Friday, June 26, 2015

ಅಪೇಕ್ಷೆ

ನಿರೀಕ್ಷೆಗಳು ಹುಸಿಯಾಗಿದೆ
ಅಪೇಕ್ಷೆಗಳು ನೂರಾಗಿವೆ
ದಾರಿ ಕಾಣದ ಬಯಕೆಗಳು
ದಿಕ್ಕುಪಾಲಾಗಿ ಓಡಿವೆ
ಹಿಡಿತವಿಲ್ಲದೆ ಬದುಕು ಮೂರಾಬಟ್ಟೆಯಾಗಿದೆ
ತಾಳ್ಮೆ,ಸಹನೆಯ ಮೌಲ್ಯ ಗೋಚರಿಸಿದೆ.

ಹೇಳಲೇನು?

ಹೊರಡುವ ಮೊದಲು ಹೇಳಲೇನು?
ಮನವು ಖಾಲಿ, ಹೇಳಲೇನು?
ಕಾಲ ಕಳೆದೆ, ನರಳಿದೆ ನೆನಪಲ್ಲಿ
ಜೊತೆ ಸಾಗದೆ ನಲುಗಿದೆ ಹೇಳಲೇನು ಮತ್ತೆ?
ಹೊಸ ದಿನ, ಹೊಸ ಜನ,ಹೊಸ ಮನ
ಯಾವುದಕ್ಕೆ ಸೋತೆನೋ
ಎಲ್ಲವೂ ಮರೆತಿದೆ, ಗಾಯ ಮಾಸಿದೆ!
ಮತ್ತೇನು?ನನ್ನದೂ ಚರಿತ್ರೆಯೇ ಆಗಿದೆ
ಯಾರು ಓದಲಾರರು,
ಯಾರು ಅದರಿಂದ ಏನೂ ಕಲಿಯರಾರರು  ಹೇಳಲೇನು? ಹೇಳಲೇನು? ಮತ್ತೆ......

ಅನಂತ ಗಾನ

ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '.   ' ಭರವಸೆ ' ಅನಂತ ಗೀತ...