ಇಂದಾಯಿತು, ಮುಂದೇನು?
ಅದೇ ಹೆಜ್ಜೆಗಳನ್ನೇ ಇಡುತ್ತಿದ್ದೇನೆ
ಅಡಿಯಿಡಲು ಬೇಸರವಿದೆ
ಹೊಸತನವಿಲ್ಲ ಯಾಂತ್ರಿಕತೆಗೆ ಜೋತುಬಿದ್ದಿದ್ದೇನೆ
ಆಯಿತು, ಎಲ್ಲವೂ ಆಯಿತು
ಮನವ ಶೋಧಿಸಿದ್ದಾಯಿತು
ಹಲವು ವರುಷಗಳ ಕಾಲ ತೊಟ್ಟ
ಮುಖವಾಡ ಕಳಚಿಟ್ಟಾಯಿತು
ಬೆತ್ತಲಾಗಿ ನಿಂತಿಹೆನು ಅಸಹಾಯಕನಾಗಿಹೆನು
ಇಂದಾಯಿತು, ಮುಂದೇನು?
ಕಣ್ಣು ಮುಚ್ಚಿದರೂ ಗೋಚರಿಸುತ್ತಿಲ್ಲ
ಕಣ್ಣು ತೆರೆದರಂತೂ ಕಾಲೆಳವರ
ದಂಡೇ ಕಾಣುತಿದೆ, ಅಸಹ್ಯವಾಗಿದೆ
ಓಡಿಹೋಗೋಣವೆಂದರೂ
ಭೂಮಿ ದುಂಡಾಗಿದೆಯೆಂಬ ಭಯ
ಇಂದಾಯಿತು, ಮುಂದೇನು? ನಾಳೆಗಳ ನಿರೀಕ್ಷಿಸುವುದು ಹೇಗೆ
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment