Saturday, November 24, 2018

ಜಿಗುಪ್ಸೆ

ತಲೆಯ ಮೇಲೆ ತೂಗುಗತ್ತಿ
ಸಾವಿನ ಭಯ ಮನದಲ್ಲಿ ಆವರಿಸಿದೆ
ನೇಣುಗಂಬ ಏರಿದವನಿಗೆ,
ಮುಕ್ತಿ ಸಿಗುವುದೆಂಬ ಸಂತೋಷ;
ನೇಣು ಹಾಕಿವವನೇ ರಜೆ ತೆಗೆದುಕೊಂಡರೆ
ಸಂತಸ ಪಡಬೇಕೋ? ಇಲ್ಲ ಕೈ ಕೈ ಹಿಸುಕಿಕೊಳ್ಳಬೇಕೋ?
ನಿಟ್ಟುಸಿರಂತೂ ಬಿಟ್ಟಿರುತ್ತಾನೆ ಬೇಸರಿಸಿ;
ಜಿಗುಪ್ಸೆ ಮನೆಮಾಡಿರುತ್ತೆ ಸಾವು ಮುಂದೆ ಹೋದರೆ
ಜೊತೆಯಲ್ಲಿದ್ದವರಿಗೂ, ಜೀವನೋವ ಹೊತ್ತಿರುವವರಿಗೂ
ಆದರೂ ಅನುಕ್ಷಣದ ಭಯದ ಜೀವನ ವಾಕರಿಸುತ್ತದೆ
ಮುಂದಿರುವ ರಸಗವಳವೂ ಹಳಸಿದ ಊಟವೇ ಆಗಿರುತ್ತೆ


No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...