ನಾನು ಅವರಂತಲ್ಲ
ಮೋಹ,ವ್ಯಾಮೋಹಗಳಿಗೆ ಒಳಗಾದವನಲ್ಲ
ಬಯಕೆ,ಆಮೀಷಗಳಿಗೆ ಬಲಿಯಾದವನಲ್ಲ
ಸೌಂದರ್ಯ,ಸಂಪತ್ತುಗಳಿಗೆ ಕತ್ತುಕೊಟ್ಟವನಲ್ಲ
ಓತ-ಪ್ರೋತಗಳಿಗೆ ಓಗೊಡುವವನಲ್ಲ
ಆದರೂ ಕೆಲವೊಮ್ಮೆ ನನ್ನದಲ್ಲದ ತಪ್ಪುಗಳಿಗೆ;
ಟೀಕೆಗಳಿಗೆ ತೆರೆದುಕೊಂಡವನು;
ಅನುಭವಗಳಿಗೆ ತೆರೆದ ಹೃದಯದವನು;
ಎಲ್ಲಾ ನಿಜ ಅನುಭವಗಳಿಗಿದೋ ಸ್ವಾಗತ,
ಮನವ ,ಹೃದಯವ ಕಾಪಿಡುವ
ಸಂಗತಿಗಳಿಗಿದೋ ಸ್ವಾಗತ;
ಬೆಳಕಾಗಿ,ಹೊಂಗಿರಣವ ಸೂಸುವ
ಹೊಸತನಕಿದೋ ಸ್ವಾಗತ;
Sunday, November 18, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment