ಬದಲಿಸು ಕಣ್ಣ ನೋಟ.
ಕಾಣು ಚೈತನ್ಯವಿಹುದು ಜಗದೆಲ್ಲಡೆ;
ಹವ್ಯಾಸವಾಗಲಿ ಪ್ರತಿ ಕೆಲಸ,
ಇಂದೇ ಮಾಡು ಮನದಲ್ಲಿಯ ಕಾಯಕ;
ಆ ದೇವನ ಕರುಣೆಯ ನೆನೆ,
ಸಿಕ್ಕಿದೆಲ್ಲಕ್ಕೂ ಖುಷಿ ಇರಲಿ;
ಈ ಜಗವೇ ತೆರೆದ ಶಾಲೆ,
ಇರಲಿ ಕಲಿಕೆ ನಿರಂತರ;
ಸ್ವಾಭಿಮಾನವಿರಲಿ,
ಗುರಿಯ ಸಾಧನೆಗೆ ಅದುವೇ ಪ್ರಥಮ ಹೆಜ್ಜೆ;
ಋಣಾತ್ಮಕತೆ ಎಲ್ಲೆಡೆಯೂ ಇದೆ,
ತಿಳಿದು ದೂರವಿರು;
ಈ ಜಗವ ಪ್ರೀತಿಸು,
ಮಾಡುವುದೆಲ್ಲವ ಇಷ್ಟಪಡು;
ಪ್ರತಿದಿನ ಕಣ್ಣುತೆರೆ ಆಶಾವಾದದಲಿ,
ಬೆಳಕಿದೆ, ಕತ್ತಲಿದೆ, ಆಯ್ಕೆ ನಿನ್ನದೇ.....
ಸಾಧನೆಯ ಹೆದ್ದಾರಿ ಮುಂದಿದೆ..
ನಿನಗಾಗಿ ಕಾದಿದೆ.....
Thursday, December 6, 2018
Subscribe to:
Post Comments (Atom)
ಅಣುವಿನಿಂದ ಅನಂತದವರೆಗೆ
ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment