Saturday, March 14, 2026

ಸತ್ಯದ ಕನ್ನಡಿ

ಪ್ರತಿದಿನ ಕನ್ನಡಿಯ ಮುಂದೆ ನಿಲ್ಲು,

ಮುಖವಾಡ ಕಳಚುವುದು ದಿಟ.

ನಿನ್ನದಲ್ಲದ ಭಾವಗಳು ನರ್ತಿಸುವುದು,

ಸತ್ಯದ ಅನಾವರಣ ಕಣ್ಣಮುಂದಾಗುವುದು.


'ಅಹಂ' ನ ಪೊರೆ ಕಳಚುವುದು,

ನಿಜದ ಮೌಲ್ಯವ ನೀ ಅರಿತು ಕೋ.

ನಕ್ಕುಬಿಡು ನಿನ್ನ ಮೂರ್ಖತನಕೆ,

ಬದಲಾಗು, ನಡೆ ಸತ್ಯದ ಹಾದಿಯಲ್ಲಿ.


ಸೋಲು ಮಳೆಯಂತೆ,

ಮನದ ನೋವ ತೊಳೆವುದು.

ಕಣ್ಣ ಪೊರೆ ಕಳಚಿ,

ಸತ್ಯ ದರ್ಶನ ಮಾಡಿಸುವುದು.


ಧೈರ್ಯದಿಂದ ನಡೆ,

ಪ್ರಾಮಾಣಿಕತೆಯಿಂದ ನಡೆ.

ಮನದ ಕನ್ನಡಿಯಲ್ಲಿ ನೋಡು,

ನಿನ್ನ ನೀ ಅರಿವ ಹಿರಿಮೆಯ ಕಾಣು.

Friday, March 13, 2026

ಪ್ರತಿದಿನದ ಬೆಳಕು

ನಿನ್ನೊಳಗೆ ಇದೆ ಅಖಂಡ ಬೆಳಕು,

ಅರಿತು ಕಂದೀಲ ಹಚ್ಚಬೇಕು.

ದೀಪವಿದೆ, ಬತ್ತಿಯಿದೆ ಮನಸ್ಸು ಬೇಕು,

ಜೀವನದ ಪ್ರತಿಹೆಜ್ಜೆಯ ಸೊಬಗ ಸವಿಯಬೇಕು.

 

ಭಯವ ಕಂಡು ಒಮ್ಮೆ ನಕ್ಕುಬಿಡು,

ಸೋಲು ಬಂದರೆ ನಮಿಸಿ ಪಾಠಕಲಿ.

ಪ್ರತಿದಿನದ ಚಿಕ್ಕ ಹೆಜ್ಜೆಗಳ ಇಡುತಿರು,

ಉಜ್ವಲ ಭವಿತವ್ಯದ ಗುರಿಯ ಸಾಧಿಸು.

 

ಸಂತೋಷ ನಾವಿಡುವ ಹೆಜ್ಜೆಗಳ ಸವಿ,

ಪ್ರತಿದಿನದ ಬೆಳವಣಿಗೆಯಲ್ಲಿದೆ ಅದರ ಮೂಲ.

ನಿನ್ನ ಬೆಳವಣಿಗೆಯ ಹೆಜ್ಜೆಗಳು ಆಗುವುದು,

ಪ್ರೇರಣೆ, ಉದಾಹರಣೆ ನಿನ್ನ ನೋಡುವವರಿಗೆ.

 

ಅರಿತು ಕೋ ನಿನ್ನ ಶಕ್ತಿಯ,

ಜಗವು ನಿನ್ನ ಕೈಯಲ್ಲಿ.

ಜೀವನದ ಜಯದ ಮಂತ್ರ,

ಪ್ರತಿದಿನದ ಹೆಜ್ಜೆಗಳಲ್ಲಿ.

Sunday, March 8, 2026

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ, 

ಪ್ರಶಾಂತ ಧ್ವನಿ.

ಕನಸೇ ಕಂಗಳು,

ಅಭಯವೇ ರಕ್ಷಣೆ.


ಬಿರುಗಾಳಿಯೂ ಅವಳೇ,

ಬೆಂಕಿಯ ಕೆನ್ನಾಲಿಗೆಯೂ ಅವಳೇ.

ಶಾಂತ ಸಮುದ್ರವೂ ಅವಳೇ,

ಕರುಣೆಯ ಕಡಲೂ ಅವಳೇ.


ನಮ್ಮೊಳಗಿನ ಶಕ್ತಿ ಆಕೆ,

ನಮ್ಮ ಕಂಗಳ ಜ್ಯೋತಿ ಆಕೆ.

ನಮ್ಮ ಕಾರಣೀಭೂತಳು ಆಕೆ,

ನಮ್ಮ ಪ್ರಪಂಚವೇ ಆಕೆ.


ಅವಳ ರಕ್ಷಣೆ, ನಮ್ಮ ಕರ್ತವ್ಯ,

ಅವಳ ಗೌರವ, ನಮ್ಮ ಉಸಿರು.

ಅವಳ ನಗು, ನಮ್ಮ ಸಂತೋಷ,

ಅವಳ ನೋವು, ನಮ್ಮ ನೋವು. 

ಹೊಸ ಪಯಣ

ವರುಷಗಳ ಪಯಣ ವ್ಯರ್ಥವಾಗಿದೆ,

ಗುರಿ ಇಲ್ಲ, ಗುರುವೂ ಇಲ್ಲ.

ಬಾಳಿನ ಪಯಣದ ಉದ್ದೇಶವೇನು?,

ಗಾಣದ ಎತ್ತಿನಂತೆ ನಡೆಯುತ್ತಿದೆ ನಿಲ್ಲದೆ.


 ಗುರಿ ಇಲ್ಲದೆ ಮನ ಭ್ರಮೆಯಲ್ಲಿದೆ,

ನೊಣದಂತೆ ಮನ ಪರಿಭ್ರಮಿಸಿದೆ.

ಗುರು ಇಲ್ಲದೆ ಮನ ಸೊರಗಿದೆ,

ಜೀವನ ಕುರುಡಾಗಿದೆ ದಾರಿ ಕಾಣದೆ.

 

ತಿಮಿರಾಂಧಕಾರ ಕಳೆಯಲು ಬೇಕು,

ಜ್ಞಾನದ ಸಣ್ಣ ದೀವಿಗೆ ಹಚ್ಚಬೇಕು.

ಜೀವನದ ಗುರಿಯ ಸಾಕ್ಷಾತ್ಕಾರವಾಯಿತು,

ಬದಲಾಯಿತು ದಿಕ್ಕು ಹೊಸ ಪಯಣಕ್ಕೆ. 

Friday, March 6, 2026

ಸಹನೆ – ಜಯದ ದಾರಿ

ಬಿತ್ತಿದ ಬೀಜ ಮೊಳಕೆಯೊಡೆಯಲು ಸಮಯ ಬೇಕು,
ಅವಸರದಲ್ಲಿ ಗೆಲುವು ಸಿಗುವುದಿಲ್ಲ ಗೆಳೆಯಾ.
ಎಲ್ಲವೂ ಸಮಯದ ನಿಯಮ,
ಸಹನೆ ಇಲ್ಲದೆ ಫಲವಿಲ್ಲ.


ಸಣ್ಣ ಹೆಜ್ಜೆಗಳ ನಿರಂತರ ಪ್ರಯತ್ನ,

ಸಹನೆಯ ಕೈ ಹಿಡಿದು ನಡೆಯಬೇಕು.

ಹಾದಿಯಲಿ ಸಣ್ಣ ಜಯಗಳನ್ನು ಸಂಭ್ರಮಿಸಬೇಕು,
ನಂಬಿಕೆಯಿಂದ ಮುಂದುವರಿಯಬೇಕು.

 

ತಾಳ್ಮೆಯೇ ತಪಸ್ಸು,
ಕಾಲವೇ ಜಯ ತಂದುಕೊಡುವುದು.
ನಿರಂತರ ಪ್ರಯತ್ನದ ಹಾದಿಯಲ್ಲಿ,
ಬಾಳೆಲ್ಲಾ ಸಂಭ್ರಮ ನಿನ್ನದಾಗುವುದು.


Tuesday, March 3, 2026

ತಾಳ್ಮೆಯ ಪಯಣ

ಮನವು ಬಯಸಿದೆ,

ಶಾಂತ ಕ್ಷಣಗಳ,


ತಂಗಾಳಿಯ ಸುಂದರ ಕ್ಷಣಗಳ.

ಭಯ,ಆತಂಕ, ಅವಸರಗಳಿಂದ ಬಲು ದೂರ,

ಜನ ವಿಚಿತ್ರವಾಗಿ ನೋಡುವರು ನನ್ನ.

 

ಜಗತ್ತು ಆತುರದಲ್ಲಿದೆ,

ಎಲ್ಲವೂ ಕ್ಷಣಗಳಲ್ಲಿ ಆಗಬೇಕೆನ್ನುವರು,

ಸೃಷ್ಟಿಯ ನಿಯಮಗಳನ್ನೂ ಬದಲಿಸಬೇಕೆನ್ನುವರು,

ರಾಕೆಟ್ ಯುಗದಲ್ಲಿ ರಾಕೆಟ್ ಮೇಲೇ ಪಯಣಿಸುವರು,

ನಾನು ತಣ್ಣಗಿದ್ದೇನೆ, ತಾಳ್ಮೆಯನ್ನೇ ಆಯ್ದುಕೊಂಡೆನು. 


Monday, March 2, 2026

ಮುಂದಿನ ಹಾದಿ

ನೂರು ಆಗಿ ಹೋಗಿದೆ,

ಏನು ಕಲಿತೆ ಅದರಿಂದ?.

ನೂರು ಆಗುವುದಿದೆ ಮುಂದೆ,

ಏನು ಮಾಡುವೆ ಕಲಿತದ್ದರಿಂದ?

ಬೇಡದ ವಿಷಯಗಳ ಹೊರೆ ಹೊರಬೇಡ,

ಬಾರವಿರೆ ಕಷ್ಟ ಮುಂದೆ ಸಾಗಲು.

ಹಗುರಾಗಿಸಿಕೊ!,

ಬೇಡದ್ದನ್ನು ತೊಳೆದುಕೋ!,

ಬೇಕು, ಬೇಡಗಳ ವಿವೇಚಿಸು,

ಮನವ ತಿಳಿಯಾಗಿಸು,

ಶಾಂತಿಯ ಕಡಲಾಗಿಸು.


Saturday, February 28, 2026

ನನ್ನ ಊರು! ನನ್ನ ಮನೆ!

 ನನ್ನ ಊರು,ನನ್ನ ಮನೆ,

ಮೈದಾನದಲ್ಲಿ ನಾ ಆಡುತ್ತಿದ್ದೆ,

ಇಲ್ಲಿ ಬಿದ್ದು ಗಾಯ ಮಾಡಿಕೊಂಡೆ,

ಇಲ್ಲಿ ಗೆಳೆಯರೊಡನೆ ಸಂಭ್ರಮಿಸಿದ್ದೆ,

ಇಲ್ಲಿ ಏಕಾಂಗಿಯಾಗಿ ಅತ್ತಿದ್ದೆ,

ಮನದ ಮೂಲೆಯಲ್ಲಿ ನೆನಪುಗಳ ಬಿತ್ತಿದ್ದೆ,

ನನ್ನ ಊರು, ನನ್ನ ಮನೆ,

ಸ್ವರ್ಗಕ್ಕೆ ಮೂರೇ ಗೇಣು.

ವಿಳಂಬ ನೀತಿ

'ನಾಳೆ ಮಾಡೋಣ' ಕೆಲಸ,

ಮುಂದೆ ಮುಂದೆ ತಳ್ಳುವೆವು.

'ನಾಳೆ' ದಿನ ಬರುವುದೇ ಇಲ್ಲ,

ಕೆಲಸ  'ನಿಧಾನ'ಕ್ಕೆ ಬೇಸರಿಸುವುದು.

 

ಮನದಲ್ಲಿ 'ಗೊಂದಲ', 'ಭಯ' ವಿದೆ,


ಮಾಡಲು 'ನೋವಾ'ಗುವುದೆಂದು.

'ಯೋಚಿಸು','ಯೋಜಿಸು' ಕೆಲಸದ ಮುಂದು,

ಬಿಡು 'ಚಿಂತೆ', 'ಪ್ರಕ್ರಿಯೆ'ಯಲ್ಲಿ 'ಸಡಗರ'ಪಡು.

 

ಇಂದಲ್ಲ ನಾಳೆ ಕೆಲಸ ನೀನೇ ಮಾಡಬೇಕು,

'ಹಿಂಜರಿಕೆ' ಬೇಡ, 'ಮನಸ್ಸು' ಮಾಡು.

'ಕೇಳು', 'ಆಲಿಸು' ನಿನ್ನಿಷ್ಟದ 'ಸಂಗೀತ',

'ಹಗುರಾಗಿಸು' ಸಮಾಧಾನದ ನುಡಿಗಳಿಂದ.

 

'ಫಲಿತಾಂಶ' ಬಗ್ಗೆ ಯೋಚಿಸದಿರು,

'ಪ್ರಯತ್ನ' 'ಗಮನದಿ' ನೀ ಮಾಡು,

ಮಾಡುವುದರಲ್ಲಿ 'ಗುಣಮಟ್ಟ' ಕಾಯ್ದುಕೋ,

ಮಿಕ್ಕೆಲ್ಲ ತನಗೆ ತಾನೇ ನಿನಗೆ 'ಕಾಯ್ವುದು'.

ನಿರಂತರತೆಯ ಬೆಳಕು

'ಅಭ್ಯಾಸ' 'ಹವ್ಯಾಸ'ವಾಗಬೇಕು,

ಅಭ್ಯಾಸ ಆರಂಭವಾಗಲು 'ಶಕ್ತಿ'ಬೇಕು.

ಬೆಂಕಿಕಡ್ಡಿ ಸುಮ್ಮನೆ ಹೊತ್ತಿಕೊಳ್ಳುವುದಿಲ್ಲ,

ಕಡ್ಡಿ ಗೀರಲು ಸ್ವಲ್ಪ 'ಶಕ್ತಿ' ವ್ಯಯಿಸಬೇಕು.

 

ಯಾವುದೇ ಕೆಲಸವಾದರೂ ಸರಿಯೇ,


ಹಲವು 'ಹೆಜ್ಜೆ'ಗಳ ಸವೆಸಬೇಕು.

ಕುಳಿತಲ್ಲೇ ಎಲ್ಲವು ಆಗಬೇಕೆನ್ನುವುದು,

ಮೂರ್ಖತನವಲ್ಲದೆ ಮತ್ತೇನು?.

 

'ಸಣ್ಣ ಸಣ್ಣ ಹೆಜ್ಜೆ'ಗಳಿಗೆ ಬೆಲೆಕೊಡು,

ನಾಳೆಯ 'ದೊಡ್ಡ ಸಾಧನೆ'ಗೆ ಸಿದ್ಧವಾಗು.

