇ ಆಗಿ
ಲೋಕವೇ ತಾನಾಗಿ
ಎಲ್ಲವೂ ತನಗೇ ಮೀಸಲೆಂಬಂತೆ
ಮಿಸುಕುವ ಇವರ ಪರಿಯ ನೋಡ|

ಸ್ವಾರ್ಥತನದಲ್ಲಿ ಬಾಚಿಕೊಂಬರು
ಬಿಡದೆ ಒಂದಿನಿತು ಪರರಿಗೆ
ಇವರ ಬಾಳ್ವೆ ಯಾರಿಗೆ ಒಲವೋ ನಾ ಕಾಣೆ
ಎಲ್ಲವ ನಿನಗಪರ್ಿಸಿರುವೆನು ಓ ಗುರುವೇ|

ಎನಿತು ಸುಂದರ,ಎನಿತು ಮಧುರ

ಎನಿತು ಸುಂದರ,ಎನಿತು ಮಧುರ
ಈ ನನ್ನ ದೇಶವೂ|
ಪ್ರಪಂಚದ ಎಲ್ಲ ದೇಶಗಳಿಗಿಂತಲೂ
ನಮ್ಮ ದೇಶವು ಭಿನ್ನವೂ||

ಉತ್ತರದ ಹಿಮಾಲಯವು
ಈ ದೇಶದ ಕಿರೀಟವೂ|
ಹಾರುತಿರಲಿ ನಮ್ಮಯ ಹಿರಿಮೆಯ
ಗುರುವಿನ ಅರಿವಿನ ಧ್ವಜವೂ||

ಗಂಗೆ,ಯಮುನೆಯರ ಕಲರವ
ನಿಲ್ಲದೆ ತಂಪನ್ನೆರೆಯಲಿ ವರ್ಷವೂ|
ಶಾಂತಿ,ನೆಮ್ಮದಿ,ಧರ್ಮದ,ಭ್ರಾತೃತ್ವದ ಜಯಘೋಷ
ಮಾದರಿಯಾಗಲಿ ಈ ಜಗಕ್ಕೆಲ್ಲಾ||

ನಡೆಯುತಿರಲಿ ಹೋಮ-ಹವನ
ಬಲಿದಾನಗಳು ನಿತ್ಯವೂ|
ಸಾಹಿತ್ಯ,ಕಲೆ,ವಿಜ್ಞಾನಗಳ ಸಮ್ಮೇಳನ
ನಿಲ್ಲದೆ ಅನವರತ ನಿತ್ಯೋತ್ಸವ||

ಕರುಣೆಯ ಕಡಲು

ವಂದಿಸುವೆ ತಾಯೇ ನಿನಗೆ
ನಮಿಸುವೆ ತಾಯೇ ಅನವರತ
ಕರುಣೆಯ ಕಡಲು;
ವಾತ್ಸಲ್ಯದ ಮಡಿಲು;
ಶಾಂತಿಯ ಮಮತೆಯ ಹೊನಲು//

ಆ ದೇವನ ಹೃದಯದ ತುಣುಕು ನೀನು
ಆ ಚಂದ್ರನ ಬೆಳಕಿನ ಬೆಳದಿಂಗಳು ನೀನು
ಕಣ್ಣ ರೆಪ್ಪೆಯು ನೀನು;
ರಕ್ಷಿಪ ರಣಚಂಡಿಯು ನೀನು;
ತೊದಲು ನುಡಿಯ ಗುರುವೂ ನೀನು//

ನೀನೇ ಅರಿವು
ನೀನೇ ಬದುಕಿನ ದಾರಿಯು
ನೀನೇ ನನ್ನ ಉಸಿರು
ಹೃದಯದಲ್ಲಿ ತುಂಬು ನೀ ಶಕ್ತಿ
ಮನದಲ್ಲಿ ಆವರಿಸಲಿ ನಿನ್ನ ಭಕ್ತಿ//

ಶ್ರೀಮಂತ

ಹಣವಿದ್ದವರೆಲ್ಲಾ ಶ್ರೀಮಂತರಲ್ಲ
ಓಳ್ಳೆಯ ಆಲೋಚನೆ;
ಓಳ್ಳೆಯ ವಿಚಾರಗಳು;
ಓಳ್ಳೆಯ ನಡುವಳಿಕೆಗಳು;
ಓಳ್ಳೆಯ ಗೆಳೆಯರಿರುವರೆಲ್ಲಾ
ನಿಜವಾಗಿಯೂ ಈ ಪ್ರಪಂಚದಲ್ಲಿ ಶ್ರೀಮಂತರು//

ಬಿಸಿಲು ಕುದುರೆ

ನಡೆದಷ್ಟೂ ದೂರ ಹೋಗುತಿಹುದು
ಎಂದು ಸೇರುವೆನೋ ಗುರಿಯನು?
ದೂರ ದೂರ ಸರಿಯುತಿಹುದು ಕನಸು
ಎಂದು ನೋಡುವೆನೋ ನಿನ್ನನು//

ಭ್ರಮೆಯ ಬೆನ್ನ ಹತ್ತಿಹೆನೇನೋ?
ನಿದ್ದೆ ಜಾರಿಹುದು, ಕಣ್ಣೀರು ಕಣ್ಣಿಂದ
ಎಡರು ತೊಡರು ನಡೆಯುತಿಹೆನು
ಎಂದು ಬೀಳುವೆನೋ! ಕಾಯುತಿಹುದು ನೆಲವು//

ಬಿಸಿಲು ಕುದುರೆ ಏರಿಹನೇನೋ?
ಅಪಹಾಸ್ಯ-ನಿಂದೆಗೆ ಎದೆಯ್ಯೊಡ್ಡಿರುವೆ
ಪಟ್ಟ ನೋವಿಗೆಲ್ಲಾ ಮುಲಾಮಿದೆಯೇ?
ಹರಿದ ಕಣ್ಣೀರಿಗೆ ಬೆಲೆಯುಂಟೆ?
ಮುಂದೆ ಸಾಗುತಿಹೆನು ಎಲ್ಲವ ಹೊತ್ತು
ಹೊತ್ತು ತೀರುತಿದೆ ಇತಿಹಾಸದೆಡೆಗೆ.... //

ದಾರಿ ಕಾಯುತ್ತಾ....

ದೂರ ಹೋಗಬಹುದೇ?
ಮನವ ಮುರಿದು
ಮನದೊಳು ನೂರು ಕದನ ನಡೆಯುತಿರಲು
ನೆಮ್ಮದಿಯ ನಿದ್ದೆ ಸಾಧ್ಯವೇ?//

ತುಟಿಯಲ್ಲಿ ಮಾತಿಲ್ಲ, ನಗುವಿಲ್ಲ
ಏನ ಹೇಳಲಿ ತೊದಲುವುದ ಬಿಟ್ಟು
ಹೃದಯ ನರಳುತಿರಲು ನೋವಲಿ
ಯಾರ ಬೇಡಲಿ ನಿನ್ನ ತಡೆಯಿರೆಂದು//

ಬೆಳಕ ಕತ್ತಲು ನುಂಗಿದಂತೆ
ನಿನ್ನ ನೆನಪು ನನ್ನ ನೆಮ್ಮದಿಯ ನುಂಗಿತು
ಹೃದಯದಲ್ಲೊಂದು ಭರವಸೆಯಿತ್ತು
ನಾಳೆ ಬೆಳಗಾಗುವುದೆಂದು
ನೀ ಬರುವ ದಾರಿ ಕಾಯುತ್ತಾ.... //

ಭರವಸೆ

ಎಲ್ಲಿ ಹೋದೆಯೋ ಓ ಚೆನ್ನದ ಹಾಡುಗಾರ
ಚಿನ್ನದ ಕಂಠದ ಮಾಟಗಾರ
ಸೊರಗಿಹುದು ಈ ಹೃದಯ ತಂಪೆಳಲ ನೀಡು ಬಾ//

ಎಲ್ಲಿ ಹೋದೆಯೋ ಮನದಲ್ಲಿ ಮೂಡಿದೆ ಭಯ ಆವೇಗ
ಕಡೆಗಣಿಸಿದೆ ನೀನಿಲ್ಲದೆ
ಹಾತೊರೆಯುತಿದೆ ಮನ ಭರವಸೆ ಮೂಡಿಸು ಬಾ//

ನಿನ್ನ ನಂಬಿಹೆನು ,ನೀನೊಬ್ಬನೇ ಅಂತಿಮ ಭರವಸೆ
ಯಾರು ಬಾರದಿದ್ದರೇನು?
ನೀ ಬರುವೆಯೆಂಬ ಹೆಬ್ಬಯಕೆಯಿದೆ ಕರುಣೆ ತೋರಿಸು ಬಾ//

ಅವನ ಪಯಣ

ಪ್ರತಿದಿನ ಅವನ ಪಯಣ ಇದೇ ದಿಕ್ಕಿನಲ್ಲಿ
ನಾನು ಮಾತ್ರ ಇಂದಿನ ಪ್ರೇಕ್ಷಕ;
ಅವನ ಪಯಣ ಇಂದು ನಿನ್ನೆಯದಲ್ಲ,
ಅದು ಶತಶತಮಾನಗಳದ್ದು,
ನನ್ನದು ಮಾತ್ರ ಕೆಲವೇ ದಶಕಗಳದ್ದು
ಪ್ರತಿದಿನ ನೂರು ಸಂದೇಶಗಳ ಹೊತ್ತು ತರುವ
ನನಗೆ ಮಾತ್ರ ಅದರ ಅರಿವಿಲ್ಲ
ಕೇವಲ ಮೂಕಪ್ರೇಕ್ಷಕ
ಕಣ್ಣಿದ್ದು ಕುರುಡ
ಒಳಗಣ್ಣ ತೆರೆಸಬೇಕು ಅವ
ಅವನದೂ ಯಾತ್ರಿಕ ಜೀವನವೇ
ನನ್ನದೂ ಅವನಂತೆ ಬೇರೆಯೇನೂ ಅಲ್ಲ
ಆದರೂ ಅವನಿಗೂ, ನನಗೂ ಅಪಾರ ವ್ಯತ್ಯಾಸ
ಅವನದೋ ನಿಲರ್ಿಪ್ತಭಾವ,
ನನ್ನದೋ ಆತಂಕಭಾವ,ಧ್ಯೆನ್ಯಭಾವ....

ನೋಟ ಬದಲಿಸು

ಬದಲಿಸು ಕಣ್ಣ ನೋಟ.
ಕಾಣು ಚೈತನ್ಯವಿಹುದು ಜಗದೆಲ್ಲಡೆ;
ಹವ್ಯಾಸವಾಗಲಿ ಪ್ರತಿ ಕೆಲಸ,
ಇಂದೇ ಮಾಡು ಮನದಲ್ಲಿಯ ಕಾಯಕ;
ಆ ದೇವನ ಕರುಣೆಯ ನೆನೆ,
ಸಿಕ್ಕಿದೆಲ್ಲಕ್ಕೂ ಖುಷಿ ಇರಲಿ;
ಈ ಜಗವೇ ತೆರೆದ ಶಾಲೆ,
ಇರಲಿ ಕಲಿಕೆ ನಿರಂತರ;
ಸ್ವಾಭಿಮಾನವಿರಲಿ,
ಗುರಿಯ ಸಾಧನೆಗೆ ಅದುವೇ ಪ್ರಥಮ ಹೆಜ್ಜೆ;
ಋಣಾತ್ಮಕತೆ ಎಲ್ಲೆಡೆಯೂ ಇದೆ,
ತಿಳಿದು ದೂರವಿರು;
ಈ ಜಗವ ಪ್ರೀತಿಸು,
ಮಾಡುವುದೆಲ್ಲವ ಇಷ್ಟಪಡು;
ಪ್ರತಿದಿನ ಕಣ್ಣುತೆರೆ ಆಶಾವಾದದಲಿ,
ಬೆಳಕಿದೆ, ಕತ್ತಲಿದೆ, ಆಯ್ಕೆ ನಿನ್ನದೇ.....
ಸಾಧನೆಯ ಹೆದ್ದಾರಿ ಮುಂದಿದೆ..
ನಿನಗಾಗಿ ಕಾದಿದೆ.....

ನಿತ್ಯ ಹರಣ

ಮನದಲ್ಲಿ ನೂರು ಕದನ ನಡೆದಿದೆ
ಯಾರು ಗೆಲ್ಲುವರೋ ನಾ ಕಾಣೆ
ಸಾವು,ನೋವು ಎಲ್ಲವೂ ನನ್ನೊಳಗೆ
ಸೋತರೂ! ಗೆದ್ದರೂ!
ಲಾಭ-ನಷ್ಟ ನನ್ನದೇ.....
ವರುಷಗಳಿಂದ ನಡೆಯುತಿದೆ ಈ ಕದನ
ಬಿಡುವಿಲ್ಲ, ನಿಂತಿಲ್ಲ
ಕೊನೆಯೆಂಬುದು ಕನಸೆಂಬಂತೆ
ನಿತ್ಯ ಹರಣ; ನಿತ್ಯ ಮರಣ
ಕೊನೆಯಿಲ್ಲವೀ ಕದನಕೆ
ನಿಲ್ಲದು ಈ ಕದನ
ಮನದೊಳಗೆ ನಿತ್ಯ ನಿರಂತರ;

ಏಕೆ ನೆನಪಾಗುತಿಹೆ ?

ಏಕೆ ನೆನಪಾಗುತಿಹೆ ಇಂದು
ಇಷ್ಟು ದಿನವೂ ಇಲ್ಲದ ನೆನಪು
ಇಂದೇಕೆ ಕಾಡುತಿದೆ ಬಿಡದೆ ನನ್ನನು;

ಕಣ್ಣುಗಳು ತವಕಿಸುತಿದೆ
ನಿನ್ನ ಕಾಣುವ ಬಯಕೆಯಿಂದೆ
ಹೃದಯ ಬಾಯಾರಿದೆ
ನಿನ್ನ ಒಲವ ವಿರಹದಿಂದೆ;

ಹೋದವನು ಹೋದೆ ಕಣ್ಣು ತಪ್ಪಿಸಿ
ವಿಷಯಗಳ ಸುಳಿವಿಲ್ಲ ಬಾರದೆ
ವಿರಹದಿ ಕೋಪಾಗ್ನಿಗೆ ಬಲಿಯಾದೆ
ಮುರುಟಿದ ಬಯಕೆಗಳ ಸಮಾಧಿ ಮಾಡಿದೆ;

ಇಂದೇಕೆ ಕಾಡುತಿಹೆ ಬಿಡದೆ?
ಬದುಕಿಹ ಸುಳಿವಿಲ್ಲ
ಬರುವ ಮುನ್ಸೂಚನೆಯೂ ಇಲ್ಲ
ಸುಖಾಸುಮ್ಮನೆ ಮನದಲಿ ಬಂದು ನೆಮ್ಮದಿ ಕೆಡಿಸಿಹೆ:

ಏಕೆ ನೆನಪಾಗುತಿಹೆ ಇಂದು
ಇಷ್ಟು ದಿನವೂ ಇಲ್ಲದ ನೆನಪು
ಇಂದೇಕೆ ಕಾಡುತಿದೆ ಬಿಡದೆ ನನ್ನನು

ಕವಿ ನಿಮಿಷ

ಎಷ್ಟು ದಿನವಾಯಿತೋ ಹೀಗೆ ಏಕಾಂಗಿಯಾಗಿ ಕುಳಿತು
ದೂರದ ಪಶ್ಚಮದಲ್ಲಿ ಸೂರ್ಯ ಬಣ್ಣ ಚೆಲ್ಲಿ ಹೊರಟಿದ್ದಾನೆ
ಆಗಸದಲ್ಲಿ ನೂರು ರಂಗೋಲಿಯ ಚಿತ್ತಾರ;
ಮೋಡಗಳ ಬಳಸಿ ಕಲೆಗಾರ ಹೇಳಹೊರಡಿದ್ದಾನೆ ನೂರು ಕಥೆ,ವ್ಯಥೆ;
ಮನದ ನೂರು ವ್ಯಥೆಯ ಮರೆತು ತಲ್ಲೀನನಾಗಿದ್ದೇನೆ ಅಚ್ಚರಿಯಿಂದಲೇ;
ಇದು ಕೆಲವೇ ನಿಮಿಷಗಳ ರಸದೌತಣ, ಇದೇ ರಸಗವಳ ಮನಸಿಗೆ, ಕವಿ ರಸ ನಿಮಿಷ;
ಮನದಲ್ಲಿ ಚಿತ್ತಾರ ಮೂಡುವ ಮೊದಲೇ ಮಾಯವಾಯಿತು,ಮನಸ್ಸು ಪ್ರಶಾಂತವಾಯಿತು

ಜಿಗುಪ್ಸೆ

ತಲೆಯ ಮೇಲೆ ತೂಗುಗತ್ತಿ
ಸಾವಿನ ಭಯ ಮನದಲ್ಲಿ ಆವರಿಸಿದೆ
ನೇಣುಗಂಬ ಏರಿದವನಿಗೆ,
ಮುಕ್ತಿ ಸಿಗುವುದೆಂಬ ಸಂತೋಷ;
ನೇಣು ಹಾಕಿವವನೇ ರಜೆ ತೆಗೆದುಕೊಂಡರೆ
ಸಂತಸ ಪಡಬೇಕೋ? ಇಲ್ಲ ಕೈ ಕೈ ಹಿಸುಕಿಕೊಳ್ಳಬೇಕೋ?
ನಿಟ್ಟುಸಿರಂತೂ ಬಿಟ್ಟಿರುತ್ತಾನೆ ಬೇಸರಿಸಿ;
ಜಿಗುಪ್ಸೆ ಮನೆಮಾಡಿರುತ್ತೆ ಸಾವು ಮುಂದೆ ಹೋದರೆ
ಜೊತೆಯಲ್ಲಿದ್ದವರಿಗೂ, ಜೀವನೋವ ಹೊತ್ತಿರುವವರಿಗೂ
ಆದರೂ ಅನುಕ್ಷಣದ ಭಯದ ಜೀವನ ವಾಕರಿಸುತ್ತದೆ
ಮುಂದಿರುವ ರಸಗವಳವೂ ಹಳಸಿದ ಊಟವೇ ಆಗಿರುತ್ತೆ


ಇಂದಾಯಿತು, ಮುಂದೇನು?

ಇಂದಾಯಿತು, ಮುಂದೇನು?
ಅದೇ ಹೆಜ್ಜೆಗಳನ್ನೇ ಇಡುತ್ತಿದ್ದೇನೆ
ಅಡಿಯಿಡಲು ಬೇಸರವಿದೆ
ಹೊಸತನವಿಲ್ಲ ಯಾಂತ್ರಿಕತೆಗೆ ಜೋತುಬಿದ್ದಿದ್ದೇನೆ

ಆಯಿತು, ಎಲ್ಲವೂ ಆಯಿತು
ಮನವ ಶೋಧಿಸಿದ್ದಾಯಿತು
ಹಲವು ವರುಷಗಳ ಕಾಲ ತೊಟ್ಟ
ಮುಖವಾಡ ಕಳಚಿಟ್ಟಾಯಿತು
ಬೆತ್ತಲಾಗಿ ನಿಂತಿಹೆನು ಅಸಹಾಯಕನಾಗಿಹೆನು

ಇಂದಾಯಿತು, ಮುಂದೇನು?
ಕಣ್ಣು ಮುಚ್ಚಿದರೂ ಗೋಚರಿಸುತ್ತಿಲ್ಲ
ಕಣ್ಣು ತೆರೆದರಂತೂ ಕಾಲೆಳವರ
ದಂಡೇ ಕಾಣುತಿದೆ, ಅಸಹ್ಯವಾಗಿದೆ
ಓಡಿಹೋಗೋಣವೆಂದರೂ
ಭೂಮಿ ದುಂಡಾಗಿದೆಯೆಂಬ ಭಯ
ಇಂದಾಯಿತು, ಮುಂದೇನು? ನಾಳೆಗಳ ನಿರೀಕ್ಷಿಸುವುದು ಹೇಗೆ

ಕರಾಳ ದಿನ

ಏಕಿಂತ ದಾಳಿ ಮನದ ಮೇಲೆ
ಮೊದಲೇ ನರಳಿದೆ ಸಣ್ಣದಾಗಿ
ಗಾಯದ ಮೇಲೆ ಬರೆ ಎಳೆದ ಹಾಗೆ
ಮತ್ತೆ ಮತ್ತೆ ಬೀಳುತಿದೆ ಹೊಡೆತ
ಚೇತರಿಕೆ ಕಾಣುವ ಮೊದಲೇ........
ಒಬ್ಬನೇ ಏಕಾಂಗಿಯಾಗಿ
ಸೂಯರ್ಾಸ್ತದ ಸೊಬಗ ಅನುಭವಿಸುವಾಗ
ಧುತ್ತನೆ ಕಾಮರ್ೋಡ ಆವರಿಸಿದಹಾಗೆ
ಹಳೆಯ ನೋವುಗಳೆಲ್ಲಾ ಗರಿಗೆದರಿವೆ
ಸುಂದರ ಸೊಬಗೆನ್ನೆಲ್ಲಾ ನುಂಗಿದೆ
ಕರಾಳ ದಿನಗಳ ನೆನಪಾಗಿ
ಮನವು ನೋವ ಕಡಲಲಿ ಮುಳುಗಿದೆ
ಸಂಕಟ ಪಡುತ್ತಿದ್ದೇನೆ,
ಅಮೂಲ್ಯ ಸಮಯ ವ್ಯರ್ಥ ಮಾಡಿದೆ
ನೋವೆಲ್ಲಾ ಮೋಡವಾಗಿ ಬಾನಿನಲ್ಲಿ ಕರಗಿದೆ
ಮನದ ಚಿಂತೆಯ ಕಂತೆಗಳನ್ನೆಲ್ಲಾ
ಗೋರಿಯೊಳಗೆ ಬಲವಂತವಾಗಿ ಬಚ್ಚಿಟ್ಟಿದ್ದೇನೆ
ಗೆಳೆಯನೇ ನಿನ್ನ ನೆನಪು ಮತ್ತೆ ಮತ್ತೆ ಕಾಡಿದೆ
ಈ ಹೃದಯದಲಿ ನಿನ್ನ ಬಂದಿಸಿರುವೆ
ಎಲ್ಲವೂ ಮುಗಿದ ಅಧ್ಯಾಯ
ಹೊಸ ಅಧ್ಯಾಯ ಪ್ರಾರಂಭಿಸಿರುವೆ......

ಬದಲಾಗು ಮನವೇ......

ವಿಧಿಯಾಟವೋ ಇಲ್ಲ, ನನ್ನ ದೌಭರ್ಾಗ್ಯವೋ?
ತಿರಸ್ಕರಿಸಲ್ಪಟ್ಟಿದ್ದೇನೆ, ನನ್ನ ಸ್ಥಿತಿಗೆ ನಾನೇ ಮರುಕಪಟ್ಟಿದ್ದೇನೆ
ಸಹಾಯಕ್ಕೆ ಕೈಚಾಚಿಹೆನು, ನನ್ನ ರಕ್ಷಿಸುವರಾರು?
ನನ್ನ ವಿಧಿಯ ನಾನೇ ಹಳಿಯುತಿಹೆನು
ಪರರ ಭಾಗ್ಯವು ಎನಗೆ ಬಾರದೇ?
ಅವರ ಚಾಕಚಕ್ಯತೆ, ಚತುರತೆ ಎನಗೇಕಿಲ್ಲ?
ನನ್ನ ಅಂತಃಶಕ್ತಿಯ ಅರಿವೆನಗಿಲ್ಲ
ಹೊರಬರಬೇಕಿದೆ ಈ ಕತ್ತಲಕೂಪದಿಂದ;
ಬದಲಾಗಬೇಕಿದೆ, ಮುಂದೆ ಸಾಗಲು
ಇಲ್ಲಿ ಎಲ್ಲವೂ ಬದಲಾಗುತ್ತಲೇ ಇದೆ;
ಇದ್ದಂಗಿಲ್ಲ ಇಲ್ಲಿ ಎಲ್ಲವೂ
ಬದಲಾವಣೆಗೆ ತೆರೆದು ಕೋ ಮನವೇ
ಬದಲಾಗು, ಬದಲಾಗು ಮನವೇ......

