ಏಕಿಂತ ದಾಳಿ ಮನದ ಮೇಲೆ
ಮೊದಲೇ ನರಳಿದೆ ಸಣ್ಣದಾಗಿ
ಗಾಯದ ಮೇಲೆ ಬರೆ ಎಳೆದ ಹಾಗೆ
ಮತ್ತೆ ಮತ್ತೆ ಬೀಳುತಿದೆ ಹೊಡೆತ
ಚೇತರಿಕೆ ಕಾಣುವ ಮೊದಲೇ........
ಒಬ್ಬನೇ ಏಕಾಂಗಿಯಾಗಿ
ಸೂಯರ್ಾಸ್ತದ ಸೊಬಗ ಅನುಭವಿಸುವಾಗ
ಧುತ್ತನೆ ಕಾಮರ್ೋಡ ಆವರಿಸಿದಹಾಗೆ
ಹಳೆಯ ನೋವುಗಳೆಲ್ಲಾ ಗರಿಗೆದರಿವೆ
ಸುಂದರ ಸೊಬಗೆನ್ನೆಲ್ಲಾ ನುಂಗಿದೆ
ಕರಾಳ ದಿನಗಳ ನೆನಪಾಗಿ
ಮನವು ನೋವ ಕಡಲಲಿ ಮುಳುಗಿದೆ
ಸಂಕಟ ಪಡುತ್ತಿದ್ದೇನೆ,
ಅಮೂಲ್ಯ ಸಮಯ ವ್ಯರ್ಥ ಮಾಡಿದೆ
ನೋವೆಲ್ಲಾ ಮೋಡವಾಗಿ ಬಾನಿನಲ್ಲಿ ಕರಗಿದೆ
ಮನದ ಚಿಂತೆಯ ಕಂತೆಗಳನ್ನೆಲ್ಲಾ
ಗೋರಿಯೊಳಗೆ ಬಲವಂತವಾಗಿ ಬಚ್ಚಿಟ್ಟಿದ್ದೇನೆ
ಗೆಳೆಯನೇ ನಿನ್ನ ನೆನಪು ಮತ್ತೆ ಮತ್ತೆ ಕಾಡಿದೆ
ಈ ಹೃದಯದಲಿ ನಿನ್ನ ಬಂದಿಸಿರುವೆ
ಎಲ್ಲವೂ ಮುಗಿದ ಅಧ್ಯಾಯ
ಹೊಸ ಅಧ್ಯಾಯ ಪ್ರಾರಂಭಿಸಿರುವೆ......
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
No comments:
Post a Comment