ಏಕೆ ಆತ್ಮಗಳೇ ಬುಸುಗುಡುತ್ತಿರುವಿರಿ?,
ದ್ವೇಷದ ಆವೇಗದಲ್ಲಿ ಯುದ್ಧವ ಬೆನ್ನಟ್ಟಿರುವಿರಿ.
ನಂಬಿದ ಜನರ ಭಾವೋದ್ವೇಗ ಒಳ್ಳೆಯದೇ?
ಸಾವು ಜೀವನೋತ್ಸಾಹವಲ್ಲ ತಿಳಿಯಿರಿ.
ನಿಮ್ಮ ದ್ವೇಷಕ್ಕೆ ಬಲಿಯಾಗುತ್ತಿವೆ ಜೀವಗಳು,
ಆದರೂ ಉನ್ಮಾದ ಕಡಿಮೆಯಾಗಿಲ್ಲ.
ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ,
ಬಾಂಬಿಗೆ ಬಾಂಬು ಉತ್ತರ ಶಿಲಾಯುಗಕ್ಕೆ ಪಯಣ.
ವಿನಾಶವ ಆಹ್ವಾನಿಸುತ್ತಿರುವಿರಿ,
ನಾಳಿನ ಪೀಳಿಗೆಗೆ ಏನ ನೀಡುವಿರಿ?.
ದ್ವೇಷವನ್ನೇ ಮುಂದುವರಿಸುವರೇ?
ಇಲ್ಲ, ಶಾಂತಿಯ ಅರಸುವರೇ?.



.png)






