ನಡೆದಷ್ಟೂ ದೂರ ಹೋಗುತಿಹುದು
ಎಂದು ಸೇರುವೆನೋ ಗುರಿಯನು?
ದೂರ ದೂರ ಸರಿಯುತಿಹುದು ಕನಸು
ಎಂದು ನೋಡುವೆನೋ ನಿನ್ನನು//
ಭ್ರಮೆಯ ಬೆನ್ನ ಹತ್ತಿಹೆನೇನೋ?
ನಿದ್ದೆ ಜಾರಿಹುದು, ಕಣ್ಣೀರು ಕಣ್ಣಿಂದ
ಎಡರು ತೊಡರು ನಡೆಯುತಿಹೆನು
ಎಂದು ಬೀಳುವೆನೋ! ಕಾಯುತಿಹುದು ನೆಲವು//
ಬಿಸಿಲು ಕುದುರೆ ಏರಿಹನೇನೋ?
ಅಪಹಾಸ್ಯ-ನಿಂದೆಗೆ ಎದೆಯ್ಯೊಡ್ಡಿರುವೆ
ಪಟ್ಟ ನೋವಿಗೆಲ್ಲಾ ಮುಲಾಮಿದೆಯೇ?
ಹರಿದ ಕಣ್ಣೀರಿಗೆ ಬೆಲೆಯುಂಟೆ?
ಮುಂದೆ ಸಾಗುತಿಹೆನು ಎಲ್ಲವ ಹೊತ್ತು
ಹೊತ್ತು ತೀರುತಿದೆ ಇತಿಹಾಸದೆಡೆಗೆ.... //
Saturday, December 8, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment