ಮನದಲ್ಲಿ ನೂರು ಕದನ ನಡೆದಿದೆ
ಯಾರು ಗೆಲ್ಲುವರೋ ನಾ ಕಾಣೆ
ಸಾವು,ನೋವು ಎಲ್ಲವೂ ನನ್ನೊಳಗೆ
ಸೋತರೂ! ಗೆದ್ದರೂ!
ಲಾಭ-ನಷ್ಟ ನನ್ನದೇ.....
ವರುಷಗಳಿಂದ ನಡೆಯುತಿದೆ ಈ ಕದನ
ಬಿಡುವಿಲ್ಲ, ನಿಂತಿಲ್ಲ
ಕೊನೆಯೆಂಬುದು ಕನಸೆಂಬಂತೆ
ನಿತ್ಯ ಹರಣ; ನಿತ್ಯ ಮರಣ
ಕೊನೆಯಿಲ್ಲವೀ ಕದನಕೆ
ನಿಲ್ಲದು ಈ ಕದನ
ಮನದೊಳಗೆ ನಿತ್ಯ ನಿರಂತರ;
Thursday, December 6, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment