Monday, December 31, 2018

ಹೇಮಂತ

ಹೇಮಂತದ ಚಳಿ ಮೈಯೆಲ್ಲಾ ಗಡಗಡ
ಆಗಸದಲ್ಲಿ ಮಂಜಿನ ತೇರನೇರಿ
ವಿರಹ ಹೃದಯಗಳ ಮೇಲೆ ದಂಡೆತ್ತಿ ಬರುತಿಹನು ಚಂದ್ರ
ಎದುರಿಸುವರಾರು? ಮೋಹಿಸುವವರಾರು?
ಚಳಿಗೆ ಬೆದರಿ ಮೂಲೆ ಸೇರಿದರೆಲ್ಲರೂ
ಒಂದು ಕಡೆ ಚಳಿಯ ಧಾಳಿ,
ಮತ್ತೊಂದೆಡೆ ವಿರಹಾಗ್ನಿ!
ತನು-ಮನದ ಮೇಲೆ ಧಾಳಿ!
ಮೂಲೆ ಸೇರಿ ಬೆಚ್ಚಗೆ ಮಲಗಿದವರೇ ಹೆಚ್ಚು!
ಗಾಳಿಯ ಜೊತೆ ಸೆಣಸಿ ಬೆವರಿಳಿಸುವವರಾರು?
ಬರುತ್ತದೆ!, ಹೋಗುತ್ತದೆ! ಕಾಲಚಕ್ರ ನಿಲ್ಲದೆ...

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...