Wednesday, January 24, 2018

ಸತ್ತಮಾತು

ನಿನ್ನೆಯೇ ಸತ್ತು ಹೋಯಿತು
ಮನದ ಮಾತುಗಳೆಲ್ಲಾ
ಈಗ ಕೇಳುತಿರುವಿರಿ
ಸತ್ತ ಮೇಲೆ ಮತ್ತೆ ಜೀವ
ಹೇಗೆ ಬಂದೀತು ಹೇಳಿ
ತುಂಬಾ ತಮಾಷೆ ಮಾಡಬೇಡಿ
ಬತ್ತಿಹೋದ ಕಂಗಳಿಂದ
ಕಣ್ಣೀರು ನಿರೀಕ್ಷಿಸಬಹುದೇ?
ಭರವಸೆ ಹೃದಯದಲ್ಲಿರಲಿ
ಒಣ ಬಟ್ಟೆಯಿಂದಲೂ ನೀರು ತೆಗೆಯಬಹುದು

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...