ಯಾರು ನೆನಪಿಡುವರು?
ಮುಂದೆ ಕಾಲ ಉರುಳುತಿರುವುದ
ಯಾರು ನಂಬುವರು?
ಈ ನನ್ನ ಪದಗಳ......
ಗೊತ್ತಿದೆಯಾದರೂ ನೋವಿಲ್ಲ
ಗೋರಿಯೊಳಗೆ ಬಚ್ಚಿಟ್ಟ ಭಾವಗಳಂತೆ
ಯಾರೂ ಬಗೆದು ನೋಡುವರಿಲ್ಲ
ಹಳೆಯದೆಲ್ಲವೂ ಇತಿಹಾಸ
ಹೊಸತೆಲ್ಲವೂ ಅನ್ವೇಷಣೆ
ಹಿಂದಿನದೆಲ್ಲವೂ ಕಥೆಗಳ ಗಂಟು
ನಂಬುವರಾರು? ಗೊಡ್ಡು ವೇದಾಂತ;
ನಡೆಯುತ್ತಿರುವರು ಸತ್ಯ ಹರಿಶ್ಚಂದ್ರರು
ಮಾತಿಗೆ ಬೆಲೆಯಿಲ್ಲ, ಬರೀ ಒಣ ವೇದಾಂತ;
ಎಲ್ಲರೂ ಚಪ್ಪಾಳೆ ತಟ್ಟುವವರೇ!
ತಪ್ಪೆಂದು ಹೇಳಬೇಕಾದವರು ತೆಪ್ಪಗಿಹರು
ಮೂಕರಾಗಿ, ನಿಜವಲ್ಲ ಬರೀ ನಾಟಕ;
ಮುನ್ನಡೆಯುತಿಹುದು ಕಾಲ ಗಹಗಹಿಸಿ
ಮುಂದೆ ಕಾದಿದೆ....
ಮುಂದೆ ಕಾದಿದೆ...
ಕಾಣದ ರುದ್ರನರ್ತನ.......
Monday, November 19, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
99%ಕನ್ನಡ, 1%ಇತರೆ ಕನ್ನಡ ಕಂದನ ಕನ್ನಡದ ತಾಣ ಅದುವೇ www.spn3187.blogspot.in & https://t.me/spn3187 ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ
ReplyDeleteThis comment has been removed by the author.
Delete