ಗ್ರಹಣ

ಅದೋ ನೋಡಲ್ಲಿ ಬಾನಿನಲ್ಲಿ
ತೇಲುತಿಹ ತಿಂಗಳನ ರಾಹುವೆಂಬ
ತಿಮಿರವು ಆಕ್ರಮಿಸುತಿದೆ
ನಮ್ಮ ಮನವನೂ ಕಷ್ಟಗಳ
ತಿಮಿರವು ಆಕ್ರಮಿಸಲು
ನಿದ್ದೆ ಬಾರದು,ಊಟ ಸೇರದು
ಸಾಂಕೇತಿಕವಾಗಿ ನಮ್ಮವರು
ಕಷ್ಟದಲ್ಲಿ ತೊಳಲುವಾಗ 
ನಾವು ಅವರ ಕಷ್ಟದಲ್ಲಿ ಭಾಗಿಯಾದೆವೆಂಬ ಸಮಾಧಾನ
ಕಷ್ಟಗಳು ಕಳೆಯೆ ಗ್ರಹಣ ಕಳೆದಂತೆ
ಸಂಭ್ರಮಕೆ ಕೊನೆಯೆಲ್ಲಿ
ಅನುಭವಕೆ ಹೃದಯ ಸ್ಪಂದನವಷ್ಟೆ//


No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...