ಬದಲಿಸು ಕಣ್ಣ ನೋಟ.
ಕಾಣು ಚೈತನ್ಯವಿಹುದು ಜಗದೆಲ್ಲಡೆ;
ಹವ್ಯಾಸವಾಗಲಿ ಪ್ರತಿ ಕೆಲಸ,
ಇಂದೇ ಮಾಡು ಮನದಲ್ಲಿಯ ಕಾಯಕ;
ಆ ದೇವನ ಕರುಣೆಯ ನೆನೆ,
ಸಿಕ್ಕಿದೆಲ್ಲಕ್ಕೂ ಖುಷಿ ಇರಲಿ;
ಈ ಜಗವೇ ತೆರೆದ ಶಾಲೆ,
ಇರಲಿ ಕಲಿಕೆ ನಿರಂತರ;
ಸ್ವಾಭಿಮಾನವಿರಲಿ,
ಗುರಿಯ ಸಾಧನೆಗೆ ಅದುವೇ ಪ್ರಥಮ ಹೆಜ್ಜೆ;
ಋಣಾತ್ಮಕತೆ ಎಲ್ಲೆಡೆಯೂ ಇದೆ,
ತಿಳಿದು ದೂರವಿರು;
ಈ ಜಗವ ಪ್ರೀತಿಸು,
ಮಾಡುವುದೆಲ್ಲವ ಇಷ್ಟಪಡು;
ಪ್ರತಿದಿನ ಕಣ್ಣುತೆರೆ ಆಶಾವಾದದಲಿ,
ಬೆಳಕಿದೆ, ಕತ್ತಲಿದೆ, ಆಯ್ಕೆ ನಿನ್ನದೇ.....
ಸಾಧನೆಯ ಹೆದ್ದಾರಿ ಮುಂದಿದೆ..
ನಿನಗಾಗಿ ಕಾದಿದೆ.....
Thursday, December 6, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment