Wednesday, January 24, 2018

ಸಹಿಸಿಕೋ

 ಓ ಮನಸೇ ಸಹಿಸಿಕೋ ಈ ನೋವನು
ಆ ನೋವೇ ನೀನಾಗಿಬಿಡು,ಛಲ ಬಿಡದೆ
ಕಣ್ಣೀರು ಬತ್ತಿಹೋಗುವ ತನಕ,ಸತತ:
ಒಮ್ಮೆ ನಕ್ಕುಬಿಡು ಕಾಲೆಳೆವ ಜನರ 
ನಡೆಯ ಕಂಡು,ಕಲ್ಲು ಬಂಡೆಯಾಗಿಬಿಡು
ಅವರೇ ಹಣೆಯ ಚಚ್ಚಿಕೊಳ್ಳಲಿ ಬಿಟ್ಟು ಬಿಡು,
ನಿರ್ಲಿಪ್ತನಾಗು,ಪ್ರಾಮಾಣಿಕತೆಯ ಬಿಡದಿರು, 
ನಾಳೆಗಳ ಭರವಸೆಯ ತೊರೆಯದಿರು,
ಕಾಲವೆಂದೂ ನಿಂತ ನೀರಲ್ಲ,ಅಧಿಕಾರ 
ಧರ್ಪವೆಂದೂ ಶಾಶ್ವತವಲ್ಲ,ತಾಳ್ಮೆಯ ಶಕ್ತಿ ನಿನ್ನದಾಗಲಿ

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...