Wednesday, January 31, 2018

ಗ್ರಹಣ

ಅದೋ ನೋಡಲ್ಲಿ ಬಾನಿನಲ್ಲಿ
ತೇಲುತಿಹ ತಿಂಗಳನ ರಾಹುವೆಂಬ
ತಿಮಿರವು ಆಕ್ರಮಿಸುತಿದೆ
ನಮ್ಮ ಮನವನೂ ಕಷ್ಟಗಳ
ತಿಮಿರವು ಆಕ್ರಮಿಸಲು
ನಿದ್ದೆ ಬಾರದು,ಊಟ ಸೇರದು
ಸಾಂಕೇತಿಕವಾಗಿ ನಮ್ಮವರು
ಕಷ್ಟದಲ್ಲಿ ತೊಳಲುವಾಗ 
ನಾವು ಅವರ ಕಷ್ಟದಲ್ಲಿ ಭಾಗಿಯಾದೆವೆಂಬ ಸಮಾಧಾನ
ಕಷ್ಟಗಳು ಕಳೆಯೆ ಗ್ರಹಣ ಕಳೆದಂತೆ
ಸಂಭ್ರಮಕೆ ಕೊನೆಯೆಲ್ಲಿ
ಅನುಭವಕೆ ಹೃದಯ ಸ್ಪಂದನವಷ್ಟೆ//


No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...