|| ಹಬ್ಬ||

ಮೈಕೊರೆಯುವ ಚಳಿ
ಏನಿದೆ ಹೇಳಿ ನಮ್ಮ ಬಳಿ
ನಾಳೆ ಹಬ್ಬ, ಎಳ್ಳು-ಬೆಲ್ಲ-ಕಬ್ಬು ಅದೇ- ಸಂಕ್ರಾಂತಿ\\
ಮೈ ಸುಡುವ ಬಿಸಿಲು
ಇರಲಾರೆವು- ಮರಗಳಲ್ಲಿ ಕಾಣುತ್ತಿದೆ ಬರೀ ಬಿಳಲು
ಚಿನ್ನದ ಚಿಗುರಿಗೆ ಕಾತರ ಎಲ್ಲೆಲ್ಲೂ ಹೊಸತನ ಅದೇ- ಯುಗಾದಿ\\
ಜಿಟಿ ಜಿಟಿ ಮಳೆ
ತಂಪಾಗಿತಿದೆ- ಹಸುರು ಹೊದ್ದಳು ಇಳೆ
ಹಬ್ಬ ಹಬ್ಬಗಳ ಸಾಲು- ಮುಂದೆ ಶ್ರಾವಣ-ಭಾದ್ರಪದ\\
ಹುಟ್ಟು-ಸಾವು-ಬಧುಕು
ನಾವೇಕಿಲ್ಲಿ?- ಗೊತ್ತಾಗಬೇಕು
ಮನದ ಕತ್ತಲು ಜಾರಬೇಕು- ಬೆಳೆಕಿನ ಅರಿವು-ದೀಪಾವಳಿ\\
ದುಷ್ಟ ಶಕ್ತಿ-ಶಿಷ್ಟ ಶಕ್ತಿ
ಅಹ೦ಮಿನದೇ ಕಾರುಬಾರು- ಮೂಲೆಗುಂಪಾಗಿದೆ ಭಕ್ತಿ
ತಾಯಿ ತಿದ್ದಬೇಕು-ಶಿಕ್ಷಿಸಬೇಕು-ಬಾ ದಸರೇ\\

|| ನಡೆದ ದಾರಿ||

ಕಣ್ಣ ಮುಂದೆ ಕಪ್ಪು ಕತ್ತಲು
ಮನದಲಿ ಸುಳಿದಿದೆ ಸಮಸ್ಯೆಗಳ ಸಾಲು ಸಾಲು
ಎದ್ದು ಹೊರಡಬೇಕು ನಾಳೆ
ಮೂಡಿಬರಲಿ ಆಶಾಕಿರಣದ ಹೊಂಬಿಸಿಲು\\

ಅದ್ಬುತ! , ಕತ್ತಲು ಕಳೆದಿದೆ
ಅಲ್ಲಿ ನೋಡು ಬಂಗಾರದ ಕಿರಣಗಳ ಬೆಳಕು
ಸಮಸ್ಯೆಗಳು ಕಳೇಯಬೇಕಿದೆ ಇಂದು
ನಾಳೆ ಬರಲಿ ಸಮಸ್ಯೆಗಳು ಸಾಧಿಸುವ ಛಲವಿದೆ\\

ಸಾಧನೆಯ ಮೆಟ್ಟಿಲುಗಳಿಗೆ ಕೊನೆಯೆಲ್ಲಿದೆ?
ಹಣ-ಪ್ರತಿಷ್ಟೆ ಬೇಕು ಬೇಕುಗಳಿಗೆ ಎಣೆಯೆಲ್ಲಿದೆ?
ನಡೆದು ಬಂದ ದಾರಿ ಮರೆತು ಹೋಗಿದೆ
ಸಂಬಂದಗಳು ಅರ್ಥಕಳೆದುಕೊಂಡು ಮೂಲೆಗುಂಪಾಗಿದೆ\\

"ಅಹಂ ಬ್ರಹ್ಮಾಸ್ಮಿ" ಒಂದೇ ಮಂತ್ರ
ಪ್ರಪಂಚ ಗೆಲ್ಲುವೆವೆಂದು ಹೊಸೆದಿರುವೆವು ತಂತ್ರ
ಮನದ ನಡುವೆ ಕಟ್ಟಿದ್ದೇವೆ ಬೇದಿಸಲಾಗದ ಕೋಟೆ
ಮನ-ಮನಗಳನ್ನು ಪ್ರೀತಿಯಿಂದ ಹಿಡಿಯಲಾಗದ ಬೇಟೆ\\

ನಾವೇ ಸೃಷ್ಟಿಸಿದ ಸಮಸ್ಯೆಗಳ ಸುಳಿಯಲ್ಲಿ ಹೊಡೆದಾಡುತ್ತಿದ್ದೇವೆ
ಏಕಾಂಗಿಯಾಗಿ ಭೇದಿಸುವೆವೆಂಬ ಛಲ ಮಣ್ಣಾಗಿಹೋಗಿದೆ
ನಾವೇ ಬೆಳೆಸಿದ ಸ್ವಾರ್ಥದ ಭೂತ ಕಣ್ಣಮುಂದೆ ರುದ್ರ ನರ್ತನಗೈಯುತ್ತಿದೆ
ಹುಟ್ಟು ಆಕಸ್ಮಿಕ ತಿಳಿದಿದೆಯಾದರೂ ಸಾವೇ ನಮ್ಮ ಬಾಳಪುಟದ ಪೂರ್ಣವಿರಾಮ ಗೊತ್ತಿದೆ\\

ಸಂಘರ್ಷದ ಬದುಕಿಗೆ
ಪೂರ್ಣವಿದಾಯ ಹೇಳಬೇಕಿದೆ
ಪ್ರಾಣಚಂಚು ಕಳೆದ ಮೇಲೆ ಬಿಟ್ಟು ಹೋಗುವುದಾದರೂ ಏನು?
ಕಳೆ ಕಳೆದುಕೊಂಡ ಶವ ಪ್ರೀತಿಪಾತ್ರರೂ-ಆಗದವರೂ ಭಾವಪರವಶ\\

ಎಲ್ಲರಿಗೂ ತಿಳಿದಿದೆ
ನಾವು ಸರತಿಯಲ್ಲಿ ನಿಂತೆದ್ದೇವೆಂದು
ಮುಂದೆ ಆಗುವೆವು ನಾವು ಕಳೆಬರ
ಕಣ್ಣೀರು ಹಾಕಬೇಡಿ ಸಾರ್ಥಕವಿಲ್ಲದ ಜೀವಕ್ಕೆ\\

ಸೋತ ಮನ

ಮನಸ್ಸು ತುಂಬಾ ನೊಂದಿದೆ
ದಾರಿ ಕಾಣದೆ ಚಡಪಡಿಸಿದೆ
ಕಾಣದ ಗುರಿಯತ್ತ ಕೈ ಚಾಚಿದೆ
ನಿಂತ ನೆಲದಲ್ಲಿ ನಿಲ್ಲಲಾಗದೆ ಬಸವಳಿದಿದೆ
ಸಮಾಧಾನದ ಮಾತಿನ ಅವಶ್ಯಕತೆಯಿದೆ
ಹೃದಯದಲ್ಲಿ,ಮನದಲ್ಲಿ ಚೈತನ್ಯ ತುಂಬುವ ಶಕ್ತಿ ಬೇಕಾಗಿದೆ
ಶಕ್ತಿ ಬತ್ತುವ ಮುನ್ನ
ಓ ಆಶಾಕಿರಣವೇ ಮನದಲ್ಲಿ ಬಾ....
ಅವಕಾಶದ ಹೆದ್ದಾರಿಯೇ ತೆರೆದುಕೋ ಬಾ...
ನನ್ನಲ್ಲಿ ಹೊಸ ಚೈತನ್ಯ ತುಂಬು ಬಾ...
ಬೇಗ ಬಾ ತಡಮಾಡದೆ....

|| ಯಾಂತ್ರಿಕ ಯುಗ||

ಇಲ್ಲಿ ಎಲ್ಲವೂ ಹತ್ತಿರ
ಎಲ್ಲಕ್ಕೂ ಬೇಗ ಸಿಗುತ್ತೆ ಉತ್ತರ\\

ಮಾಹಿತಿ ತಂತ್ರಜ್ನಾನದಿಂದಾಯಿತು ಕ್ರಾಂತಿ
ಜ್ಣಾನ-ವಿಜ್ಣಾನಗಳಿಂದ ಕಳೆಯುತಿದೆ ಭ್ರಾಂತಿ
ಇಂದು ನಾಳೆಗೆ ಕಡಿಮೆಯಾಗಿದೆ ಅಂತರ
ದೇಶ ದೇಶಗಳು ಕಾಣುತಿದೆ ಹತ್ತಿರ\\

ಹೆಚ್ಚಾಗಿದೆ ವೈಚಾರಿಕ ಸ್ವಾತಂತ್ರ
ಆದರಿಂದಲೇ ಜನರು ಅತಂತ್ರ
ಯಾವುದು ಸರಿ? ಯಾವುದು ತಪ್ಪು?
ವಿವೇಚಿಸದ ಮನ ಮಾಡಿದ್ದೆಲ್ಲವೂ ತಮಗೆ ಒಪ್ಪು!\\

ದೇಶ ಭಾಷೆ ಸಂಸ್ಕ್ರತಿಗಳು ಗೌಣ
ದುರಭಿಮಾನದ ಗುಂಪಿಗೆ ಹೆಚ್ಚೇ ಹಣ
ನೈತಿಕತೆಯಿಲ್ಲದ ನಡತೆ
ಜವಾಬ್ದಾರಿಯಿಲ್ಲದ ಜನತೆ\\

ಯುವ ಜನತೆಗೆ ಬೇಕು ಬೇಗ ಸುಖ
ಕಷ್ಟಪಡುವ ತಾಳ್ಮೆ ಬೇಕಿಲ್ಲ
ಕಷ್ಟ ಪಡುವುದಕ್ಕೆ ಅಡ್ಡದಾರಿಯಿಲ್ಲ
ವಾಮಮಾರ್ಗಕ್ಕೆ ಹತ್ತು ರಹದಾರಿಯಿದೆಯಲ್ಲ\\

ಮಧು ಗಂಟಲೊಳಗಿಳಿದರೆ ಸ್ವರ್ಗ ಮೂರೇ ಗೇಣು
ಇದುವೇ ಇಂದಿನ ಸತ್ಯ ಮಾಣು
ಸ್ವರ್ಗವೂ ಹತ್ತಿರ
ಸಾವು ಇನ್ನೂ ಹತ್ತಿರ\\

