Monday, January 8, 2018

ಬಲಿಪಶು

ಮನವು ನರಳಿದೆ
ರಾತ್ರಿ ಕಗ್ಗತ್ತಲಲ್ಲಿ ಇಳಿದಿದೆ
ನೋವ ಕಣ್ಣೇರು ಜಾರಿದೆ
ಮನದ ಮೇಲೆ ಪ್ರಶ್ನೆಗಳ 
ದಾಳಿ ಮಾಡಿದೆ ನಿಲ್ಲದೆ
ಮನದ ದುಃಖ ಯಾರಿಗೆ ಹೇಳಲಿ?
ಬಲಿಪಶುವಾಗಿಹೆನು
ಬದಲಾಗದ ವ್ಯವಸ್ಥೆಯಲ್ಲಿ:
ಕಡೆಗಣಿಸಲ್ಪಟಿದ್ದೇನೆ
ನನ್ನವರಿಂದಲೇ:
ದನಿಯಿಲ್ಲದವನು ನಾನು
ಮುಖವಾಡ ಧರಿಸಬೇಕಿದೆ
ಬೂಟಾಟಿಕೆಯ ನಾಟಕವಾಡಬೇಕಿದೆ:
ಮನವು ರೋಧಿಸಿದೆ
ನಿದ್ದೆ ಕಾಣದ ಕಂಗಳು ನರಳಿದೆ
ಕಂಗಳು ನರಳಿದ ಮನವ ಸಂತೆೃಸಿದೆ


No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...