Saturday, December 8, 2018

ಭರವಸೆ

ಎಲ್ಲಿ ಹೋದೆಯೋ ಓ ಚೆನ್ನದ ಹಾಡುಗಾರ
ಚಿನ್ನದ ಕಂಠದ ಮಾಟಗಾರ
ಸೊರಗಿಹುದು ಈ ಹೃದಯ ತಂಪೆಳಲ ನೀಡು ಬಾ//

ಎಲ್ಲಿ ಹೋದೆಯೋ ಮನದಲ್ಲಿ ಮೂಡಿದೆ ಭಯ ಆವೇಗ
ಕಡೆಗಣಿಸಿದೆ ನೀನಿಲ್ಲದೆ
ಹಾತೊರೆಯುತಿದೆ ಮನ ಭರವಸೆ ಮೂಡಿಸು ಬಾ//

ನಿನ್ನ ನಂಬಿಹೆನು ,ನೀನೊಬ್ಬನೇ ಅಂತಿಮ ಭರವಸೆ
ಯಾರು ಬಾರದಿದ್ದರೇನು?
ನೀ ಬರುವೆಯೆಂಬ ಹೆಬ್ಬಯಕೆಯಿದೆ ಕರುಣೆ ತೋರಿಸು ಬಾ//

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...