||ಸೋಗಲಾಡಿತನ||

"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಕೂಗಿಟ್ಟರೈ ಕವಿ ಪುಂಗವ
ಬನ್ನಿ ಬನ್ನಿ ವಿಶ್ವಪಥಕ್ಕೆ
ಬನ್ನಿ ಬನ್ನಿ ಸರ್ವೋದಯದ ಪಂಥಾಹ್ವಾನಕ್ಕೆ
ಮೂಗು ಹಿಡಿದು ಮುಸ್ಸಂಜೆಯ ಸಂಧ್ಯಾವಂದನೆಗೈಯುತ್ತಿದ್ದ ಅನಂತು
ಕೂಗು ಕೇಳಿದೊಡನೆಯೇ ಎದ್ದು ನಿಂತ
ಅತ್ತಿತ್ತ ನೋಡಿದ- ಪಕ್ಕದಲ್ಲೇ ಅಪ್ಪ ಮೂಗುಹಿಡಿದು ಕೂತಿದ್ದ
ಚಂಗನೆ ಮಾಯವಾಗಿ ಓಡುತ್ತಾ ಜನಜಂಗುಳಿಯಲಿ ಒಂದಾದ
ನೆಗೆದ ಒತ್ತಡಕ್ಕೆ ಹಾರಿದ ಜನಿವಾರ ಗೇಟಿನ ತುದಿಗೆ ಸಿಕ್ಕಿಹಾಕಿಕೊಂಡಿತ್ತು
ಅದಾವುದರ ಗಮನವೊ ಅನಂತುಗೆ ಆಗಲಿಲ್ಲ
ಅನಂತುವಿನ ಅಪ್ಪ ಕಣ್ಣು ಮುಚ್ಚಿ ಕುಳಿತೇಯಿದ್ದ
ದಾರಿತೋರುವ ದಿಸೆಯಲ್ಲಿ ನಡೆದಿದೆ
ಹಾದಿಬದಿಯೆನ್ನದೆ ಸಾವಿರ ಜನ ಸಾಗರದಂತೆ
ಇರುವೆ ಸಾಲುಗಳೋ-ಕುರಿಯ ಮಂದೆಯೋ ಸಾಗಿತಿದೆ ವಿಷಯ ಗೊತ್ತಿಲ್ಲದೆ
ಕುತೂಹಲದಿಂದ ಜನ ಸೇರುತ್ತಿದ್ದಾರೆ
ಧೂಳು- ಗದ್ದಲ ಮುಗಿಲಿಗೇರುತ್ತಿದೆ
ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಜನರೋಜನ
ಅರಮನೆಯ ಜನಕ್ಕೂ ಕುತೂಹಲ
ಇದೇನು ಇಂದೇ ದಸರೆಯೇ?-ಪ್ರಶ್ನೆಯ ಛಾಯೆ ಮುಖಗಳಲ್ಲಿ
ಪೋಲಿಸಿನವರಿಗೆ ಬಲುಭಯ ಟಿಪ್ಪುವಿನ ಸೈನ್ಯ ಅರಮನೆಗೆ ಮುತ್ತಿಗೆಹಾಕುತ್ತಿದೆಯೇ?
ಚರ್ಚಿನ ಮುಂದೆ ಅದೇ ಸಂತ ಫಿಲೋಮಿನಾ ಮುಂದೆ ಜನಸಾಗರ
ಜನರ ಕೂಗು"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
"ಗಲಭೆ" ಎಂದುಕೊಂಡು ಚರ್ಚಿನ ಜನ ಕದವ ಮುಂದಿಕ್ಕಿದರು
ಕದದ ಮೇಲಿನ ಶಿಲುಬೇ ಅಣಕಿಸುತ್ತಿತ್ತು
"ನನ್ನವರು ಯಾರೂ ಬರರು- ಅವರೆಲ್ಲರೂ ಶಿಲುಬೆಗೆ ಶರಣರು"
"ವಿಶ್ವಪಥ- ಮನುಜ ಮತ ನಮಗೆ ಗೊತ್ತಿಲ್ಲ
ನಮಗೆ ಗೊತ್ತಿರುವುದು ಕ್ರಿಸ್ತ ಮತ-ಕ್ರಿಸ್ತ ಪಥ"
"ಬಂದ ದಾರಿಗೆ ಸುಂಕವಿಲ್ಲ ಮುಂದೆ ಹೋಗಿ
ಹಿಂದುಗಳಂತೆ ನಾವೆಂದೂ ಧರ್ಮ ಭ್ರಷ್ಟರಲ್ಲ ಇಲ್ಲಿಂದ ಕಾಲುತೆಗೆಯಿರಿ" ಎಂದು
ಜನರಿಗೆ ತಿಳಿಯಲ್ಲ ಅದರ ಕುಹಕ- ಅಲ್ಪಸಂಖ್ಯಾತರು- ಏನೆಂದರೂ ತಪ್ಪಿಲ್ಲ ಬಿಡಿ
ಜನರಿಗೆ ಎತ್ತ ಹೊರಟಿದೆ ಈ ಗುಂಪು
ತಿಳಿಯದಾಯಿತು- ಓ ಮರತೆ ನನ್ನ ಕೆಲಸ
ಮನೆಗೆ ಅಡುಗೆ ಸಾಮಾನು ತರಬೇಕಿತ್ತು
ಈ ಗೊಡವೆಯಲ್ಲಿ ಎಲ್ಲವೂ ಎಲ್ಲರಿಗೂ ತಮ್ಮ-ತಮ್ಮ ಕೆಲಸ ಮರೆತಿತ್ತು
ಆಕರ್ಷಣೆ ಕಡಿಮೆಯಾಯಿತು- ಗುಂಪು ಚದುರಿತು
ಇದ್ದವರು ಹತ್ತು-ಹಲವು ಮಂದಿ- ಮುಂದೆ ಹೋಯಿತು ಗುಂಪು
ಕೂಗು ನಿಂತಿರಲ್ಲಿಲ್ಲ"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಜನ ಹೋಗುವವರು ಹೆಚ್ಚು- ನಿಂತು ಮುನ್ನಡೆಯುವವರು ಹತ್ತು-ಇಪ್ಪತ್ತು
ಮುಂದೆ ಜಾಮೀಯಾ ಮಸೀದಿ
ಅಲ್ಲಿಂದಲಾದರೂ ಜನರು ಬರುವರೆಂಬ ಆಸೆ
ಘೋಷಣೆ ಕೂಗಿ ಒಳಗಿಂದ ಜನ ಬಂದು ಸೇರುವರೆಂದು
ಕೂಗು ಹಾಕುವ ಮುಂಚೆಯೇ ಮಸೀದಿಯಿಂದ ಹೊರಟಿತು
ಅಲ್ಲಾ..... ಅಲ್ಲಾಹು ಅಕ್ಬರ್...
ಮೈಕಾಸುರನ ದಾಳಿಗೆ ಮಂದಿ ನಲುಗಿತು
ಗುಂಪು ಮಾತ್ರ ಮುಂದೆ ಹೊರಟು ಹೋಯಿತು
ಇದ್ದವರು ಕೆಲವೇ ಕೆಲವರು
ವೆಂಕ-ಶೀನ- ಅನಂತು
ಹಿಂತಿರುಗಿ ನೋಡಿದರೆ ಸಾಗಿ ಬಂದ ದಾರಿ ಬಹಳ
ಮುಂದೆ ಮನುಜ ಪಥದ ದಾರಿ ಕಾಣದಾಗಿತ್ತು
ಹೋಗುವುದಾದರೂ ಎಲ್ಲಿಗೆ?
ಹೊಟ್ಟೆ ಚುರುಗುಟ್ಟುತುದೆ ಬೇರೆ!
ಬೇರೆ ದಾರಿ ಕಾಣುತ್ತಿಲ್ಲ- ಮರಳಿ ಗೂಡಿಗೆ ಪಯಣ
ಭುಜದಲ್ಲಿ ಜನಿವಾರ ಕಾಣಿಸಲಿಲ್ಲ ಅನಂತೂಗೆ
ಕಸಿವಿಗೊಳ್ಳುತ್ತಾ ಹೊರಟೇಬಿಟ್ಟ ಹುಡುಕಲು
ಸಿಗದಿದ್ದರೆ ಮೂರು ಎಳೆಯದಾರಕ್ಕೆ ಬರವೇನಿಲ್ಲವೆಂದುಕೊಂಡ
ಎದುರಿಸುರು ಬಿಡುತ್ತಾ ಓಡೋಡಿ ಬಂದ ಮನೆಗೆ
ಗೇಟಿನ ತುದಿಯೊಂದಕ್ಕೆ ಸಿಕ್ಕಿ ಹಾರಾಡುತ್ತಿದ್ದ ಜನಿವಾರವ ಕಂಡು ಸಂತೋಷಗೊಂಡ
ಮತ್ತೆ ಕೂಗಬೇಕೆನಿಸಿತು ಅನಂತೂಗೆ
"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಅನಂತೂಗೆ ಅನಿಸಿತು
"ಗುಡಿಯ ಬಿಟ್ಟು ಹೋಗುವರುಂಟು
ಮಸೀದಿ-ಚರ್ಚುಗಳ ಬಿಟ್ಟು ಬಂದವರುಂಟೇ!"
ಎಲ್ಲವೂ ಸರಿ ನಾವೆಲ್ಲರೂ ಸರಿ
ಹಿಂದೂಗಳು ಮಾತ್ರ ವಿಚಿತ್ರ-ಗಾಳಿ ಬಂದಾಗ ತೂರಿಕೊಳ್ಳುವವರು
ತಮ್ಮ ತನವ ಕಳೆದುಕೊಳ್ಳುವವರು
ಹೊಟ್ಟೆಯ ಸುಖಕ್ಕೆ ಏನು ಬೇಕಾದರೂ ಮಾರಿಕೊಳ್ಳುವವರು
ಮತ್ತೆ ಕೊಗಬೇಕೆನಿಸಿತು
"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಅಡುಗೆ ಮನೆಯ ದಾರಿ ಚೆನ್ನಾಗಿ ಕಾಣುತ್ತಿತ್ತು.

|| ಮೂಲೆಗುಂಪಾದವರು||

ಬಿಸಿಗಾಳಿ ಎಲ್ಲೆಡೆ ತಣ್ಣನೆ ಗಾಳಿ ಎಲ್ಲಿ ಹುಡುಕಲಿ?
ಬೆಟ್ಟಗುಡ್ಡ ನದಿತೋರೆಗಳಿಲ್ಲಿಲ್ಲ
ಬಿಸಿಲಬೇಗೆಯ ಮಕ್ಕಳು ನಾವು
ಬಿಸಿಲಬೇಗೆಯ ಮಕ್ಕಳು ನಾವು

ಬಾಯಿ ಬಿಟ್ಟು ನಿನಗಾಗಿ ಕಾಯುತಿಹೆ
ಬಾರೆ ಕರಿಮೋಡಗಳೆ ನೀರತನ್ನಿ
ನನ್ನ ಮಕ್ಕಳ ದಾಹ ತೀರಿಸ ಬನ್ನಿ
ಬಿಸಿಲಬೇಗೆಯ ಮಕ್ಕಳ ತಣಿಸಬನ್ನಿ

ಮರಗಿಡ ಕೋಗಿಲೆಗಳು ಇಲ್ಲಿವೆ
ಮಲೆನಾಡ ಗಾನಕೋಗಿಲೆಗಳಂತೆ
ಬಿಸಿಲಕೋಗಿಲೆಗಳು ಹಾಡಬಲ್ಲವು
ತನ್ನ ತಾಯ ಸೌಂದರ್ಯವ ಹೊಗಳಬಲ್ಲವು

ನಾವು ನಾವು ಬಲಿಷ್ಟರೇ?
ಇತಿಹಾಸದಲ್ಲಿ ಇಲ್ಲಿಯವರ ನೆರಳಿಲ್ಲ
ಬಲ್ಲವರೇ ಎಲ್ಲಾ! ಮೊಲೆಗೆತಳ್ಳಿ ನಕ್ಕವರೇ!
ಕಾಲಕಸದಂತೆ ಕಂಡವರೇ! ಆಟಕುಂಟು ಲೆಕ್ಕಕ್ಕಿಲ್ಲ

ದೇಶಕ್ಕೆ ಸ್ವಾತಂತ್ರ ಬಂತು!
ಯಾರಿಗೆ ಬಂತೋ ಸ್ವಾತಂತ್ರ? ನರಿ ರಾಜಕಾರಣಿಗಳಿಗೆ
ಹಬ್ಬ ಆಳುವವರಿಗೆ ನರಕ ಇಲ್ಲಿ ಬದುಕಿದವರಿಗೆ
ಪ್ರಜಾಪ್ರಭುತ್ವ ಗುಲಾಮಗಿರಿಯ ಇನ್ನೊಂದು ಹೆಸರು

||ಕೃಷ್ಣನೆಂದರೆ ನಂಬಿಕೆ||

ಕೃಷ್ಣಾ ನಿನ್ನ ಕಂಡರದೇಕೋ
ಮನಸ್ಸಿಗೆ ತುಂಬಾ ಸಂತಸ

ಕೃಷ್ಣನೆಂದರೆ ಕಪ್ಪಂತೆ
ನಂಬಿದವರ ಜ್ಯೋತಿಯಂತೆ

ಕೃಷ್ಣನೆಂದರೆ ಒಲವಂತೆ
ಗೋಪಿಯರ ಪ್ರಾಣದೇವನಂತೆ

ಕೃಷ್ಣನೆಂದರೆ ಸ್ನೇಹವಂತೆ
ಸುಧಾಮನ ಪಾದ ಸೇವಕನಂತೆ

ಕೃಷ್ಣನೆಂದರೆ ಗೌರವವಂತೆ
ಭೀಷ್ಮರ ಗುರುವಂತೆ

ಕೃಷ್ಣನೆಂದರೆ ಶಕ್ತಿಯಂತೆ
ನಮ್ಮೊಳಗಿನ ಮನದ ಬಿಂಬವಂತೆ

||ವಾದ-ಪಥ-ಮತ||

ಆ ವಾದ ಈ ವಾದ
ಈ ಮತ ಆ ಮತ ಕೇಳಿರಿ
ಮನಸು ಗಟ್ಟಿ ಮಾಡಿ
ದೂರಕೆ ಅದನು ತಳ್ಳಿರಿ

ಕೋಮುವಾದ ಜಾತಿವಾದ
ಏಕೆ ಬೇಕು ಜೀವಕೆ?
ನಕ್ಸಲ್ ವಾದ ಮನುವಾದ
ತಳ್ಳಬೇಕು ಮಸಣಕೆ

ವಿಶ್ವ ಪಥ-ಮನುಜ ಮತ
ಕಾಣುವಿರೇಕೆ ಕನಸು-ಹಳತು
ರಾಜಕೀಯ ಪಥ-ದುಡ್ಡಿನ ಮತ
ಇಂದು ಮುಂದೆ ಜನಕೆ ಹಸುರು-ಹೊಸತು

ಸ್ವಾರ್ಥ ಪಥ-ದುಡ್ಡಿನ ಮತ
ಇದುವೆ ಕಾರಣ ಸರ್ವಕೂ
ಆ ಪಥ ಈ ಮತ
ಭ್ರಾಂತಿ ತೊಂದರೆ ಎಲ್ಲಕೂ

ನನ್ನ ಕನಸು

  ಕನಸು ಕಾಣಬೇಕು ನನ್ನ ಕನಸು ಕಾಣಬೇಕು ನಾ ಬಾನಲ್ಲಿ ಹಾರಾಡಬೇಕು ಅದಕ್ಕೆ ನನಗೆ ರೆಕ್ಕೆಗಳು ಬೇಕು ಬಾನಲ್ಲಿ ತೇಲಾಡಬೇಕು ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗ...