ನಿನ್ನೆಯೇ ಸತ್ತು ಹೋಯಿತು
ಮನದ ಮಾತುಗಳೆಲ್ಲಾ
ಈಗ ಕೇಳುತಿರುವಿರಿ
ಸತ್ತ ಮೇಲೆ ಮತ್ತೆ ಜೀವ
ಹೇಗೆ ಬಂದೀತು ಹೇಳಿ
ತುಂಬಾ ತಮಾಷೆ ಮಾಡಬೇಡಿ
ಬತ್ತಿಹೋದ ಕಂಗಳಿಂದ
ಕಣ್ಣೀರು ನಿರೀಕ್ಷಿಸಬಹುದೇ?
ಭರವಸೆ ಹೃದಯದಲ್ಲಿರಲಿ
ಒಣ ಬಟ್ಟೆಯಿಂದಲೂ ನೀರು ತೆಗೆಯಬಹುದು
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
No comments:
Post a Comment