ನನ್ನ ಮನೆಯ ತೊರೆದಾಯಿತು
ತಿಂಗಳೇ ಕಳೆದಿರಬಹುದು
ಹೊಸ ಮನೆಯ ತುಂಬಿಯಾಯಿತು
ಪರಕೀಯತೆ ಕಾಡದಿರಬಹುದೇ?
ನನ್ನವರೆನಿಸಿಕೊಂಡವರಿಂದಲೇ ತಿರಸ್ಕಾರಕ್ಕೊಳಗಾದೆ
ಆಶ್ಚರ್ಯವೇನಿಲ್ಲ ಅದರಲಿ,
ಕೆಲಸವಾದ ನಂತರ ಬಡಗಿಗೇನು ಕೆಲಸ!
ಇವರು ಯಾರೋ?
ನನ್ನ ಅವರವನೆಂದು ಒಪ್ಪಿಕೊಂಡಾರೇ?
ಹೊಸತನ, ಹೊಸಹೆಜ್ಜೆ ಎಡವಬಹುದೆನ್ನಿ
ಅಂತರ ಜಾಸ್ತಿಯಾಗಲು ಕಾರಣಬೇಕೇ?
ಉಪ್ಪುತಿಂದ ಮೇಲೆ ಬಾಯಾರದೇ?
ತಪ್ಪು-ಒಪ್ಪುಗಳ ತಿಳಿದವರಾರು?
ಕಲ್ಲು-ಮುಳ್ಳು ಚುಚ್ಚಿಯಾಗಿದೆ
ನೋವ ನುಂಗಿಯಾಗಿದೆ;
ಹಿಂದೆ ಹೋಗುವ ಮಾತೇಯಿಲ್ಲ;
ಬಂದದ್ದು ಬರಲಿ ಹೆಜ್ಜೆ ಮುಂದಿಟ್ಟಾಗಿದೆ
ಸೋಲೋ-ಗೆಲುವೋ ಕಾಲವೇ ನಿರ್ಣಯಿಸಲಿ
ಮನವು ಧೃಡತೆಯಿಂದಿರಲಿ
ಕಲಿಕೆಯೊಂದೇ ಗುರಿಯಾಗಲಿ//
Subscribe to:
Post Comments (Atom)
ಅಣುವಿನಿಂದ ಅನಂತದವರೆಗೆ
ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment