ಹೊಸ ದಿನದರ್ಶಿಕೆ

ಬಂದದ್ದೆಲ್ಲಾ ಬರಲಿ ಜೀವನ ಪ್ರೀತಿ ಉಳಿಯಲಿ
ಹಳೆ ದಿನದರ್ಶಿಕೆ ನಿನಗೆ ವಂದನೆಗಳು
ಪ್ರತಿದಿನದ ಉರುಳುವಿಕೆಯಲ್ಲಿ ನಿನ್ನ ಪಾತ್ರವೂ ಇದೆ
ಸದಾ ನಗುತ್ತಲೇ ತಾರೀಖುಗಳ ತೋರಿದವ ನೀನು
ನಮ್ಮ ಮನೋವಿಕಾರಗಳಿಗೆ ಸಾಕ್ಷಿ ನೀನೇ ....
ನಮ್ಮ ಕೋಪಗಳಿಗೆ ಮೊದಲು ಬಲಿಯಾದವ ನೀನು
ದುಃಖವೆನಗೆ ಇಂದೋ ಇಲ್ಲ ನಾಳೆಯೋ ನಿನ್ನ ಬದಲಿಸಬೇಕಿದೆ
ಒಮ್ಮೆ ನಕ್ಕು ಬಿಡು, ನಮ್ಮ ಹುಚ್ಚಾಟಗಳಿಗೆ
ನಿನ್ನ ಗೆಳೆಯನ ಆಹ್ವಾನಿಸುವ ಸುಸಮಯವಿದು
ಹೊಸ ವರುಷದ ದಿನದರ್ಶಿಕೆ ನಿನಗೆ ಸ್ವಾಗತ

ಹೊಸ ಆಕಾಂಕ್ಷೆ

ಸರದಿಯಂತೆ ದಿನ, ಮಾಸ,ತಿಂಗಳುಗಳು ಜಾರಿದವು
ವರುಷದ ಕೊನೆಯ ದಿನಕ್ಕೆ ಬಂದು ನಿಂತಿಹೆವು
ನೋವೋ ನಲಿವೋ ವಿಷಾದದ ನಗೆ ಬೀರುತ್ತಾ
ಹೊಸ ವರುಷವ ಸ್ವಾಗತಿಸಲು ಸಿದ್ಧವಾಗಿಹೆವು||

ಹೊಸ ಹೊಸ ಆಕಾಂಕ್ಷೆಗಳೊಂದಿಗೆ
ಹೊಸ ಹೊಸ ಸಂಕಲ್ಪದೊಂದಿಗೆ ಕಾಯುತಿಹೆವು
ಹಳೇ ದೇಹ, ಹಳೇ ಮನಸ್ಸು ,ಹೊಸಹುರುಪು
ಭಯ,ಕುತೂಹಲ,ನೋವುಗಳು ಧೈರ್ಯ ತುಂಬಿಹವು||

ಗೆಳತೀ .....

ಹಾಗೆ ನೋಡಬೇಡ ಗೆಳತೀ
ಎದೆಯಲ್ಲಿ ಹೃದಯ ಬಡಿತ ಹೆಚ್ಚಾಗುವುದು
ನಿನ್ನ ತುಟಿಯಂಚಿನ ನಗುವು ಈ ಬಡಪಾಯಿಯ ಹೃದಯವ ಇರಿಯುವುದು
ಹೇಳು ಎಷ್ಟುಬಾರಿ ಕೊಲ್ಲುವೇ !
ಈ ಮನಸು,ಹೃದಯ ನಿನ್ನ ಕಣ್ಣಸನ್ನೆಗೆ ವಶವಾಗಿದೆ
ಹೃದಯ ಬಯಸಿದೆ ನಿನ್ನ ಸನಿಹ
ನಿನ್ನ ಮಾತುಗಳ ಕೇಳಬೇಕೆನಿಸಿದೆ ಈ ನನ್ನ ಕಿವಿಗಳಿಗೆ
ಹತ್ತಿರ ಬಂದು ಮಾತನಾಡು
ಸುಮ್ಮನೆ ವಾರೆನೋಟ ಬೀರಿ ನಕ್ಕು ಕೊಲ್ಲಬೇಡ
ನಿನ್ನ ನಗುವು, ಕಿಲಕಿಲ ಮಾತು
ನನ್ನನ್ನೆಲ್ಲಿಗೂ ಸೆಳೆದಿದೆ,ನಿನ್ನ ರೂಪ ಸತಾಯಿಸಿದೆ
ಕಣ್ಣ ತೆರೆದರೂ ನೀನೇ ...
ಕಣ್ಣ ಮುಚ್ಚಿದರೂ ನೀನೇ ,ಬೇಡ ಗೆಳತೀ ಹಿಂಸಿಸಬೇಡ
ದೂರ ಹೋಗಬೇಡ,ತಲ್ಲಣ ಮನದಲ್ಲಿ
ಬಂದುಬಿಡು ಸಪ್ತಪದಿ ತುಳಿದು ಬಾಳ ಪಯಣದಲ್ಲಿ ಒಂದಾಗೋಣ ।।

ಬೆಳಕ ತವಕ

ಒಳಗೆ ನನ್ನೊಳಗೆ ಇಳಿಯುತಿಹೆನು
ಕತ್ತಲ ಪಾತಾಳದೊಳಗಡೆ ಬೆಳಕನರಸಿ
ಕತ್ತಲೆಂದಮೇಲೆ ಬೀಳುಗಳೇ ಹೆಚ್ಚು
ನಿಯಂತ್ರಣವಿಲ್ಲದ ಬೀಳುಗಳಿಗೆಲ್ಲೆ ಎಲ್ಲಿದೆ ?
ಮನದೊಳಗೆ ತವಕವೊಂದೇ ಬೆಳಕು,ಬೆಳಕು
ಜರ್ಜರಿತವಾಗಿಹ ಮನ ಸಾವಧಾನದಿ ಶಾಂತಿ ಶಾಂತಿ ಎಂದುಸುರಿದೆ ;
ಸೋಲುಗಳ ಸರಮಾಲೆಯನ್ನೇ ಹೊದ್ದವನು
ಸೋಲೆಂದರೆ ಮನದಲಿ ಭಯವುಳಿದಿಲ್ಲೆನಗೆ
ಸೋಲೆಮೆಟ್ಟಿಲಾಗಿಸಿ ಎದ್ದು ನಡೆವ ಶಕ್ತಿ-ಯುಕ್ತಿಯಿಹುದು
ಸತತ ಪ್ರಯತ್ನದ ಫಲವದು ನೋವನುಂಗಿ
ಇಂದೋ -ನಾಳೆಯೋ ಗುರಿ ತಲುಪುವೆ ಆ ಬೆಳಕಕಾಣುವ ತವಕವಿದೆ ಮನದಲ್ಲಿ;

ಕಾಣದ ಸುಖವ ಅರಸುತ್ತಾ....

ಎಲ್ಲಿಂದಲೋ ಬಂದವರು ನಾವು
ಕಾದಿಹೆವು ನಾವು ನಮ್ಮ ದಾರಿ ಸವೆಸಲು
ಗಂಟು-ಮೂಟೆ ಹೊತ್ತೇ ಹೊರೆಟಿರುವೆವು
ಜೀವನದ ಮುಂಜಾವಿನಲ್ಲಿ ನಾನು-ಅವಳು;

ಹರೆಯದ ಕರೆಗೆ;
ಹಿರಿಯಜೀವಗಳ ಒತ್ತಾಸೆಗೆ ಒಂದಾದವರು;
ಸುಖ ದುಃಖ ಜೊತೆಜೊತೆಯಾಗಿ ಅನುಭವಿಸಿದವರು
ಹೊಂಗನಸುಗಳ ಬೆನ್ನೇರಿ ಹೊರಟವರು ನಾವು
ಆಗಿದ್ದ ಚೈತನ್ಯ ದೇಹದಲ್ಲಿ ಇಬ್ಬರಿಗೂ ಈಗಿಲ್ಲ;
ಜೀವನದ ಸಂಜೆಯಲ್ಲಿ ನಾವಿಬ್ಬರು ಕಾಯುತಿಹೆವು
ಮುಂದಿನ ದಾರಿ ಅದಾವುದೋ?
ರೈಲು ನಿಂತೇ ಯಿದೆ ,ಕೈಯಲ್ಲಿ ಟಿಕೇಟಿದೆ;
ಪಯಣ ಸಾಗದೆ ನಿಂತಿದೆ;
ನಾನು-ಅವಳು ಬಿಟ್ಟರೆ ಮತ್ಯಾರು ಅಲ್ಲಿಲ್ಲ
ಎಲ್ಲಿಂದಲೋ ಬಂದವರು
ಎತ್ತಲೋ ಹೊರಟವರು
ಕಾಣದ ಸುಖವ ಅರಸುತ್ತಾ....

ನಡೆಮುಂದೆ

ದೂರ ದೂರ ನಡೆದು ಬಂದು ವರುಷಗಳಾದವು
ಹಿಂತಿರುಗಿ ನೋಡಲು ಸವೆಸಿಹ ದಾರಿ ಅನನ್ಯವೇ!
ತೂಗು ಹಾಕಿದರೆ ಗಳಿಕೆಗಿಂತ ಕಳೆದುಕೊಂಡುದುದೇ ಹೆಚ್ಚು
ನಡೆದ ದಾರಿ ಸುಗಮವೇನು?ಪಟ್ಟ ಕಷ್ಟ ನಷ್ಟಗಳೆಷ್ಟು?
ನನ್ನವರೆಂದುಕೊಂಡವರೆಲ್ಲ ಬಹದೂರ ನಡೆದಿಹರು
ನಾನು ನಿಂತಲ್ಲಿಯೇ ನಿಂತ ಅನುಭವ,ಅಪಮಾನ
ನಿಷ್ಠೆಯಿಂ ಕೆಲಸಮಾಡುವವರಿಗಿದು ಕಾಲವಲ್ಲ
ಕುಹಕ ಕಪಟನಾಟಕ ಮಾಡುವವರಿಗಿದು ಸಕಾಲ
ನಮ್ಮಂತಹವರು ನಿಷ್ಠೆಯಿಂ ಮಾಡುವುದ ಇಷ್ಟಪಟ್ಟವರಿಲ್ಲ
ಎಲ್ಲವಂ ಬಲ್ಲಾತ ಕುಹಕ ನಗೆಬೀರಿ ಗೊತ್ತಿಲ್ಲದವನಂತೆ ನಿದ್ರಿಸಿಹನು
ಸಹನೆ,ತಾಳ್ಮೆ ನನಗಿಹುದೇನೆಂದು ಪರೀಕ್ಷಿಸುತಿಹನು
ಅಂಜದೆ,ಅಳುಕದೆ ಆವಫಲಕ್ಕೂ ಆಸೆಪಡದೆ ಮಾಡು ಕೆಲಸವಮ್
ನಿನ್ನ ಕರ್ತವ್ಯವ ಮಾಡು ಪಾಲಿಗೆ ಬಂದದ್ದು ಪಂಚಾಮೃತ
ಧ್ಯಾನಿಸು ಸಮಾಧಾನದಿಂ ನಡೆಯದುವೆ ಏಳಿಗೆಗೆ ದಾರಿ
ಮುಂದೆ ಕಾದಿಹುದು ಕಾಣದ ಭಾಗ್ಯದ ಹಾದಿ
ಮುಂದೆ ನಡೆ ಸಮಾಧಾನದಿ ಬೇಡ ಅವಿವೇಕ
ನಡೆ ಮುಂದೆ ನಡೆಮುಂದೆ ಕಾಲವಂ ನಂಬು
ನಿನ್ನ ಕೈಬಿಡದು ನಿಷ್ಠೆಯಿಂ ಮೌನದಿ ಸಾಧಿಸು ।।

ಚೆನ್ನಕೇಶವ

ಶೈವರು ಶಿವನೆನ್ನುವರು
ವೇದಾಂತಿಗಳು ಪರಬ್ರಹ್ಮನೆನ್ನುವರು
ಬೌದ್ಧರು ಬುದ್ಧನೆನ್ನುವರು
ನೈಯಾಯಿಕರು ಕರ್ತನೆನ್ನುವರು
ಜೈನರು ಜಿನನೆನ್ನುವರು
ಕಾಯಕ ಮಾಡುವವರಿಗದೆ ದೈವವೋ
ಮನಕೊಪ್ಪಿದ ಕೆಲಸವ ಆನಂದಿಸುವವನೇ ದೇವನು
ಆನಂದದಲಿ ಆನಂದನವನು
ಅನಂತದಲಿ ಅನಂತನವನು
ಎಲ್ಲರಿಗೂ ಒಬ್ಬನೇ ಅವನು
ಒಬ್ಬನಾದರೂ ನಾಮ ಮಾತ್ರ ಹಲವು
ಅವನೇ ಚೆನ್ನಿಗರಾ ಚೆನ್ನ ಬೇಲೂರಿನ ಚೆನ್ನಕೇಶವ ।।

ಬೆಳಕು ಹೊರಳುತಿದೆ ಬಾ...

ಸುತ್ತಲೂ ಹಬ್ಬಿಹುದು ಹಸಿರ ಸಿರಿ
ಕತ್ತಲು ಆವರಿಸುತ್ತಿದೆ ಬೆಳಕನುಂಗಿ
ಹೊಳೆಯಲ್ಲಿ ತೇಲಿಬರುತಿದೆ ಅನವರತ ಸಂಗೀತದ ಸುಧೆ
ಕೊಡದಲಿ ತುಂಬಿಹುದು ತಂಪನೆಯ ನೀರು
ಗೆಳತಿಯೋ ಕಳೆದುಹೋಗಿಹಳು ತನ್ನಿನಿಯನ ಧ್ಯಾನದಲ್ಲಿ
ಅವಳ ಮುಖವೋ ಹೊಳೆಯಿತಿಹುದು ಹುಣ್ಣಿಮೆಯ ಚಂದ್ರನಂತೆ
ಕಾದು ಕಾದು ನಾವಂತೂ ಸೋತು ಸೊರಗಿದೆವು
ಪ್ರಿಯೇ ! ಮರಳುವ ಬಾ... ಬೆಳಕು ಹೊರಳುತಿದೆ ಬಾ...
ನಾಡು ಕೈಬೀಸಿ ಕರೆಯುತಿದೆ ಮಂಗಳಮುಖಿ ಬಾರೆಂದು ।।

ಗದ್ದುಗೆಯ ಗದ್ದಲ

  ಓಹ್ ! ಇವತ್ತು ಹೊಸ ಗದ್ದುಗೆಗೆ ನಾಯಕನ ಪಟ್ಟಾಭಿಷೇಕ ಸಾಕಷ್ಟು ಗ್ಯಾರಂಟಿ ಭರವಸೆಗಳ ಹರಿಸಿ ಇಪ್ಪತ್ತು ದಿನ ಬೆವರು ಹರಿಸಿ ಎದುರಾಳಿಯನ್ನ ಪಂದ್ಯದಲ್ಲಿ ...