ಸಣ್ಣ ಸಣ್ಣ ಹೆಜ್ಜೆಯಿಡುವುದ 'ಪ್ರೀತಿಸು',

'ಬೆವರ ಹನಿ'ಯಲ್ಲಿ 'ಬೆಳವಣಿಗೆ'ಯ ಸಾಧಿಸು.

 

'ಪ್ರಾರಂಭದ ಹೆಜ್ಜೆ'ಗಳ 'ಸುಲಭ'ವಾಗಿಸು,

'ಅಭ್ಯಾಸ, ಹವ್ಯಾಸ'ವಾಗಿ ಬದಲಿಸು.

ಗುರಿ ಮನದಲ್ಲಿರಲಿ 'ಪ್ರಕ್ರಿಯೆಯ ಪ್ರೀತಿಸು',

'ನಿರಂತರತೆ' ಬೆಳಕಲ್ಲಿ 'ಜೀವನವ ಅರಳಿಸು'.

Friday, February 27, 2026

ಆಂತರಿಕ ಜಾಗೃತಿ

ಬೆಳಗಿನ ಶಾಂತ 'ಮೌನ' ನೀರವತೆಯಲ್ಲಿ,

ಮನದಲ್ಲಿ ಮೌನ 'ಚಿಂತನೆ' ತರಂಗಗಳು.

ಜೀವನದ 'ಉದ್ದೇಶ', ಜೀವನ ಜಂಜಾಟಗಳಲ್ಲಿ,

ಮೈ ಮರೆತಾಗ 'ಎಚ್ಚರಿಕೆ' ಪಿಸುಮಾತುಗಳು.

 

ನಾನು 'ಯಾರು'?, ಏಕೆ ಬಂದಿಹೆ?,

ಸಾವಿರ ಉತ್ತರವಿಲ್ಲದ 'ಪ್ರಶ್ನೆ'ಗಳು.

ಭಯ,ಆತಂಕ, ನಿಗೂಢತೆಯ 'ಕತ್ತಲು',

ಎಲ್ಲವೂ ಜಾರುವುದು 'ನೀ' ಎದ್ದು 'ನಿಂತರೆ'.

 

'ಮನೋಬಲ'ವಿಲ್ಲವೇ?, 'ಉದ್ದೇಶ' ದಾರಿತೋರುವುದು,

ಮನದ ಛಲ ದಾರಿ 'ದೀವಿಗೆ'ಯಾಗುವುದು.

ಮುಂದಿಟ್ಟ 'ಹೆಜ್ಜೆ'ಯನ್ನೆಂದೂ ಹಿಂದಿಡದಿರು,

ಆಗುವುದು ಆಗೇ ಹೋಗಲಿ, ಹೆಜ್ಜೆ 'ಮುಂದಿಡು'.

 

'ಬದಲಾವಣೆ' ಹರಿಕಾರ ಬರುವನೆಂದು ಕಾಯದಿರು,

ನೀನೇ ಬದಲಾವಣೆಯ 'ಹರಿಕಾರ ನಂಬಿಕೆ'ಯಿಡು.

ನಿನ್ನ ಜೀವನದ 'ಶಿಲ್ಪಿ ನೀನೇ', ಮರೆಯದಿರು,

'ಬೆಳವಣಿಗೆ'ಯೇ 'ಜೀವನ ಸಂತೋಷ' ಹಠತೊಡು.

ಸತ್ಯದ ಕನ್ನಡಿ

ಪ್ರತಿದಿನ ಕನ್ನಡಿಯ ಮುಂದೆ ನಿಲ್ಲು, ಮುಖವಾಡ ಕಳಚುವುದು ದಿಟ. ನಿನ್ನದಲ್ಲದ ಭಾವಗಳು ನರ್ತಿಸುವುದು, ಸತ್ಯದ ಅನಾವರಣ ಕಣ್ಣಮುಂದಾಗುವುದು. 'ಅಹಂ' ನ ಪೊರೆ ಕಳಚುವು...