ಸತ್ತ

ಅವನು ಚಂದ್ರನ ಕೆಳಗೆ ಮಲಗಿದ
ಸೂರ್ಯನ ಕೆಳಗೆ ಅಂಡಲೆದ
ಬಾಳಿ ಬದುಕಿದ ಏನೋ ಸಾಧಿಸುವವನಂತೆ
ಸತ್ತ ಏನನ್ನೋ ಸಾಧಿಸದೆ!!

ನನ್ನ ಪಯಣ

ಇನ್ನೂ ಮುಗಿದಿಲ್ಲ ನನ್ನ ಪಯಣ
ಹಿಂತಿರುಗುವ ಮಾತೆಲ್ಲಿ?
ಗುರಿಯ ಹಾದಿಯಲ್ಲಿ ನಾನು
ಹಿಂತಿರುಗಲೆಂತು ಮುರಿದು ಮಾತು;
ಗುರಿಯೊಂದು ಕಡೆ ಕರೆಯುತಿಹುದು
ಸಂಕಟವೊಂದು ಕಡೆ ಸೆಳೆಯುತಿಹುದು
ಮಾತುಗಳಿಂದ ಮನವ ಮುರಿದವರಾರು?
ಈಗ ಪ್ರೀತಿ ಆಕಾಶದಿಂದ ಉದುರಿತೋ!
ಹಗಲು-ರಾತ್ರಿ ಎನ್ನದೆ ನಡೆದಿಹೆನು
ಈಗೇಕೆ ಮುರಿಯಲಿ ನನ್ನ ಪಯಣ?
ಇನ್ನು ಕೆಲವೇ ದೂರ ನನ್ನ ಗುರಿ
ಗುರಿ ಸೇರಿ ಆನಂದಿಸಲೋ ಇಲ್ಲ
ನಿಮ್ಮ ಮಾತಿಗೆ ಬೆಲೆಗೊಟ್ಟು
ಮತ್ತೆ ನಿಮ್ಮ ಮಾತಿಗೆ ಬಲಿಯಾಗಲೇ?
ಈ ಧ್ವಂಧ್ವವೇ ಪರೀಕ್ಷೆ
ಧ್ವಂಧ್ವವ ಮೀರುವುದೇ ಗೆಲುವು
ಕುರುಡಾಗಬೇಕು!
ಕಿವುಡಾಗಬೇಕು!
ನಡೆಯಬೇಕು ಗುರಿಯ ಕಡೆಗೆ
ಆನಂದಿಸಬೇಕು ಒಲವಿಗೆ//

ನಿನ್ನದೇ ಧ್ಯಾನ

ಗೊಂದಲ ಮನದಲ್ಲಿ
ನಿದ್ರಾದೇವಿ ಸೆಳೆಯುತಿಹಳು
ಜೀವನ ಯಾತ್ರೆಯ ಪಯಣ
ಆಲಸ್ಯ,ಯಾಂತ್ರಿಕತೆ ಬಳಲಿಸಿದೆ
ಶಾಂತಿ,ಶಾಂತಿ,ವಿಶ್ರಾಂತಿ
ಹೃದಯದ ಒಳಗಣ್ಣು ತೆರೆದಿದೆ
ನಿತ್ಯಯಾತ್ರೆಗೆ ಸನ್ನದ್ಧ ನಿನ್ನಲ್ಲಿಗೆ
ಬೆರಗುಗಣ್ಣುಗಳ ತೆರೆದೆ
ಕತ್ತಲ ತೂರಿ ಬೆಳಕ ಬಾಗಿಲ ತೆರೆದೆ
ಕ್ಷಣ-ಕ್ಷಣದಿ ಅಂಧಕಾರ ಆವರಿಸಿ
ಮನದಲ್ಲಿ ಭಯದ ವಾತಾವರಣ ಮೂಡಿದೆ;
ಕಲ್ಪನಾವಿಲಾಸದಲ್ಲಿ ನಿನ್ನದೇ ಚಿತ್ರ ಮನದ ತೆರೆಯಲ್ಲಿ
ಕಾರ್ಗತ್ತಲಿನಲ್ಲಿ ಹೊಳೆವ ವಜ್ರದಂತೆ
ನಿನ್ನ ನೆನಪು ಮನದಲ್ಲಿ
ಆ ಕತ್ತಲ ರಾತ್ರಿಯ ಸೊಬಗ ಹೆಚ್ಚಿಸಿದೆ
ಹೇಗಾದರೂ ಸರಿಯೇ....
ವಿಶ್ರಾಂತಿ ಇಲ್ಲ ಎನಗೆ.....
ಮುಂಜಾನೆ ಕಾಲುಗಳಿಗೆ.....
ರಾತ್ರಿ ಕಣ್ಣುಗಳಿಗೆ....
ದಿನವೂ, ರಾತ್ರಿಯೂ ಒಂದೇ
ನಿನ್ನದೇ ಧ್ಯಾನ, ನಿನ್ನದೇ ಧ್ಯಾನ//

ಕೆಲಸವಾದ ನಂತರ......

ನನ್ನ ಮನೆಯ ತೊರೆದಾಯಿತು
ತಿಂಗಳೇ ಕಳೆದಿರಬಹುದು
ಹೊಸ ಮನೆಯ ತುಂಬಿಯಾಯಿತು
ಪರಕೀಯತೆ ಕಾಡದಿರಬಹುದೇ?
ನನ್ನವರೆನಿಸಿಕೊಂಡವರಿಂದಲೇ ತಿರಸ್ಕಾರಕ್ಕೊಳಗಾದೆ
ಆಶ್ಚರ್ಯವೇನಿಲ್ಲ ಅದರಲಿ,
ಕೆಲಸವಾದ ನಂತರ ಬಡಗಿಗೇನು ಕೆಲಸ!
ಇವರು ಯಾರೋ?
ನನ್ನ ಅವರವನೆಂದು ಒಪ್ಪಿಕೊಂಡಾರೇ?
ಹೊಸತನ, ಹೊಸಹೆಜ್ಜೆ ಎಡವಬಹುದೆನ್ನಿ
ಅಂತರ ಜಾಸ್ತಿಯಾಗಲು ಕಾರಣಬೇಕೇ?
ಉಪ್ಪುತಿಂದ ಮೇಲೆ ಬಾಯಾರದೇ?
ತಪ್ಪು-ಒಪ್ಪುಗಳ ತಿಳಿದವರಾರು?
ಕಲ್ಲು-ಮುಳ್ಳು ಚುಚ್ಚಿಯಾಗಿದೆ
ನೋವ ನುಂಗಿಯಾಗಿದೆ;
ಹಿಂದೆ ಹೋಗುವ ಮಾತೇಯಿಲ್ಲ;
ಬಂದದ್ದು ಬರಲಿ ಹೆಜ್ಜೆ ಮುಂದಿಟ್ಟಾಗಿದೆ
ಸೋಲೋ-ಗೆಲುವೋ ಕಾಲವೇ ನಿರ್ಣಯಿಸಲಿ
ಮನವು ಧೃಡತೆಯಿಂದಿರಲಿ
ಕಲಿಕೆಯೊಂದೇ ಗುರಿಯಾಗಲಿ//

ಗೆಳೆತನ

ಓ ಗೆಳೆಯನೇ! ನೀ ನನ್ನ ಪ್ರೀತಿಯ ಗುರುತು
ನಿನಗಾಗಿಯೇ ಈ ನನ್ನ ಗೆಳೆತನವ ಮುಡಿಪಾಗಿಟ್ಟಿರುವೆ
ನನ್ನ ಹೃದಯದೊಳಗಡಗಿರುವ ಪ್ರೀತಿಯೆಲ್ಲವನ್ನೂ
ಈ ಕವಿತೆಯೊಳಡಗಿಸಿರುವೆ ನಿನಗಾಗಿ;
ಇದು ಗೆಳೆತನದ ಧ್ಯೋತಕವಾಗಿ, ತೋರಿಕೆಗಾಗಿಯಲ್ಲ ನೀ ತಿಳಿ;
ಹೃದಯ ಚಡಪಡಿಸುತಿಹುದು, ಪದಗಳಿಗಾಗಿ ತಡಕಾಡಿದಾಗ;
ನಿನಗೆ ಒಪ್ಪಿಗೆಯೇ ಈ ನನ್ನ ಕವಿತೆ?
ನನ್ನ ವಿಧಿಲಿಖಿತದೊಳಗೇನು ಬರೆದಿದೆಯೋ?
ನಕ್ಷತ್ರಗಳ ಗುಣಿಸಿ ಹೇಳುವವರಿಲ್ಲ
ಲೆಕ್ಕ ತಪ್ಪಾದರೆ ನನ್ನದೇನು ತಪ್ಪು?
ಎಲ್ಲವನ್ನೂ ಬಲ್ಲ ನೀನು ನನ್ನ ಗೆಳೆತನ ಒಪ್ಪಿಕೋ
ಈ ಪ್ರೀತಿಯ ಕವನವ ಸರ್ಮಪಿಸಿಕೋ!/

ಸತೈವೋ?,ಭ್ರಮೆಯೋ?

ನನ್ನ ಕಣ್ಣುಗಳ ನಾನೇ ನಂಬಲಿಲ್ಲ,
ಯಾರನ್ನು ನೋಡುತ್ತಿದ್ದೇನೆ?
ಸತೈವೋ?,ಭ್ರಮೆಯೋ?, ಅಯೋಮಯವೋ?
ಕನ್ನಡಿಯೊಳಗೆ ಕಂಡದ್ದು ಯಾರನ್ನು?
ಅದು ನಾನೇ? ಅಥವಾ ಬೇರಾರು?
ಮನದಲ್ಲೇ ಆತಂಕ ಮೂಡಿದೆ
ಬಿಳಿ ಕೂದಲಿನ ತಲೆ,
ಬಿಳಿ ಜುಂಜಿನಂತ ಗಡ್ಡ;
ಸುಕ್ಕುಗಟ್ಟದ ಚರ್ಮ;
ಕೃಶಗೊಂಡ ನಿಶಕ್ತಿಯ ದೇಹ;
ನಿದ್ದೆಕಾಣದ ಕಂಗಳು;
ಇಂದು ಕಾಣುತ್ತಿರುವುದೇನು?
ಸಾವಿನ ಮುನ್ಸೂಚನೆಯೋ?
ಮತ್ತೇನಿದು? ಕಾಮರ್ೋಡ ತಂದ ಕಗ್ಗತ್ತಲು!
ಸೌಂದರ್ಯವೆಲ್ಲಾ ನಶಿಸಿದೆ
ಹೃದಯವೊಂದೇ ಚಿರತಾರುಣ್ಯದಿಲ್ಲಿದೆ!
ನಿನ್ನ ಮೇಲಿನ ಪ್ರೀತಿ ಈಗಷ್ಟೇ ಚಿಗುರೊಡೆದಿದೆಯಷ್ಟೇ
ಕಾಲವ್ಯಯ ಮಾಡದಿರು
ಸದಾ ಮನವ ಪ್ರೀತಿಯಲ್ಲೇ ತೊಡಗಿಸು
ನೋಡು ಆಗ ಚಿರಯೌವ್ವನ ನಿನ್ನದೇ....

ಕಾಲಾತೀತ

ಬಿಸಿಲಬೇಗೆಗೆ ನಿನ್ನ ಹೋಲಿಸಲೇ?
ನೀನು ಬಲು ಚಂದ!
ಗಡಸು ಗಾಳಿ,
ಚೈತ್ರದ ಹೂ ಚಿಗುರುಗಳ ಮೇಲೆಯೇ ಕಣ್ಣು!
ಎಚ್ಚರ ತಪ್ಪಿದರೆ ಅಯೋಮಯ,
ಬೇಸಿಗೆಯ ಬಿಸಿ ಅಸಹನೀಯ;
ಸುಂದರವಾದುದೆಲ್ಲಾ ಬಳಲುವುದು
ಕ್ಷಣಿಕವಾದರೂ ತೆವಳಬೇಕು
ಒಳ ಸೌಂದರ್ಯವ ಕಾಯ್ದಿರಿಸಿಕೋ
ಅದಕ್ಕೆ ಸಾವಿಲ್ಲ;
ಏಕಾಂಗಿತನಕ್ಕೆ ಬಳಲುವುದಿಲ್ಲ;
ಸಾವು ಬಂದರೂ ಸೌಂದರ್ಯಕ್ಕೆ ಸಾವಿಲ್ಲ;
ಕಾಲಾತೀತವೂ, ಸೌಂದರ್ಯವೂ ಒಂದಾದರೆ
ಅದೇ ಸಾರ್ಥಕತೆಯೂ.....
ಹೆದರದಿರು ಸಾವಿಗೆ,
ಅಹಂಕಾರಪಡದಿರು ನಿನ್ನ ಸೌಂದರ್ಯಕೆ;
ಒಳ ಮನದ ಕದವ ತೆರೆದು
ಪ್ರಕೃತಿಯ ಸೌಂದರ್ಯವ ಆಸ್ವಾದಿಸು//

ಮುನ್ಸೂಚನೆ

ಎಂದು ಮೇಲೆರಗುವುವೋ ಕಾಣದ ವಿಧಿಯಾಲಾಪ
ಮುನ್ಸೂಚನೆ ಕಾಣದು, ಕಣ್ಣ ಮುಂದೆ ಬಚ್ಚಿಟ್ಟಹಾಗೆ
ಕಣ್ಣೇ ಕುರುಡೋ ಇಲ್ಲ,ಬುದ್ಧಿಯೇ ಕುರುಡೋ!
ಬಲ್ಲವರಾರು? ಕಂಡವರಾರು?
ಮನಸ್ಸು ಮಾತ್ರ ಜರ್ಝರಿತವಾಗಿದೆ
ಇರಲಾರದೇ! ಓಡಿಹೋಗಲಾಗದೆ!
ಬಂದದ್ದು ಬರಲೆಂಬ ನಿಲರ್ಿಪ್ತತೆ
ಮನದಲ್ಲಿ ಮನೆ ಮಾಡಿದೆ
ಹೆಜ್ಜೆ,ಹೆಜ್ಜೆಗೂ ಕಾತರತೆಯಿದೆ
ಆತಂಕ, ಆಶ್ಚರ್ಯ.....
ಬಿಸಿಲು-ಮಳೆಯ ರೀತಿ ಆಹ್ಲಾದಕರವಾಗಿದೆ/

ಬಚ್ಚಿಟ್ಟ ಭಾವ

ಯಾರು ನೆನಪಿಡುವರು?
ಮುಂದೆ ಕಾಲ ಉರುಳುತಿರುವುದ
ಯಾರು ನಂಬುವರು?
ಈ ನನ್ನ ಪದಗಳ......
ಗೊತ್ತಿದೆಯಾದರೂ ನೋವಿಲ್ಲ
ಗೋರಿಯೊಳಗೆ ಬಚ್ಚಿಟ್ಟ ಭಾವಗಳಂತೆ
ಯಾರೂ ಬಗೆದು ನೋಡುವರಿಲ್ಲ
ಹಳೆಯದೆಲ್ಲವೂ ಇತಿಹಾಸ
ಹೊಸತೆಲ್ಲವೂ ಅನ್ವೇಷಣೆ
ಹಿಂದಿನದೆಲ್ಲವೂ ಕಥೆಗಳ ಗಂಟು
ನಂಬುವರಾರು? ಗೊಡ್ಡು ವೇದಾಂತ;
ನಡೆಯುತ್ತಿರುವರು ಸತ್ಯ ಹರಿಶ್ಚಂದ್ರರು
ಮಾತಿಗೆ ಬೆಲೆಯಿಲ್ಲ, ಬರೀ ಒಣ ವೇದಾಂತ;
ಎಲ್ಲರೂ ಚಪ್ಪಾಳೆ ತಟ್ಟುವವರೇ!
ತಪ್ಪೆಂದು ಹೇಳಬೇಕಾದವರು ತೆಪ್ಪಗಿಹರು
ಮೂಕರಾಗಿ, ನಿಜವಲ್ಲ ಬರೀ ನಾಟಕ;
ಮುನ್ನಡೆಯುತಿಹುದು ಕಾಲ ಗಹಗಹಿಸಿ
ಮುಂದೆ ಕಾದಿದೆ....
ಮುಂದೆ ಕಾದಿದೆ...
ಕಾಣದ ರುದ್ರನರ್ತನ.......

ತೀರದ ಭರವಸೆ

ಬೆಳಗೆಂದರೆ ಅಚ್ಚರಿ
ಅಮೋಘ ಅನುಭವದ ರಸಸಮಯ
ಹಾರುವ ಹಕ್ಕಿಗಳ ಕಂಡಾಗ
ಮನಸ್ಸು ಹಗುರ,ಅತ್ಯುತ್ಸಾಹ
ಕಾಯುತ್ತಿದುವ ರಣಹದ್ದುಗಳ ಕಂಡಾಗ
ಮನಸ್ಸು ಅಯೋಮಯ,ಭಯದ ಕೂಪ
ಪಾರಾಗುವುದೆಂತೋ?......
ಪ್ರಕೃತಿ ನಿಯಮ ಮೀರಿದವರಾರು?
ಇಂದೇನೋ ಶಕ್ತಿಯಿಂದ ಪಾರಾಗಬಹುದು
ಆದರೆ ನಾಳೆ, ನಾಳೆಗಳ ನಂತರ
ನಿಶಕ್ತಿಯು ಕಾಡದೇ?...
ಬಲಿಯಾಗುವುದು ನಿಶ್ಚಿತವೇ!
ದಾರಿಯಾವುದು?
ರಕ್ಷಿಸುವವರಾರು?
ಆದರೂ ಬೆಳಗೆಂದರೆ ಅಚ್ಚರಿ
ನಾಳೆ,ನಾಳೆಗಳ ತೀರದ ಭರವಸೆ//

ನಿನ್ನೊಳು ನಾನು

ಓಹ್! ಕನ್ನಡಿಯೇ,
ನಿನ್ನೊಳು ನಾನು ಹುರುಪಿನಿಂದಿರುವೆ
ಭಾಹ್ಯದ ಈ ದೇಹದಲ್ಲಿ
ಚರ್ಮವೆಲ್ಲಾ ಸುಕ್ಕುಗಟ್ಟಿದೆ
ಮನಸು ಮಾತ್ರ ಅರಳುವ ಮಲ್ಲಿಗೆಯೇ!
ನಿನ್ನೊಳ ದೇಹದಲ್ಲಿದೆ
ನನ್ನ ಹರೆಯದ ಹೃದಯ ಚೈತನ್ಯದಿ
ನಿನ್ನಯ ತರುಣ ಹೃದಯ
ನನ್ನೊಳು ನೆಲೆಸಿದೆ ಹುರುಪಿನಲಿ
ತಿಳಿದಿದೆ ನಾನು ನಿನ್ನ ಮೊದಲು
ಕೊನೆಯುಸಿರೆಳೆಯುವೆ;
ನಾ ಮುಗಿದ ಕಥೆಯಾದರೂ
ನೆನಪಿರಲಿ ನನ್ನಯ ಹೃದಯಗಾನ;
ಮರೆತು ನನ್ನ ಹೃದಯವ ಕೊಲ್ಲದಿರು
ಓ! ಕನ್ನಡಿಯೇ!, ಓ ಕನ್ನಡಿಯೇ!
ನಿನ್ನೊಳ ನಾನು ಜೀವಂತವಾಗಿರುವೆ
ನಿನ್ನ ಹೃದಯವ ಪಡೆದು ಸಂತಸದಿಂದಿರುವೆ//

ಹೊಸತನಕಿದೋ ಸ್ವಾಗತ

ನಾನು ಅವರಂತಲ್ಲ
ಮೋಹ,ವ್ಯಾಮೋಹಗಳಿಗೆ ಒಳಗಾದವನಲ್ಲ
ಬಯಕೆ,ಆಮೀಷಗಳಿಗೆ ಬಲಿಯಾದವನಲ್ಲ
ಸೌಂದರ್ಯ,ಸಂಪತ್ತುಗಳಿಗೆ ಕತ್ತುಕೊಟ್ಟವನಲ್ಲ
ಓತ-ಪ್ರೋತಗಳಿಗೆ ಓಗೊಡುವವನಲ್ಲ
ಆದರೂ ಕೆಲವೊಮ್ಮೆ ನನ್ನದಲ್ಲದ ತಪ್ಪುಗಳಿಗೆ;
ಟೀಕೆಗಳಿಗೆ ತೆರೆದುಕೊಂಡವನು;
ಅನುಭವಗಳಿಗೆ ತೆರೆದ ಹೃದಯದವನು;
ಎಲ್ಲಾ ನಿಜ ಅನುಭವಗಳಿಗಿದೋ ಸ್ವಾಗತ,
ಮನವ ,ಹೃದಯವ ಕಾಪಿಡುವ
ಸಂಗತಿಗಳಿಗಿದೋ ಸ್ವಾಗತ;
ಬೆಳಕಾಗಿ,ಹೊಂಗಿರಣವ ಸೂಸುವ
ಹೊಸತನಕಿದೋ ಸ್ವಾಗತ;

ಓ ಕಾಲವೇ! ಓ ಕಾಲವೇ!

ಓ ಕಾಲವೇ! ಓ ಕಾಲವೇ!
ಸಮಯವು ಸಿಂಹದ ಪಂಜುಗಳನ್ನೂ
ನಿಶಕ್ತಿಯಾಗಿಸುವುದು
ಹುಟ್ಟಿದೆಲ್ಲವುಗಳನ್ನೂ ಮಣ್ಣಿನ
ಗೋರಿಯೊಳಗೆ ಅಡಗಿಸಿಕೊಳ್ಳವುದು
ಅಹಂಕರದಿಂದ ಘಜೆ9ಸಿದವರೂ
ಕೊನೆಯಲ್ಲಿ ಮಣ್ಣಾಗುವರು
ಮಣ್ಣಿಂದ ಮೇಲೆದ್ದು ನಲಿದವರೂ
ಕೊನೆಯಲ್ಲಿ ಮಣ್ಣಾಗುವರು
ಸಂತೋಷವೋ? ದéುಖವೋ?
ಕಾಲವೇ ನಿಧ9ರಿಸುವುದು
ಏನು ಸಂತೋಷವೋ ಅದನ್ನೇ ಮಾಡು
ಸಮಯ ಕಾದಿಹುದು
ಎಲ್ಲವನ್ನೂ ನುಂಗುವುದು
ಸೌಂದರ್ಯವೋ? ಭಯಾನಕವೋ?
ಈ ಮಣ್ಣಲ್ಲೇ ಹುದುಗಿಹುದು
ಯೌವನ, ಸುಕ್ಕುಗಟ್ಟದ ಚಮ9
ಕಾಲವೇ ನಿನ್ನ ನಡೆಯು
ಅನುಭವಿಸು ಕಷ್ಟವೋ? ಸುಖವೋ?
ಕಾಲನಿಗೆ ನಮಿಸು
ಹೆಜ್ಜೆಯ ಮುಂದಿಡು
ಹೆದರದೆ ಮುನ್ನಡೆ/

ಗ್ರಹಣ

ಅದೋ ನೋಡಲ್ಲಿ ಬಾನಿನಲ್ಲಿ
ತೇಲುತಿಹ ತಿಂಗಳನ ರಾಹುವೆಂಬ
ತಿಮಿರವು ಆಕ್ರಮಿಸುತಿದೆ
ನಮ್ಮ ಮನವನೂ ಕಷ್ಟಗಳ
ತಿಮಿರವು ಆಕ್ರಮಿಸಲು
ನಿದ್ದೆ ಬಾರದು,ಊಟ ಸೇರದು
ಸಾಂಕೇತಿಕವಾಗಿ ನಮ್ಮವರು
ಕಷ್ಟದಲ್ಲಿ ತೊಳಲುವಾಗ 
ನಾವು ಅವರ ಕಷ್ಟದಲ್ಲಿ ಭಾಗಿಯಾದೆವೆಂಬ ಸಮಾಧಾನ
ಕಷ್ಟಗಳು ಕಳೆಯೆ ಗ್ರಹಣ ಕಳೆದಂತೆ
ಸಂಭ್ರಮಕೆ ಕೊನೆಯೆಲ್ಲಿ
ಅನುಭವಕೆ ಹೃದಯ ಸ್ಪಂದನವಷ್ಟೆ//


ದೇವ ನಿನಗೆ ನಮಸ್ಕಾರ

ದೇವ ನಿನಗೆ ನಮಸ್ಕಾರ

ತಾಯಿಯೆಂಬ ಸ್ವರ್ಗವನೇ 
ಧರೆಯಲ್ಲಿ ನನಗೆ ನೀಡಿದ್ದಕ್ಕೆ
ಮೊದಲ ಗುರುವ ನೀಡಿದ್ದಕ್ಕೆ
ಕರುಣೆಯ ಕಡಲ ಕೊಟ್ಟಿದ್ದಕ್ಕೆ
ಮಮತೆಯ ಮಡಿಲ ನೀಡಿದ್ದಕ್ಕೆ
ಕುಟುಂಬದ ಕಣ್ಣ ನೀಡಿದ್ದಕ್ಕೆ
ಮನದ ಶಾಂತತೆಯ ಕಡಲ ನೀಡಿದ್ದಕ್ಕೆ\\

ಮೊನಚು

ನೋವಾಗಿದೆ ಮನಸಿಗೆ
ಮುಳ್ಳು ಚುಚ್ಚದೇನೆ
ಮೊನಚು ಮಾತು ಸಾಕಲ್ಲವೇ
ನೋವಾಗಲು

ಈ ನೋವಿಗೆ ಔಷಧವಿಲ್ಲವೆಂದು
ಈಗಲೇ ತಿಳಿದಿದ್ದು
ಆ ರೋಗಕ್ಕೆ ಮದ್ದೇಯಿಲ್ಲವೆಂದು
ಈಗಲೇ ಗೊತ್ತಾಗಿದ್ದು

ಎರಡಕ್ಕೂ ಕಾಲವೇ ಮದ್ದು
ನೆನೆದರೆ ಮತ್ತೆ ನೋವಾಗುವುದು
ಬದುಕಿದ್ದೂ ಶವವಾಗೋಕೆ
ಇಷ್ಟು ಸಾಲದೇ? 
ವಿಷವಿಲ್ಲದೆ  ಸಾಯೋದಕ್ಕೆ
ಇಷ್ಟು ಸಾಲದೇ? 

ಸತ್ತಮಾತು

ನಿನ್ನೆಯೇ ಸತ್ತು ಹೋಯಿತು
ಮನದ ಮಾತುಗಳೆಲ್ಲಾ
ಈಗ ಕೇಳುತಿರುವಿರಿ
ಸತ್ತ ಮೇಲೆ ಮತ್ತೆ ಜೀವ
ಹೇಗೆ ಬಂದೀತು ಹೇಳಿ
ತುಂಬಾ ತಮಾಷೆ ಮಾಡಬೇಡಿ
ಬತ್ತಿಹೋದ ಕಂಗಳಿಂದ
ಕಣ್ಣೀರು ನಿರೀಕ್ಷಿಸಬಹುದೇ?
ಭರವಸೆ ಹೃದಯದಲ್ಲಿರಲಿ
ಒಣ ಬಟ್ಟೆಯಿಂದಲೂ ನೀರು ತೆಗೆಯಬಹುದು

ಮೆಟ್ಟಿಲು

ಹದಿನೆೃದು ವರುಷಗಳಿಂದ
ಮೆಟ್ಟಿಲುಗಳಾಗಿದ್ದೇವೆ:
ಬಹಳ ಮಂದಿಗೆ ಮೇಲೇರಲು
ಸಹಾಯ ಮಾಡುತ್ತಿದ್ದೇವೆ :
ನಾವು ಅವರಿಗಷ್ಟೆ ಸೀಮಿತ
ನಾವೆಂದೂ ಮೇಲೇರಲಾರೆವು:
ನಮ್ಮ ಸಾಧನೆ ಅವರು ಮೇಲೇರುವುದಕಷ್ಟೆ
ನಾವೆಂದೂ ಮೇಲೇರಲಾರೆವು:
ನಮ್ಮ ಸಾಧನೆ ನಮಗೆ ಶೂನ್ಯ ಸಂಪಾದನೆ:
ಇನ್ನೆಷ್ಟು ಮಂದಿಗೆ ಮೆಟ್ಟಿಲಾಗಬೇಕೋ?
ಸಾಧಕರು ಮೇಲೇರುವುದು ಬೇಡವೇ?
ಕತ್ತೆ ಎಂದಾದರೂ ಕುದುರೆಯಾಗಲು ಸಾಧ್ಯವೇ?
ನಾವು ಜೀವವಿರುವ ಮೆಟ್ಟಿಲುಗಳು
ನಿರ್ಜೀವವಾಗುವತ್ತ ನಮ್ಮ ಪಯಣ:

ಸಹಿಸಿಕೋ

 ಓ ಮನಸೇ ಸಹಿಸಿಕೋ ಈ ನೋವನು
ಆ ನೋವೇ ನೀನಾಗಿಬಿಡು,ಛಲ ಬಿಡದೆ
ಕಣ್ಣೀರು ಬತ್ತಿಹೋಗುವ ತನಕ,ಸತತ:
ಒಮ್ಮೆ ನಕ್ಕುಬಿಡು ಕಾಲೆಳೆವ ಜನರ 
ನಡೆಯ ಕಂಡು,ಕಲ್ಲು ಬಂಡೆಯಾಗಿಬಿಡು
ಅವರೇ ಹಣೆಯ ಚಚ್ಚಿಕೊಳ್ಳಲಿ ಬಿಟ್ಟು ಬಿಡು,
ನಿರ್ಲಿಪ್ತನಾಗು,ಪ್ರಾಮಾಣಿಕತೆಯ ಬಿಡದಿರು, 
ನಾಳೆಗಳ ಭರವಸೆಯ ತೊರೆಯದಿರು,
ಕಾಲವೆಂದೂ ನಿಂತ ನೀರಲ್ಲ,ಅಧಿಕಾರ 
ಧರ್ಪವೆಂದೂ ಶಾಶ್ವತವಲ್ಲ,ತಾಳ್ಮೆಯ ಶಕ್ತಿ ನಿನ್ನದಾಗಲಿ

ಬಲಿಪಶು

ಮನವು ನರಳಿದೆ
ರಾತ್ರಿ ಕಗ್ಗತ್ತಲಲ್ಲಿ ಇಳಿದಿದೆ
ನೋವ ಕಣ್ಣೇರು ಜಾರಿದೆ
ಮನದ ಮೇಲೆ ಪ್ರಶ್ನೆಗಳ 
ದಾಳಿ ಮಾಡಿದೆ ನಿಲ್ಲದೆ
ಮನದ ದುಃಖ ಯಾರಿಗೆ ಹೇಳಲಿ?
ಬಲಿಪಶುವಾಗಿಹೆನು
ಬದಲಾಗದ ವ್ಯವಸ್ಥೆಯಲ್ಲಿ:
ಕಡೆಗಣಿಸಲ್ಪಟಿದ್ದೇನೆ
ನನ್ನವರಿಂದಲೇ:
ದನಿಯಿಲ್ಲದವನು ನಾನು
ಮುಖವಾಡ ಧರಿಸಬೇಕಿದೆ
ಬೂಟಾಟಿಕೆಯ ನಾಟಕವಾಡಬೇಕಿದೆ:
ಮನವು ರೋಧಿಸಿದೆ
ನಿದ್ದೆ ಕಾಣದ ಕಂಗಳು ನರಳಿದೆ
ಕಂಗಳು ನರಳಿದ ಮನವ ಸಂತೆೃಸಿದೆ


ಬಾನಿನಲ್ಲಿ

ಬಾನಿನಲ್ಲಿ ತಿಳಿ ಮೋಡ ತೇಲುತಿದೆ,
ಸ್ವತಂತ್ರ ಹಕ್ಕಿಯದು ,ದೇಶ,ಭಾಷೆ
ಗಡಿ ಪರಿದಿಗಳ ಅಡಚಣೆಯಿಲ್ಲವದಕೆ
ತೇಲುತ್ತಾ ಹಾರಾಡುವುದದರ ಕಾಯಕ:
ಒಂಟಿಯಲ್ಲ ಅದು ಹೋದಲೆಲ್ಲಾ
ಸಮಾನ ಮನಸ್ಕರು ಜೊತೆಗೂಡುವರು,
ಮನ ಭಾರವಾದಾಗ ಇಳೆಗಿಳಿಯುವುದು
ಆರದೋ ಕಣ್ಣೀರ ಒರೆಸಲು:
ಮತ್ತೆ ಪಯಣ ಗಿರಿ ಕಂದರಗಳಲ್ಲಿ
ಹರಿಯುತ್ತಾ ಸಾಗುವೆವು ಕಾಣದ ಕಡಲಿನೆಡೆಗೆ ,
ಎಷ್ಟು ದೂರವೋ ಆಯಾಸವಿಲ್ಲ ನಮಗೆ:
ತೇಲುವೆವು,ಹರಿಯುವೆವು,ಮೇಲಕ್ಕೇರಿ ನಲಿಯುವೆವು ,
ಯಾರ ಹಂಗೂಯಿಲ್ಲ
ನಮಗೆ, ನಮಗೆ ನಾವೇ ಸಾಟಿ:

ಮೂರ್ತಭಾವ

ಪ್ರಕೃತಿಯೊಡನೆ ಕಳೆದ ಸಮಯ
ಅಚ್ಚರಿಯ ರಹಸ್ಯಗಳ ಬೆರಗು
ಮೂಕವಿಸ್ಮಿತಗೊಳಿಸುವ 
ಕಲಾವಿದನ ಕೃೆಚಳಕದ ಮೂರ್ತಭಾವ
ನಮ್ಮದೆಂದುಕೊಂಡರೆ ನಮ್ಮದು
ಇಲ್ಲವೆಂದಾದರೆ ಇಲ್ಲ
ಅನುಭವಿಸುವವಗೆ ಗೊತ್ತು
ಕಾಲವೂ ನಿಂತು ಚಲಿಸುವುದೆಂದು//

ಬಚ್ಚಿಟ್ಟ ನೋವುಗಳು

ಬಚ್ಚಿಟ್ಟ ನೋವುಗಳು
ಮನದ ಒಳಗೆ ಕಾಡುತ್ತಿವೆ:
ಹೊರಬರಲಾರದೆ
ಹೇಳಿಕೊಳ್ಳಲಾಗದೆ:
ಕಾರಣ ತಿಳಿಯದೇ ಆದ
ಗೊಂದಲಗಳು 
ಬೇತಾಳದಂತೆ ಕಾಡಿವೆ:
ಮನವು ಬೇಯುತ್ತಿದೆ
ಹಚ್ಚಿದ ಬೆಂಕಿಗೆ ತಳಮಳಿಸಿದೆ
ನಿದ್ದೆ ಬಾರದಂತೆ ಮಾಡಿದೆ:
ಸುಮ್ಮನಿರಲಾರದ ನೋವು
ಮನದ ನೆಮ್ಮದಿಗೆ ಕಿಚ್ಚು ಹಚ್ಚಿದೆ:
ವರುಷಗಳು ಬೇಕು
ಮತ್ತೆ  ಚೇತರಿಸಿಕೊಳ್ಳಲು
ಸಹಿಸಲಾರೆ ಈ ನೋವ:
ಬಚ್ಚಿಟ್ಟು ಕೋ ಓ ನೋವೇ
ಕಣ್ಣುಮುಚ್ಚಾಲೆಯಾಟ ಆಡೋಣ:

ಸು-ಸಮಯವಲ್ಲ

ಇದು ಸು-ಸಮಯವಲ್ಲ ನಿನಗೆ
ನೀ ಬರವುದು ತರವೇ? ಓ ನೆನಪೇ
ಯಾಕಾಗಿ ಕಾಡುವೆ ಕಹಿ ನೆನಪೇ?
ಮನವ ಕಾಡಿ ನೋವ ತರುವೆಯೇಕೆ?

ಹೊಸವರುಷ ಬರುವ ಮುಸ್ಸಂಜೆಯ
ಹೊತ್ತಿನಲಿ ಬೆನ್ನಿಗೆ ಚೂರಿ ಬಿದ್ದಿದೆ
ನೋವು ಮುಗಿಲು ಮುಟ್ಟಿರುವಾಗ
ನೀ ಬರವುದು ತರವೇ? ಓ ನೆನಪೇ

ಆತ್ಮಸ್ಥೆೃರ್ಯವು ವಿಲವಿಲ ನರಳಿದೆ
ನೋವ ಕೇಳುವರಿಲ್ಲ,
ಕಣ್ಣೀರು ಒರೆಸುವ ಕೆೃಗಳೂ ಇಲ್ಲ
ಅಸಹಾಯಕನಾಗಿರುವಾಗ
ನೀ ಬರವುದು ತರವೇ? ಓ ನೆನಪೇ

ತವಕಿಸಿದೆ ಮನ

ತವಕಿಸಿದೆ ಮನ ,
ಮೂಡಣದಂಚಿನಲಿ
ನೆಟ್ಟಿದೆ ಮನ:
ಬೆಳಕಿನ ಹೊಂಬಣ್ಣದ
ನಗುವ ಕಾಣುವ
ತವಕ ಹೆಚ್ಚಿದೆ:
ಮಂಜು ಎಲ್ಲೆಲ್ಲೂ
ಮೊಡದ ಮರೆಯಲ್ಲೇ
ಇಣುಕುತಿಹನು ರವಿ:
ಕಾರ್ಮೋಡಗಳ
ಜೊತೆಯಲಿ ನಡೆಯುತಿದೆ
ಬೆಳಗಿನ ಕಣ್ಣು ಮುಚ್ಚಾಲೆಯಾಟ:
ಮನಸ್ಸು ಮುದಗೊಂಡು
ಹಕ್ಕಿಯಂತೆ ಸಂತಸದಿಂದೆ
ಆಗಸದಲ್ಲಿ ಹಾರಾಡಿದೆ:

ಬೇಯಬೇಕು

ಬೇಯಬೇಕು:
ಕರಗಬೇಕು:
ಹೆಜ್ಜೆಗಳ ಮುಂದಡಿಯಿಡುತ್ತಾ
ನಡೆಯಬೇಕು//

-ವಾಜಪೇಯಿ

ಸ್ವಾತಂತ್ರ

ಗುಲಾಮಗಿರಿಯ ಬೇಡಿ ಕಳಚಿದೆ
ಸ್ವಾತಂತ್ರದ ರೆಕ್ಕೆ ತೆರೆಯುತಿದೆ
ಪ್ರಪಂಚವೇ ಕೇಳಿಸಿಕೋ
ಭಾರತದ ಜಯಘೋಷವ

-ಮನಸ್ ಮದ್ರೆಚ

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...