Saturday, December 8, 2018

ಭರವಸೆ

ಎಲ್ಲಿ ಹೋದೆಯೋ ಓ ಚೆನ್ನದ ಹಾಡುಗಾರ
ಚಿನ್ನದ ಕಂಠದ ಮಾಟಗಾರ
ಸೊರಗಿಹುದು ಈ ಹೃದಯ ತಂಪೆಳಲ ನೀಡು ಬಾ//

ಎಲ್ಲಿ ಹೋದೆಯೋ ಮನದಲ್ಲಿ ಮೂಡಿದೆ ಭಯ ಆವೇಗ
ಕಡೆಗಣಿಸಿದೆ ನೀನಿಲ್ಲದೆ
ಹಾತೊರೆಯುತಿದೆ ಮನ ಭರವಸೆ ಮೂಡಿಸು ಬಾ//

ನಿನ್ನ ನಂಬಿಹೆನು ,ನೀನೊಬ್ಬನೇ ಅಂತಿಮ ಭರವಸೆ
ಯಾರು ಬಾರದಿದ್ದರೇನು?
ನೀ ಬರುವೆಯೆಂಬ ಹೆಬ್ಬಯಕೆಯಿದೆ ಕರುಣೆ ತೋರಿಸು ಬಾ//

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...