ಬೆಳಗು

ಕತ್ತಲು ತುಂಬಿದ ಬೆಳಗು ನಾ ಬಲ್ಲೆ
ಮೋಹದಿಂದಲೇ ಅರಳುವ ಹೂ ನಾ ಕಂಡೆ
ಮುದಗೊಂಡ ಮನದ ಅಂತರಂಗ ನಾ ಬಲ್ಲೆ
ಮುೂಡಣದಲ್ಲಿ ಬಣ್ಣಗಳ ಓಕುಳಿಯಾಟವ ನಾ ಕಂಡೆ

ಅಕ್ಷರ

ಅಕ್ಷರಗಳೇ ಅಸ್ತ್ರಗಳು
ಪದಗಳೇ ಪದಾತಿದಳ
ಲೇಖನಿಯೇ ಖಡ್ಗ
ಕವಿತೆಯೇ ಬಂಡಾಯದ ಕಹಳೆ

ಓ ಮನಸೇ, ಓ ಮನಸೇ

ಮನಸೇ ಮನಸೇ
ಏಕೆ ನೆನಪ ಮಾಡುವೆ
ಆ ಕಹಿ ನೋವ
ಮನದ ಶಾಂತಿಯ ಕೆಣಕಿ
ಸಂತೋಷಿಸುವುದು ಸರಿಯೇ?
ಮತ್ತೆ ನೆನಪಾಗಿದೆ
ಮತ್ತೆ ನೆನಪಾಗಿದೆ
ಹಳೆಯ ನೋವುಗಳೆಲ್ಲಾ
 ಒಂದಾಗಿ ಮನದ ಮೇಲೆ
ದಾಳಿ ಮಾಡಿದೆ
ನೆಮ್ಮದಿಯ ಕೆಡಿಸಿವೆ
ರಾತ್ರಿ ನಿದ್ದೆಯ ಕದ್ದೋಯ್ದಿವೆ
ಸಿಹಿಗನಸುಗಳ ಹರಣಮಾಡಿವೆ
ಮತ್ತೆ ನೆನಪಾಗಿವೆ
ಮತ್ತೆ ನೆನಪಾಗಿವೆ
ದಿಕ್ಕು ತೋಚದಂತೆ ಮಾಡಿವೆ
ಕಾಣದ ಕಡಲ ಆಸೆ ಬಿತ್ತಿದೆ
ಓ ಮನಸೇ, ಓ ಮನಸೇ

ಜೀವನವೇ ಏನು ನೀನು?

ಜೀವನವೇ ಏನು ನೀನು?
ಗುಲಾಬಿ ದಳವೋ ಇಲ್ಲ ಮುಳ್ಳೋ?
ನಿರ್ಮಲ ಸರೋವರವೇ?
ಭೋರ್ಗರೆವ ಜಲಪಾತವೇ?
ಕಲ್ಲು ಮುಳ್ಳುಗಳ ಹಾದಿಯೇ?
ಅಂಕು ಡೊಂಕಿಲ್ಲದ ನೇರ ರಸ್ತೆಯೇ?
ನೇರ ಇಲ್ಲ ಕೊಂಕು ನುಡಿಯೋ?
ಕಣ್ಣೀರೋ ಇಲ್ಲ ಆನಂದಭಾಷ್ಪವೋ?
ಸ್ಪಷ್ಟವೋ ಇಲ್ಲ ಅಸ್ಪಷ್ಟ ಚಿತ್ರವೋ?
ಒಂದಂತೂ ನಿಜ ರಹಸ್ಯಗಳ ತೋರಣ
ಅವಕಾಶಗಳ ಸರಮಾಲೆ

ನಾನೇ ಎಲ್ಲಾ

ನಾನೇ ಎಲ್ಲಾ:
ನಾನೇ ಮೊದಲು:
ನಾನು ಅನುಭವಿಸುವುದಕ್ಕೇ ಈ ಜಗವು
ನನ್ನ ನಂತರ ಮಿಕ್ಕವರೆಲ್ಲಾ:
ಇದೇ ಸ್ವಾರ್ಥವೂ,ಇದೇ ಅಹಂಕಾರವೂ
ಕಲಹದ ಬಾಗಿಲು,ಕೊಂಕು ಮಾತಿನ ಈ ತೊಗಲಿಗೆ:
ಅದುಮಿಕೊಂಡರೆ ಒಳಿತು:
ಕೆಡುಕಿಗೆ ದಾರಿ ತೋರದಿರು
ಮತಿಯ ಬಳಸು.

ಸಂಧ್ಯಾಕಾಲ

ಸಾಯಂಕಾಲ ಸಂತಸದ ಬುಗ್ಗೆಯಲ್ಲ
ವೇದನೆ ,ಅಸಹಾಯಕತೆ ನಗುವ ಕಾಲ
ಚೆೃತನ್ಯವ ಹೀರಿ ನರಳಿಸುವ ಕಾಲ
ನೀರವತೆಯ ಮೌನ ಚುಚ್ಚುವ ಕಾಲ
ಬದುಕು ಬೇಸರ ಮೂಡಿ ತೆರೆಯೆಳೆಯುವ ಕಾಲ

ಮರೆಯಾದವರ ನೆವದಲ್ಲಿ
ಮರೆಯಾಗುವವರ ವೇದನೆಯಲ್ಲಿ
ತೆವಳುತ್ತಾ ಕಾಲದೂಡವ ವ್ಯಥೆ
ಕಾಲವೇ ಹೊರೆಯೋ?
ನಾವೇ ಹೊರೆಯೋ?
ಸಂಧಿಗ್ದ ಸ್ಥಿತಿ,ಸಮಾದಿಯ ಕಾಲ

ತಿಥಿ,ಶ್ರಾದ್ಧಗಳು ಒಂದಾದ ಮೇಲೊಂದು
ಹೋಗಲಾರದೆ,ಇರಲೂ ಆಗದೆ
ಸರದಿಯಲ್ಲಿ ನಾನೂ ನಿಂತಿರುವೆ
ನನ್ನ ಸಮಯಕ್ಕಾಗಿ ಕಾಯುತ್ತಾ....
ವ್ಯಥೆಯ ನುಂಗಿ ಹೆಜ್ಜೆ ತಡವರಿಸಿದೆ

ಬಿಕ್ಕಿಬಿಕ್ಕಿ ಅಳುವೇ ನಾಳೆ ಇಲ್ಲವೆಂದು
ಜೀವನವೇ ನಿನ್ನ ಪ್ರೀತಿಸಲಾರೆನೆಂದು
ಗಹಗಹಿಸಿ ನಗುವ ಕಾಲನ ಕರಿ ನೆರಳು
ಆವರಿಸುವ ಮುನ್ನ ಅವಲೋಕನವಿದು
ಕಂತೆಬೊಂತೆಯಾಗಿಹ ರದ್ದಿ ಪುಸ್ತಕವಿದು
ಮುಂದೊದಗುವ ಅವಕಾಶಗಳಿಗೆ
ಪೀಠಿಕೆ,ಮುನ್ನೋಟವಿದು.

ನಾಳೆಗಳು ನನ್ನದಾಗಲಿ

ಸಂಜೆ ಸೂರ್ಯ ಜಾರುತಿಹನು
ಕಣ್ಣ ಅಂಚ್ಚಿಂದ ಕಣ್ಣೀರು ಜಾರಿತು
ಸಮುದ್ರದ ಅಲೆಗಳು ಸಂತೖೆಸಿದವು
ಮಾತು ಹೊರಡದೆ
ಮರಳ ಮೇಲೆ ಗೀಚಿದೆ
ಹೇಳಲಾಗದ ಮಾತುಗಳ
ನೋವು,ಭಯ,ಹಿಂಜರಿಕೆ
ಗಾಳಿ ಬೀಸಲಿ
ಅಲೆಗಳು ದಾಳಿಯಿಡಲಿ
ಹೃದಯದ ಮಾತುಗಳು
ಅವನ ಬಳಿ ತಲುಪಲಿ
ಬೆಂದ ಹೃದಯ ಹಗುರವಾಗಲಿ
ಜೀವನ ಪ್ರೀತಿ ಹೆಚ್ಚಾಗಲಿ
ನಾಳೆಗಳು ನನ್ನದಾಗಲಿ

ದಾರಿ ತೋರೆನಗೆ ಗುರುವೇ

ದಾರಿ ತೋರೆನಗೆ ಗುರುವೇ
ಹೆಜ್ಜೆ ಮುಂದಿಡಲಾರದೆ 
ದಾರಿ ಕಾಣದೆ ತೊಳಲುತ್ತಿರುವೆ
ಅನುದಿನವು ನಿನ್ನ ನೆನೆದು
ಅಡಿಯಿಡುತ್ತಿರುವೆ ದೈರ್ಯದಿ
ಇಂದೇಕೋ ಮನವು ನರಳಿದೆ
ನಿನ್ನ ಕನವರಿಕೆಯೊಂದೇ ಸಾಕಾಗಿದೆ
ಮನದ ತಿಮಿರವ ತೊಡೆದು 
ದಾರಿ ತೋರೆನಗೆ, 
ಅಡಿಗಡಿಗೆ ಚೈತನ್ಯ ನೀಡು
ದಾರಿ ಕಠಿಣ,ನಿನ್ನ ಪ್ರೀತಿಯೊಂದಿರೆ
ಎಲ್ಲವೂ ಸುಗಮ.. ..
ಕರುಣೆಯೊಂದಿರೆ ಎಲ್ಲ ಕಷ್ಟಗಳೂ
ಸಂತೋಷದ ಅನುಭವಗಳೇ....

ನಂಬಿಕೆ

ಎಲ್ಲವೂ ನಮ್ಮ ಜೊತೆಗೇ ಇರುವುದು
ಪರಿಸ್ಥಿತಿ ಬದಲಾಗುವುದು
ನೀನಿಲ್ಲಿ ಮುಖ್ಯ,ನಿನ್ನ ಪಾತ್ರ ನಿರ್ವಹಿಸು
ಪಾಠಗಳ ಕಲಿಯುತ್ತಲೇ
ನಾವಿಲ್ಲಿ ಬೆಳೆಯಬೇಕು
ನಂಬಿಕೆ ಇರಲಿ,ನಂಬಿಕೆ ಬರಲಿ
ಗೆಲ್ಲುವೆವು,ಗೆದ್ದೇ ಗೆಲ್ಲುವೆವು
ಆ ದಿನ ಮುಂದಿದೆ
ತಾಳ್ಮೆಯ ಶಕ್ತಿ ನಿನ್ನಲ್ಲಿರಲಿ
ನಿಲ್ಲದೇ ಮುಂದಿಡು ಹೆಜ್ಜೆ
ಎಲ್ಲವ ಸಂತೋಷದಿ ಅನುಭವಿಸುತಾ...

ಒಲವು

ಬಾ ಜೊತೆಯಾಗಿ ಹೆಜ್ಜೆಹಾಕೋಣ
ಕೋಮಲ ಕೈಗಳಿಂದ ಕೈಹಿಡಿ
ನೂರು ಕಥೆಗಳ ಕೇಳುವ ತವಕ
ಮನದಲ್ಲೇನೋ ಮನೆಮಾಡಿದೆ ಪುಲಕ

ಮಾತುಗಳನ್ನಷ್ಟೇ ಕೇಳಬೇಕೆನಿಸಿದೆ
ಮಾತುಗಳ ಹಿಂದಿದೆ ಕಾಣದ ನೋವ ಕಡಲು
ಸವೆದ ಹಾದಿಯ ದಣಿವಿಲ್ಲದೆ ನಡೆದೆವು
ನೀ ಜೊತೆಯಿರಲದು ಅಮೃತಗಳಿಗೆ

ಮಾತುಗಳ ಮೇಲೆಯೇ ಗಮನ
ಎಷ್ಟು ಸುಂದರ ಮಾತುಗಳು
ರಾತ್ರಿಯ ನಿದ್ದೆಯಲ್ಲೂ ಮಾತಿನ ಒನಪು
ನೋವುಗಳೆಲ್ಲಾ ನನ್ನದಾಗಲೆಂಬ ಒಲವು

ಇಂದೋ?ನಾಳೆಯೋ?

ಇಂದೋ?ನಾಳೆಯೋ?
ಕೊನೆ ಯಾವಾಗ?
ನಮ್ಮ ಋಣವು ಮುಗಿಯುವುದೆಂದೋ?
ಹೆಚ್ಚು ಆಗದೆ,ಕಮ್ಮಿಯುೂ ಆಗದೆ
ನಮ್ಮ ಬಾಳ ಪಾತ್ರೆ ತುಂಬಿದೊಡೆ ಪಯಣ
ಪುಣ್ಯವ ತುಂಬುವೆಯೋ?
ಪಾಪವ ತುಂಬುವೆಯೋ?
ನಿರ್ಧಾರ ನಿನ್ನದು ಮಾತ್ರ
ತುಂಬಿದೊಡೆ ಲೆಕ್ಕ ಚುಕ್ತ ಮಾಡುವುದು ಈ ಬಾಳು
ನಿನ್ನೆ ,ನಾಳೆಗಳ ಚಿಂತೆ ಬಿಡು
ಇಂದೇ ಸಾಧನೆಯ ಪಥವನೆ ನಂಬು
ಜೀವನ ಸಾರ್ಥಕವದುವೆ ತಿಳಿ//

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...