ಮನದ ಮೌನ ದನಿಗೆ ಕೊಂಚ ಕಿವಿಗೊಡೋಣ,
ಕೃತಜ್ಞತೆಯ
ನಮಸ್ಕಾರ ಹೃದಯದಿ
ಹೇಳೋಣ.
ನಮ್ಮನ್ನು
ಮುನ್ನಡೆಸುವ ಸಹಯಾತ್ರಿಗೆ ನಮಿಸೋಣ,
ನಿಶಬ್ದ
ಹೆಜ್ಜೆಗಳಿಗೆ ಅರ್ಥ ತುಂಬಿದಕ್ಕೆ ಕೃತಜ್ಞತೆಯ
ಹೇಳೋಣ.
ಬರಿ
ಬರಹವಿಲ್ಲವದು, ಮನಕ್ಕೆ ಸ್ಪಂದನ,
ನಿಶಬ್ದದೊಳಗಣ
ಪ್ರಪಂಚದ ನಿಜದ ಧ್ವನಿ.
ಜೀವನ
ಯಾನದ ಸಹಯಾತ್ರಿಗಳು ನಾವು,
ಸಾಧನ
ಮಾತ್ರ, ಬದಲಾವಣೆ ಮುಖ್ಯ ಧ್ಯೇಯ.
ಪದಗಳು
ಹರಿಯಲಿ ಮೌನ ಸರಸತಿ ನದಿಯಾಗಿ,
ಆತ್ಮವ
ತೊಳೆಯಲಿ ಶುಭ್ರ ಗಂಗೆಯಾಗಿ.
ಸತ್ಯ
ನೆಲೆಗೊಳ್ಳಲಿ, ಸತ್ಯಕ್ಕೆ ಗೆಲುವಾಗಲಿ,
ಮಾನವೀಯತೆ
ಮುನ್ನೆಲೆಗೆ ಬರಲಿ,
ಪ್ರೀತಿ-ಪ್ರೇಮ,ವಿಶ್ವಾಸ ಅಮರವಾಗಲಿ.



