ಇನ್ನೂ ಮುಗಿದಿಲ್ಲ ನನ್ನ ಪಯಣ
ಹಿಂತಿರುಗುವ ಮಾತೆಲ್ಲಿ?
ಗುರಿಯ ಹಾದಿಯಲ್ಲಿ ನಾನು
ಹಿಂತಿರುಗಲೆಂತು ಮುರಿದು ಮಾತು;
ಗುರಿಯೊಂದು ಕಡೆ ಕರೆಯುತಿಹುದು
ಸಂಕಟವೊಂದು ಕಡೆ ಸೆಳೆಯುತಿಹುದು
ಮಾತುಗಳಿಂದ ಮನವ ಮುರಿದವರಾರು?
ಈಗ ಪ್ರೀತಿ ಆಕಾಶದಿಂದ ಉದುರಿತೋ!
ಹಗಲು-ರಾತ್ರಿ ಎನ್ನದೆ ನಡೆದಿಹೆನು
ಈಗೇಕೆ ಮುರಿಯಲಿ ನನ್ನ ಪಯಣ?
ಇನ್ನು ಕೆಲವೇ ದೂರ ನನ್ನ ಗುರಿ
ಗುರಿ ಸೇರಿ ಆನಂದಿಸಲೋ ಇಲ್ಲ
ನಿಮ್ಮ ಮಾತಿಗೆ ಬೆಲೆಗೊಟ್ಟು
ಮತ್ತೆ ನಿಮ್ಮ ಮಾತಿಗೆ ಬಲಿಯಾಗಲೇ?
ಈ ಧ್ವಂಧ್ವವೇ ಪರೀಕ್ಷೆ
ಧ್ವಂಧ್ವವ ಮೀರುವುದೇ ಗೆಲುವು
ಕುರುಡಾಗಬೇಕು!
ಕಿವುಡಾಗಬೇಕು!
ನಡೆಯಬೇಕು ಗುರಿಯ ಕಡೆಗೆ
ಆನಂದಿಸಬೇಕು ಒಲವಿಗೆ//
Thursday, November 22, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment