ಘರ್ಷಣೆ


ಇಲ್ಲಿ ನೂರಾರು ತತ್ವ-ಆದರ್ಶಗಳಿವೆ;
ಸತ್ತ ಆದರ್ಶಗಳಿವೆ;
ಸಾಯುತ್ತಿರುವ ಆದರ್ಶಗಳಿವೆ;
ಸತ್ತ ಭಾಷೆಗಳಿವೆ;
ಸಾಯುತ್ತಿರುವ ಭಾಷೆಗಳಿವೆ;
ಸತ್ತವರಿದ್ದಾರೆ;
ಸಾಯುವವರಿದ್ದಾರೆ;
ಬದುಕ ಬಯಸುವವರ ಹುಡುಕಬೇಕಿದೆ;
ಪ್ರೀತಿಸುವವರಿದ್ದಾರೆ ಸತ್ತವರನ್ನು;
ಪ್ರೀತಿಸುವವರಿದ್ದಾರೆ ಸಾಯುತ್ತಿರುವವರನ್ನು;
ಬದುಕುವವರ ಪ್ರೀತಿಸುವವರು ಬೇಕಾಗಿದೆ;
ಹಾತೊರೆಯುವ ಮನಗಳು;
ಹಂಬಲಿಸುವ ಮನಗಳು;
ಸ್ಪಂದಿಸದ ಮನಗಳು;
ಎರಡೂ ಎಂದೂ ಸೇರದ ದಿಕ್ಕುಗಳಾಗಿವೆ;
ಅವರ ಕಂಡರೆ ಇವರಿಗಾಗದು
ಇವರ ಕಂಡರೆ ಅವರಿಗಾಗದು;
ಇಬ್ಬರ ನಡುವೆಯೊ ಘರ್ಷಣೆ ನಡೆಯುತ್ತಲೇ ಇರುತ್ತೆ ವಿಶ್ರಾಂತಿಯಿಲ್ಲದೆ;
ಅವರ ಕಾಲು ಇವರೆಳೆಯುತ್ತಾರೆ;
ಅವರ ಕಾಲು ಇವರೆಳೆಯುತ್ತಾರೆ;
ಇವನು ಬಿದ್ದರೆ ಅವನು ನಗುತ್ತಾನೆ;
ಅವನು ಬಿದ್ದರೆ ಇವನು ನಗುತ್ತಾನೆ;
ಯಾವುದಕ್ಕೂ ಕೊನೆಯೆಂಬುದಿಲ್ಲ;
ಇಬ್ಬರಿಗೂ ಕೆಲಸವಿಲ್ಲ;
ಸಮಯ ಕಳೆಯಲು ಬೇಕು ವಿಷಯ;
ವಿಷಯ ಮಂಥನ ಮಾತ್ರ ಯಾರಿಗೂ ಬೇಡ;
ಸ್ವಲ್ಪ ಸಿಹಿ;
ಸ್ವಲ್ಪ ಕಹಿ;
ಇಬ್ಬರೂ ಸೋಲುತ್ತಾರೆ;
ತತ್ವ-ಆದರ್ಶ ಸೊರಗುತ್ತೆ;
ಸಮಸ್ಯೆಗಳು ನಳನಳಿಸುತ್ತೆ;
ಪರಿಸ್ಥಿತಿ ಗಹಗಹಿಸಿ ನಗುತ್ತೆ;
ಕತ್ತಲು ಕವಿಯುತ್ತೆ;
ಹೊಸ ಬೆಳಕು ಹೊಮ್ಮುತ್ತದೆ;
ಅದೇ ಗೋಳು;
ಅದೇ ದೊಂಬರಾಟ;
ಪಾತ್ರಗಳು ಬದಲಾಗುತ್ತೆ;
ಘರ್ಷಣೆ ಮಾತ್ರ ನಿರಂತರ

ನಾಗರೀಕ ಪ್ರಜ್ಞೆ




ದಿನವೂ ನಿಲ್ಲುತ್ತೇನೆ ರಸ್ತೆಯ ಬದಿ
ಟ್ರಾಫಿಕ್ ಸಿಗ್ನಲ್ ನಲ್ಲಿ;
ಅಲ್ಲಿ ನಡೆಯುವ ವಿದ್ಯಮಾನಗಳನ್ನು
ಗಮನಿಸುತ್ತೇನೆ;
ಮನದಲ್ಲಿ ನೂರು ಯೋಚನೆಗಳು
ಮನೆಮಾಡುತ್ತವೆ;
ಅನೇಕ ಪ್ರಶ್ನೆಗಳು ಮನದಲ್ಲಿ
ಶಾಂತಿಯ ಕದಡುತ್ತದೆ;
ಆದರೆ ನಾನು ಮಾತ್ರ ಮೊಕ ಪ್ರೇಕ್ಷಕ;
ರಸ್ತೆ ನಿಯಮ ಉಲ್ಲಂಘಿಸುವವರು;
ಎಲ್ಲೆಂದರಲ್ಲೇ ಉಗಿಯುವವರು;
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರು;
ಬಹಿರ್ದೆಸೆಗೆ ಹೋಗುವವರು;
ಕಸವನ್ನು ರಸ್ತೆಯಲ್ಲೇ ಚಲ್ಲುವವರು;
ಎಲ್ಲವೂ ಅಯೋಮಯವಿಲ್ಲಿ;
ಶುಚಿಯ ಬಗ್ಗೆ ಎಲ್ಲರಿಗೂ ಗೊತ್ತು
ಶುಚಿಯ ಬಗ್ಗೆ ನೀವು ಅವರನ್ನೇ ಕೇಳಿ,
ಗಂಟೆಗಟ್ಟಲೆ ಮಾತನಾಡುವರು
ಆದರೆ ಅದನ್ನು ಪಾಲಿಸುವ ವಿಷಯದಲ್ಲಿ
ಎಲ್ಲರೂ ನಿಸ್ಸೀಮರೇ ಉಲ್ಲಂಘಿಸುವುದರಲ್ಲಿ;
ನಮಗೆ ನಾಗರೀಕ ಪ್ರಜ್ಞೆ ಬರುವುದಾದರೂ ಯಾವಾಗ?
ನೂರು ಬುದ್ಧರು;
ನೂರು ಗಾಂಧಿಗಳು;
ಹುಟ್ಟಿಬಂದರೂ ನಮ್ಮ ನಡುವಳಿಕೆ ತಿದ್ದಲು ಸಾಧ್ಯವೇ?
ಆ ದಿನ ಬರುವುದೇ?
ಆ ದಿನ ಕನಸಾಗದಿರಲಿ, ಕನಸಾಗದಿರಲಿ.

ಸತ್ಯದ ದಾರಿ


ಹತ್ತು- ಹಲವಾರು ಸತ್ಯದ ದಾರಿಗಳಿವೆ;
ಈ ಸತ್ಯ ಎಲ್ಲರಿಗೂ ಗೊತ್ತು;
ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆ
ಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;
ನಾನು ಸತ್ಯ;
ನೀನು ಸತ್ಯ;
ರಾಮ ಸತ್ಯ;
ರಹೀಮ ಸತ್ಯ;
ಕ್ರಿಸ್ತ ಸತ್ಯ;
ಬಸವಣ್ಣ,ಬುದ್ಧ,ಮಹಾವೀರನೂ ಸತ್ಯ;
ವಿಜ್ಯಾನ,ಅಧ್ಯಾತ್ಮ ,ಹತ್ತು ಹಲವು ಸತ್ಯಗಳು
ಅವರವರಿಗೆ ಗೋಚರಿಸಿದ್ದು,ಪ್ರೇರಣೆಯಾಗಿದ್ದು ಸತ್ಯವೇ
ಅಲ್ಲಗೆಳದವರು ಯಾರು?
ನನ್ನಲ್ಲಿ ನಿನ್ನನ್ನು ಕಾಣದವ;
ರಾಮನಲ್ಲಿ ರಹೀಮನ ಕಾಣದವ;
ರಹೀಮನಲ್ಲಿ ರಾಮ,ಕ್ರಿಸ್ತ,ಬುದ್ಧ,ಬಸವನ ಕಾಣದವ;
ಅಂತಹವನ ಆಲೋಚನೆಗಳು ಹೇಗೆ ಸತ್ಯವಾದಾವು?
ಎಲ್ಲಾ ತತ್ವಗಳಲ್ಲಿ,ಧರ್ಮಗಳಲ್ಲಿ ಮಾನವೀಯತೆ ಮರೆಯಾದರೆ ಅದು ಸತ್ಯ ಹೇಗಾದೀತು?
ಎಲ್ಲಾ ಸತ್ಯಗಳು ಸುಕ್ಕುಗಟ್ಟಿದ ದಾರದಂತೆ;
ಒಳ ಸುಳಿಗಳ ದಾರಿಯಂತೆ;
ಎಲ್ಲೋ ಒಂದು ಕಡೆ ಎಲ್ಲವೂ ಸೇರಲೇಬೇಕು;
ಅದನ್ನು ಹುಡುಕುವವನೇ ನಿಜವಾದ ಅನ್ವೇಷಕ;
ಆ ದಾರಿಯೇ ಎಲ್ಲರಿಗೂ ಬೇಕಾಗಿದೆ;
ಅದೇ ನಿಜವಾದ ಸತ್ಯದ ದಾರಿ.

ಮುಖವಾಡ


ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತು
ಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;
ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದಕ್ಕೆ;
ಬಾಳು ಸಾಗಲೇಬೇಕು ಭರವಸೆಯಿಂದ ನಾಳೆಯ ಕಡೆಗೆ; ಮುಖವಾಡಗಳು,ಪೊಳ್ಳು ಆದರ್ಶಗಳು ನಮಗಾಗಿಯೇ ಬಹಳಷ್ಟಿದೆ ಬದುಕಿಗೆ;

ಹತ್ತು ಮುಖಗಳು;
ಹತ್ತು ಮುಖವಾಡಗಳು;
ನೂರು ದಾರಿಗಳು;
ಎಲ್ಲವನ್ನೂ ಅರಿಯಬೇಕು,ನಮ್ಮ ದಾರಿಯನ್ನು ನಾವೇ ಆರಿಸಿಕೊಳ್ಳಬೇಕು;

ತಪ್ಪು-ಒಪ್ಪುಗಳು;
ಸತ್ಯ-ಅಸತ್ಯಗಳು;
ನೂರು ದಾರಿದೀಪಗಳು;
ಎಲ್ಲವೂ ತಿಳಿದಿದೆ, ಅದರೂ ತಪ್ಪುಹೆಜ್ಜೆಯಿಡುತ್ತೇವೆ ನಮ್ಮ ಗುರಿ ಮುಟ್ಟಲು;

ನಗಬೇಕು ಎದುರುಬಂದವರಿಗೆ
ಮನದೊಳಗೆ ಅಸಹ್ಯ ಕೋಪ-ದ್ವೇಷವಿದ್ದರೂ
ನಮ್ಮ ಬೇಳೆ ಬೇಯಬೇಕಲ್ಲ, ನಮಗೆ ನಾವೇ ಮುಖವಾಡಗಳನ್ನ ತೊಡಿಸಿಕೊಂಡು
ದಿನವೂ ಒಂದೊಂದು ಮುಖವಾಡ, ನಿಜವಾದ ಮುಖವಾವುದೆಂದು ನಮಗೇ ಮರೆತಿದೆ,ನಿಜ ಮುಖ ನಮಗೇ ಬೇಕಿಲ್ಲ!;

ಎಲ್ಲವೂ ನಮಗಾಗಿ
ಎಲ್ಲವೂ ಪೈಪೋಟಿಗಾಗಿ
ಎಲ್ಲರಿಗೂ ನಾವೇ ಶ್ರೇಷ್ಠವೆಂದು ತೋರಿಸುವುದಕ್ಕಾಗಿ
ನಮ್ಮ ಅಧಃಪತನ ನಮ್ಮಿಂದಲೇ ಎಂಬುದ ನಾವು ಮರೆತಿದ್ದೇವೆ, ಆದರೂ ಹೊಡೆದಾಡುತ್ತೇವೆ ಸಾಯಲು;

ಎಲ್ಲವನ್ನು ಕಂಡು ನಗುಬರುವುದು
ಕನ್ನಡಿಯ ಮುಂದೆ ನಮ್ಮದೇ ಮುಖವಾಡ ಕಳಚುವುದು
ಹೆದರಿಕೆ ಇದೆ, ನಮ್ಮತನವನ್ನು ನಾವು ಮಾರಾಟ ಮಾಡಿಬಿಟ್ಟಿದ್ದೇವೆಂದು
ಅದರೂ ಪೊಳ್ಳು ಆದರ್ಶಗಳನ್ನು ಬಿಡುವುದಿಲ್ಲ, ಅದರಲ್ಲೇ ನಮ್ಮ ಸುಖವಿದೆ ಎಂಬ ಪರದೆ ಕಳಚಿದರೂ ನಾವು ಬಿಡುವುದಿಲ್ಲ.
ಮುಖವಾಡವಿಲ್ಲದೆ ನಾವು ಬದುಕಲು ಸಾಧ್ಯವೇ?

ಸಂಕ್ರಾಂತಿ


ಸೂರ್ಯನೋ ಹೊಸ ಪಥದತ್ತ ತೆರಳುತ್ತಾನೆ
ಅವನ ದಾರಿಯನ್ನು ನೋಡಿ ನಾವು ಹರ್ಷಿಸುತ್ತೇವೆ
ಹಬ್ಬ ಆಚರಿಸುತ್ತೇವೆ ಮಕರ ಸಂಕ್ರಾಂತಿಯೆಂದು

ಎಳ್ಳು ಬೆಲ್ಲ ಹಂಚಿ ಆನಂದಿಸುತ್ತೇವೆ
ಪ್ರೀತಿ-ವಿಶ್ವಾಸ ಹೆಚ್ಚಾಗಲಿಯೆಂದು ಆಶಿಸುತ್ತೇವೆ

ಹಬ್ಬಗಳು ಅರ್ಥ ಕಳೆದುಕೊಂಡರೂ
ಆಧುನಿಕತೆ ಆದರ್ಶವನ್ನು ಮರೆಮಾಚಿದರೂ
ಸಂಸ್ಕೃತಿ-ಪರಂಪರೆ ಮಾಸುತ್ತಿದ್ದರೂ
ಒಮ್ಮೆಯಾದರೂ ನಮ್ಮತನವ ನೆನೆಯುವ ದಿನವಾಗಲಿಯೆಂದು ಆಶಿಸುತ್ತೇವೆ

ಆಧುನಿಕತೆಯಲ್ಲಿ
ತಾಂತ್ರಿಕತೆಯಲ್ಲಿ
ನಗರದ ಆರ್ಭಟದಲ್ಲಿ
ನಮ್ಮ ತನವ ಮರೆತ ನಮಗೆ
ಹಬ್ಬಗಳು ಅರಿವನ್ನು ಮೊಡಿಸಲಿ
ಹಳ್ಳಿಯ ಜೀವನ ಎಂದೆಂದೂ ಹಸುರಾಗಿ ಆದರ್ಶವಾಗಿ ಕಾಣಲಿ
ಹಬ್ಬಗಳು ಸಾಮಾಜಿಕ ಸಾಮಾರಸ್ಯ ಮನಮನಗಳಲ್ಲಿ ಬಿತ್ತಲಿ
ಆಚರಣೆಗಳು ಅರ್ಥಪೂರ್ಣವಾಗಿರಲಿ ಎಂದು ಆಶಿಸುತ್ತೇವೆ.

ಹೊಸವರುಷ-2012


ಹೊಸ ವರುಷವು ಬಂತೊಂದು
ಎಲ್ಲೆಡೆಯಲ್ಲೂ ಸಂತಸ ತುಂಬಿದೆಯಿಂದು

ವರುಷ ವರುಷವೂ ಸಂತಸ ಉಕ್ಕುತ್ತಿದೆ ಕೇಳಿ
ಗುಂಡು ಪಾರ್ಟಿ.ಕೂಗಾಟ,ಕಿರುಚಾಟ ಹೊಸತನವೇನಿದೆ ಹೇಳಿ?

ಹೊಟ್ಟೆ ತುಂಬಿದವರಿಗೆ ಖರ್ಚುಮಾಡಲು ನೂರು ದಾರಿಗಳಿವೆ ಇಲ್ಲಿ
ಹಸಿದವರಿಗೆ ಒಂದೇ ಒಂದು ದಾರಿಯೊ ಕಾಣಿಸದು ಸಂಪಾದನೆಗೆ ಇಲ್ಲಿ

ಹೊಸತೋ ಹಳತೋ ಹಸಿದವರಿಗೆ ಎಲ್ಲವೂ ಒಂದೇ
ಸಮಾನತೆಯ ಸರ್ವೋದಯ ಆಗುವುದೇ ಇಂದು?

ಶತ-ಶತಮಾನಗಳು ಕಳೆದರೂ
ನೂರಾರು ಬದಲಾವಣೆಗಳು ಕಂಡರೂ

ಚೈತನ್ಯವೆಂದೂ ಮಾಯವಾಗಿಲ್ಲ ಈ ಜಗದಲ್ಲಿ
ಇರದುದೆಡೆಗೆ ನಡೆವ ಛಲ ಮನುಜ ಬಿಟ್ಟಿಲ್ಲ ಇಲ್ಲಿ

ಏನೇ ಇರಲಿ
ಹೊಸವರುಷ ಬರಲಿ
ಎಲ್ಲರಿಗೂ ಹರುಷ ತರಲಿ

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...