ಏಕೆ ನೆನಪಾಗುತಿಹೆ ?

ಏಕೆ ನೆನಪಾಗುತಿಹೆ ಇಂದು
ಇಷ್ಟು ದಿನವೂ ಇಲ್ಲದ ನೆನಪು
ಇಂದೇಕೆ ಕಾಡುತಿದೆ ಬಿಡದೆ ನನ್ನನು;

ಕಣ್ಣುಗಳು ತವಕಿಸುತಿದೆ
ನಿನ್ನ ಕಾಣುವ ಬಯಕೆಯಿಂದೆ
ಹೃದಯ ಬಾಯಾರಿದೆ
ನಿನ್ನ ಒಲವ ವಿರಹದಿಂದೆ;

ಹೋದವನು ಹೋದೆ ಕಣ್ಣು ತಪ್ಪಿಸಿ
ವಿಷಯಗಳ ಸುಳಿವಿಲ್ಲ ಬಾರದೆ
ವಿರಹದಿ ಕೋಪಾಗ್ನಿಗೆ ಬಲಿಯಾದೆ
ಮುರುಟಿದ ಬಯಕೆಗಳ ಸಮಾಧಿ ಮಾಡಿದೆ;

ಇಂದೇಕೆ ಕಾಡುತಿಹೆ ಬಿಡದೆ?
ಬದುಕಿಹ ಸುಳಿವಿಲ್ಲ
ಬರುವ ಮುನ್ಸೂಚನೆಯೂ ಇಲ್ಲ
ಸುಖಾಸುಮ್ಮನೆ ಮನದಲಿ ಬಂದು ನೆಮ್ಮದಿ ಕೆಡಿಸಿಹೆ:

ಏಕೆ ನೆನಪಾಗುತಿಹೆ ಇಂದು
ಇಷ್ಟು ದಿನವೂ ಇಲ್ಲದ ನೆನಪು
ಇಂದೇಕೆ ಕಾಡುತಿದೆ ಬಿಡದೆ ನನ್ನನು

ಕವಿ ನಿಮಿಷ

ಎಷ್ಟು ದಿನವಾಯಿತೋ ಹೀಗೆ ಏಕಾಂಗಿಯಾಗಿ ಕುಳಿತು
ದೂರದ ಪಶ್ಚಮದಲ್ಲಿ ಸೂರ್ಯ ಬಣ್ಣ ಚೆಲ್ಲಿ ಹೊರಟಿದ್ದಾನೆ
ಆಗಸದಲ್ಲಿ ನೂರು ರಂಗೋಲಿಯ ಚಿತ್ತಾರ;
ಮೋಡಗಳ ಬಳಸಿ ಕಲೆಗಾರ ಹೇಳಹೊರಡಿದ್ದಾನೆ ನೂರು ಕಥೆ,ವ್ಯಥೆ;
ಮನದ ನೂರು ವ್ಯಥೆಯ ಮರೆತು ತಲ್ಲೀನನಾಗಿದ್ದೇನೆ ಅಚ್ಚರಿಯಿಂದಲೇ;
ಇದು ಕೆಲವೇ ನಿಮಿಷಗಳ ರಸದೌತಣ, ಇದೇ ರಸಗವಳ ಮನಸಿಗೆ, ಕವಿ ರಸ ನಿಮಿಷ;
ಮನದಲ್ಲಿ ಚಿತ್ತಾರ ಮೂಡುವ ಮೊದಲೇ ಮಾಯವಾಯಿತು,ಮನಸ್ಸು ಪ್ರಶಾಂತವಾಯಿತು

ಜಿಗುಪ್ಸೆ

ತಲೆಯ ಮೇಲೆ ತೂಗುಗತ್ತಿ
ಸಾವಿನ ಭಯ ಮನದಲ್ಲಿ ಆವರಿಸಿದೆ
ನೇಣುಗಂಬ ಏರಿದವನಿಗೆ,
ಮುಕ್ತಿ ಸಿಗುವುದೆಂಬ ಸಂತೋಷ;
ನೇಣು ಹಾಕಿವವನೇ ರಜೆ ತೆಗೆದುಕೊಂಡರೆ
ಸಂತಸ ಪಡಬೇಕೋ? ಇಲ್ಲ ಕೈ ಕೈ ಹಿಸುಕಿಕೊಳ್ಳಬೇಕೋ?
ನಿಟ್ಟುಸಿರಂತೂ ಬಿಟ್ಟಿರುತ್ತಾನೆ ಬೇಸರಿಸಿ;
ಜಿಗುಪ್ಸೆ ಮನೆಮಾಡಿರುತ್ತೆ ಸಾವು ಮುಂದೆ ಹೋದರೆ
ಜೊತೆಯಲ್ಲಿದ್ದವರಿಗೂ, ಜೀವನೋವ ಹೊತ್ತಿರುವವರಿಗೂ
ಆದರೂ ಅನುಕ್ಷಣದ ಭಯದ ಜೀವನ ವಾಕರಿಸುತ್ತದೆ
ಮುಂದಿರುವ ರಸಗವಳವೂ ಹಳಸಿದ ಊಟವೇ ಆಗಿರುತ್ತೆ


ಇಂದಾಯಿತು, ಮುಂದೇನು?

ಇಂದಾಯಿತು, ಮುಂದೇನು?
ಅದೇ ಹೆಜ್ಜೆಗಳನ್ನೇ ಇಡುತ್ತಿದ್ದೇನೆ
ಅಡಿಯಿಡಲು ಬೇಸರವಿದೆ
ಹೊಸತನವಿಲ್ಲ ಯಾಂತ್ರಿಕತೆಗೆ ಜೋತುಬಿದ್ದಿದ್ದೇನೆ

ಆಯಿತು, ಎಲ್ಲವೂ ಆಯಿತು
ಮನವ ಶೋಧಿಸಿದ್ದಾಯಿತು
ಹಲವು ವರುಷಗಳ ಕಾಲ ತೊಟ್ಟ
ಮುಖವಾಡ ಕಳಚಿಟ್ಟಾಯಿತು
ಬೆತ್ತಲಾಗಿ ನಿಂತಿಹೆನು ಅಸಹಾಯಕನಾಗಿಹೆನು

ಇಂದಾಯಿತು, ಮುಂದೇನು?
ಕಣ್ಣು ಮುಚ್ಚಿದರೂ ಗೋಚರಿಸುತ್ತಿಲ್ಲ
ಕಣ್ಣು ತೆರೆದರಂತೂ ಕಾಲೆಳವರ
ದಂಡೇ ಕಾಣುತಿದೆ, ಅಸಹ್ಯವಾಗಿದೆ
ಓಡಿಹೋಗೋಣವೆಂದರೂ
ಭೂಮಿ ದುಂಡಾಗಿದೆಯೆಂಬ ಭಯ
ಇಂದಾಯಿತು, ಮುಂದೇನು? ನಾಳೆಗಳ ನಿರೀಕ್ಷಿಸುವುದು ಹೇಗೆ

ಕರಾಳ ದಿನ

ಏಕಿಂತ ದಾಳಿ ಮನದ ಮೇಲೆ
ಮೊದಲೇ ನರಳಿದೆ ಸಣ್ಣದಾಗಿ
ಗಾಯದ ಮೇಲೆ ಬರೆ ಎಳೆದ ಹಾಗೆ
ಮತ್ತೆ ಮತ್ತೆ ಬೀಳುತಿದೆ ಹೊಡೆತ
ಚೇತರಿಕೆ ಕಾಣುವ ಮೊದಲೇ........
ಒಬ್ಬನೇ ಏಕಾಂಗಿಯಾಗಿ
ಸೂಯರ್ಾಸ್ತದ ಸೊಬಗ ಅನುಭವಿಸುವಾಗ
ಧುತ್ತನೆ ಕಾಮರ್ೋಡ ಆವರಿಸಿದಹಾಗೆ
ಹಳೆಯ ನೋವುಗಳೆಲ್ಲಾ ಗರಿಗೆದರಿವೆ
ಸುಂದರ ಸೊಬಗೆನ್ನೆಲ್ಲಾ ನುಂಗಿದೆ
ಕರಾಳ ದಿನಗಳ ನೆನಪಾಗಿ
ಮನವು ನೋವ ಕಡಲಲಿ ಮುಳುಗಿದೆ
ಸಂಕಟ ಪಡುತ್ತಿದ್ದೇನೆ,
ಅಮೂಲ್ಯ ಸಮಯ ವ್ಯರ್ಥ ಮಾಡಿದೆ
ನೋವೆಲ್ಲಾ ಮೋಡವಾಗಿ ಬಾನಿನಲ್ಲಿ ಕರಗಿದೆ
ಮನದ ಚಿಂತೆಯ ಕಂತೆಗಳನ್ನೆಲ್ಲಾ
ಗೋರಿಯೊಳಗೆ ಬಲವಂತವಾಗಿ ಬಚ್ಚಿಟ್ಟಿದ್ದೇನೆ
ಗೆಳೆಯನೇ ನಿನ್ನ ನೆನಪು ಮತ್ತೆ ಮತ್ತೆ ಕಾಡಿದೆ
ಈ ಹೃದಯದಲಿ ನಿನ್ನ ಬಂದಿಸಿರುವೆ
ಎಲ್ಲವೂ ಮುಗಿದ ಅಧ್ಯಾಯ
ಹೊಸ ಅಧ್ಯಾಯ ಪ್ರಾರಂಭಿಸಿರುವೆ......

ಬದಲಾಗು ಮನವೇ......

ವಿಧಿಯಾಟವೋ ಇಲ್ಲ, ನನ್ನ ದೌಭರ್ಾಗ್ಯವೋ?
ತಿರಸ್ಕರಿಸಲ್ಪಟ್ಟಿದ್ದೇನೆ, ನನ್ನ ಸ್ಥಿತಿಗೆ ನಾನೇ ಮರುಕಪಟ್ಟಿದ್ದೇನೆ
ಸಹಾಯಕ್ಕೆ ಕೈಚಾಚಿಹೆನು, ನನ್ನ ರಕ್ಷಿಸುವರಾರು?
ನನ್ನ ವಿಧಿಯ ನಾನೇ ಹಳಿಯುತಿಹೆನು
ಪರರ ಭಾಗ್ಯವು ಎನಗೆ ಬಾರದೇ?
ಅವರ ಚಾಕಚಕ್ಯತೆ, ಚತುರತೆ ಎನಗೇಕಿಲ್ಲ?
ನನ್ನ ಅಂತಃಶಕ್ತಿಯ ಅರಿವೆನಗಿಲ್ಲ
ಹೊರಬರಬೇಕಿದೆ ಈ ಕತ್ತಲಕೂಪದಿಂದ;
ಬದಲಾಗಬೇಕಿದೆ, ಮುಂದೆ ಸಾಗಲು
ಇಲ್ಲಿ ಎಲ್ಲವೂ ಬದಲಾಗುತ್ತಲೇ ಇದೆ;
ಇದ್ದಂಗಿಲ್ಲ ಇಲ್ಲಿ ಎಲ್ಲವೂ
ಬದಲಾವಣೆಗೆ ತೆರೆದು ಕೋ ಮನವೇ
ಬದಲಾಗು, ಬದಲಾಗು ಮನವೇ......

ಸತ್ತ

ಅವನು ಚಂದ್ರನ ಕೆಳಗೆ ಮಲಗಿದ
ಸೂರ್ಯನ ಕೆಳಗೆ ಅಂಡಲೆದ
ಬಾಳಿ ಬದುಕಿದ ಏನೋ ಸಾಧಿಸುವವನಂತೆ
ಸತ್ತ ಏನನ್ನೋ ಸಾಧಿಸದೆ!!

ನನ್ನ ಪಯಣ

ಇನ್ನೂ ಮುಗಿದಿಲ್ಲ ನನ್ನ ಪಯಣ
ಹಿಂತಿರುಗುವ ಮಾತೆಲ್ಲಿ?
ಗುರಿಯ ಹಾದಿಯಲ್ಲಿ ನಾನು
ಹಿಂತಿರುಗಲೆಂತು ಮುರಿದು ಮಾತು;
ಗುರಿಯೊಂದು ಕಡೆ ಕರೆಯುತಿಹುದು
ಸಂಕಟವೊಂದು ಕಡೆ ಸೆಳೆಯುತಿಹುದು
ಮಾತುಗಳಿಂದ ಮನವ ಮುರಿದವರಾರು?
ಈಗ ಪ್ರೀತಿ ಆಕಾಶದಿಂದ ಉದುರಿತೋ!
ಹಗಲು-ರಾತ್ರಿ ಎನ್ನದೆ ನಡೆದಿಹೆನು
ಈಗೇಕೆ ಮುರಿಯಲಿ ನನ್ನ ಪಯಣ?
ಇನ್ನು ಕೆಲವೇ ದೂರ ನನ್ನ ಗುರಿ
ಗುರಿ ಸೇರಿ ಆನಂದಿಸಲೋ ಇಲ್ಲ
ನಿಮ್ಮ ಮಾತಿಗೆ ಬೆಲೆಗೊಟ್ಟು
ಮತ್ತೆ ನಿಮ್ಮ ಮಾತಿಗೆ ಬಲಿಯಾಗಲೇ?
ಈ ಧ್ವಂಧ್ವವೇ ಪರೀಕ್ಷೆ
ಧ್ವಂಧ್ವವ ಮೀರುವುದೇ ಗೆಲುವು
ಕುರುಡಾಗಬೇಕು!
ಕಿವುಡಾಗಬೇಕು!
ನಡೆಯಬೇಕು ಗುರಿಯ ಕಡೆಗೆ
ಆನಂದಿಸಬೇಕು ಒಲವಿಗೆ//

ನಿನ್ನದೇ ಧ್ಯಾನ

ಗೊಂದಲ ಮನದಲ್ಲಿ
ನಿದ್ರಾದೇವಿ ಸೆಳೆಯುತಿಹಳು
ಜೀವನ ಯಾತ್ರೆಯ ಪಯಣ
ಆಲಸ್ಯ,ಯಾಂತ್ರಿಕತೆ ಬಳಲಿಸಿದೆ
ಶಾಂತಿ,ಶಾಂತಿ,ವಿಶ್ರಾಂತಿ
ಹೃದಯದ ಒಳಗಣ್ಣು ತೆರೆದಿದೆ
ನಿತ್ಯಯಾತ್ರೆಗೆ ಸನ್ನದ್ಧ ನಿನ್ನಲ್ಲಿಗೆ
ಬೆರಗುಗಣ್ಣುಗಳ ತೆರೆದೆ
ಕತ್ತಲ ತೂರಿ ಬೆಳಕ ಬಾಗಿಲ ತೆರೆದೆ
ಕ್ಷಣ-ಕ್ಷಣದಿ ಅಂಧಕಾರ ಆವರಿಸಿ
ಮನದಲ್ಲಿ ಭಯದ ವಾತಾವರಣ ಮೂಡಿದೆ;
ಕಲ್ಪನಾವಿಲಾಸದಲ್ಲಿ ನಿನ್ನದೇ ಚಿತ್ರ ಮನದ ತೆರೆಯಲ್ಲಿ
ಕಾರ್ಗತ್ತಲಿನಲ್ಲಿ ಹೊಳೆವ ವಜ್ರದಂತೆ
ನಿನ್ನ ನೆನಪು ಮನದಲ್ಲಿ
ಆ ಕತ್ತಲ ರಾತ್ರಿಯ ಸೊಬಗ ಹೆಚ್ಚಿಸಿದೆ
ಹೇಗಾದರೂ ಸರಿಯೇ....
ವಿಶ್ರಾಂತಿ ಇಲ್ಲ ಎನಗೆ.....
ಮುಂಜಾನೆ ಕಾಲುಗಳಿಗೆ.....
ರಾತ್ರಿ ಕಣ್ಣುಗಳಿಗೆ....
ದಿನವೂ, ರಾತ್ರಿಯೂ ಒಂದೇ
ನಿನ್ನದೇ ಧ್ಯಾನ, ನಿನ್ನದೇ ಧ್ಯಾನ//

ಕೆಲಸವಾದ ನಂತರ......

ನನ್ನ ಮನೆಯ ತೊರೆದಾಯಿತು
ತಿಂಗಳೇ ಕಳೆದಿರಬಹುದು
ಹೊಸ ಮನೆಯ ತುಂಬಿಯಾಯಿತು
ಪರಕೀಯತೆ ಕಾಡದಿರಬಹುದೇ?
ನನ್ನವರೆನಿಸಿಕೊಂಡವರಿಂದಲೇ ತಿರಸ್ಕಾರಕ್ಕೊಳಗಾದೆ
ಆಶ್ಚರ್ಯವೇನಿಲ್ಲ ಅದರಲಿ,
ಕೆಲಸವಾದ ನಂತರ ಬಡಗಿಗೇನು ಕೆಲಸ!
ಇವರು ಯಾರೋ?
ನನ್ನ ಅವರವನೆಂದು ಒಪ್ಪಿಕೊಂಡಾರೇ?
ಹೊಸತನ, ಹೊಸಹೆಜ್ಜೆ ಎಡವಬಹುದೆನ್ನಿ
ಅಂತರ ಜಾಸ್ತಿಯಾಗಲು ಕಾರಣಬೇಕೇ?
ಉಪ್ಪುತಿಂದ ಮೇಲೆ ಬಾಯಾರದೇ?
ತಪ್ಪು-ಒಪ್ಪುಗಳ ತಿಳಿದವರಾರು?
ಕಲ್ಲು-ಮುಳ್ಳು ಚುಚ್ಚಿಯಾಗಿದೆ
ನೋವ ನುಂಗಿಯಾಗಿದೆ;
ಹಿಂದೆ ಹೋಗುವ ಮಾತೇಯಿಲ್ಲ;
ಬಂದದ್ದು ಬರಲಿ ಹೆಜ್ಜೆ ಮುಂದಿಟ್ಟಾಗಿದೆ
ಸೋಲೋ-ಗೆಲುವೋ ಕಾಲವೇ ನಿರ್ಣಯಿಸಲಿ
ಮನವು ಧೃಡತೆಯಿಂದಿರಲಿ
ಕಲಿಕೆಯೊಂದೇ ಗುರಿಯಾಗಲಿ//

ಗೆಳೆತನ

ಓ ಗೆಳೆಯನೇ! ನೀ ನನ್ನ ಪ್ರೀತಿಯ ಗುರುತು
ನಿನಗಾಗಿಯೇ ಈ ನನ್ನ ಗೆಳೆತನವ ಮುಡಿಪಾಗಿಟ್ಟಿರುವೆ
ನನ್ನ ಹೃದಯದೊಳಗಡಗಿರುವ ಪ್ರೀತಿಯೆಲ್ಲವನ್ನೂ
ಈ ಕವಿತೆಯೊಳಡಗಿಸಿರುವೆ ನಿನಗಾಗಿ;
ಇದು ಗೆಳೆತನದ ಧ್ಯೋತಕವಾಗಿ, ತೋರಿಕೆಗಾಗಿಯಲ್ಲ ನೀ ತಿಳಿ;
ಹೃದಯ ಚಡಪಡಿಸುತಿಹುದು, ಪದಗಳಿಗಾಗಿ ತಡಕಾಡಿದಾಗ;
ನಿನಗೆ ಒಪ್ಪಿಗೆಯೇ ಈ ನನ್ನ ಕವಿತೆ?
ನನ್ನ ವಿಧಿಲಿಖಿತದೊಳಗೇನು ಬರೆದಿದೆಯೋ?
ನಕ್ಷತ್ರಗಳ ಗುಣಿಸಿ ಹೇಳುವವರಿಲ್ಲ
ಲೆಕ್ಕ ತಪ್ಪಾದರೆ ನನ್ನದೇನು ತಪ್ಪು?
ಎಲ್ಲವನ್ನೂ ಬಲ್ಲ ನೀನು ನನ್ನ ಗೆಳೆತನ ಒಪ್ಪಿಕೋ
ಈ ಪ್ರೀತಿಯ ಕವನವ ಸರ್ಮಪಿಸಿಕೋ!/

ಸತೈವೋ?,ಭ್ರಮೆಯೋ?

ನನ್ನ ಕಣ್ಣುಗಳ ನಾನೇ ನಂಬಲಿಲ್ಲ,
ಯಾರನ್ನು ನೋಡುತ್ತಿದ್ದೇನೆ?
ಸತೈವೋ?,ಭ್ರಮೆಯೋ?, ಅಯೋಮಯವೋ?
ಕನ್ನಡಿಯೊಳಗೆ ಕಂಡದ್ದು ಯಾರನ್ನು?
ಅದು ನಾನೇ? ಅಥವಾ ಬೇರಾರು?
ಮನದಲ್ಲೇ ಆತಂಕ ಮೂಡಿದೆ
ಬಿಳಿ ಕೂದಲಿನ ತಲೆ,
ಬಿಳಿ ಜುಂಜಿನಂತ ಗಡ್ಡ;
ಸುಕ್ಕುಗಟ್ಟದ ಚರ್ಮ;
ಕೃಶಗೊಂಡ ನಿಶಕ್ತಿಯ ದೇಹ;
ನಿದ್ದೆಕಾಣದ ಕಂಗಳು;
ಇಂದು ಕಾಣುತ್ತಿರುವುದೇನು?
ಸಾವಿನ ಮುನ್ಸೂಚನೆಯೋ?
ಮತ್ತೇನಿದು? ಕಾಮರ್ೋಡ ತಂದ ಕಗ್ಗತ್ತಲು!
ಸೌಂದರ್ಯವೆಲ್ಲಾ ನಶಿಸಿದೆ
ಹೃದಯವೊಂದೇ ಚಿರತಾರುಣ್ಯದಿಲ್ಲಿದೆ!
ನಿನ್ನ ಮೇಲಿನ ಪ್ರೀತಿ ಈಗಷ್ಟೇ ಚಿಗುರೊಡೆದಿದೆಯಷ್ಟೇ
ಕಾಲವ್ಯಯ ಮಾಡದಿರು
ಸದಾ ಮನವ ಪ್ರೀತಿಯಲ್ಲೇ ತೊಡಗಿಸು
ನೋಡು ಆಗ ಚಿರಯೌವ್ವನ ನಿನ್ನದೇ....

ಕಾಲಾತೀತ

ಬಿಸಿಲಬೇಗೆಗೆ ನಿನ್ನ ಹೋಲಿಸಲೇ?
ನೀನು ಬಲು ಚಂದ!
ಗಡಸು ಗಾಳಿ,
ಚೈತ್ರದ ಹೂ ಚಿಗುರುಗಳ ಮೇಲೆಯೇ ಕಣ್ಣು!
ಎಚ್ಚರ ತಪ್ಪಿದರೆ ಅಯೋಮಯ,
ಬೇಸಿಗೆಯ ಬಿಸಿ ಅಸಹನೀಯ;
ಸುಂದರವಾದುದೆಲ್ಲಾ ಬಳಲುವುದು
ಕ್ಷಣಿಕವಾದರೂ ತೆವಳಬೇಕು
ಒಳ ಸೌಂದರ್ಯವ ಕಾಯ್ದಿರಿಸಿಕೋ
ಅದಕ್ಕೆ ಸಾವಿಲ್ಲ;
ಏಕಾಂಗಿತನಕ್ಕೆ ಬಳಲುವುದಿಲ್ಲ;
ಸಾವು ಬಂದರೂ ಸೌಂದರ್ಯಕ್ಕೆ ಸಾವಿಲ್ಲ;
ಕಾಲಾತೀತವೂ, ಸೌಂದರ್ಯವೂ ಒಂದಾದರೆ
ಅದೇ ಸಾರ್ಥಕತೆಯೂ.....
ಹೆದರದಿರು ಸಾವಿಗೆ,
ಅಹಂಕಾರಪಡದಿರು ನಿನ್ನ ಸೌಂದರ್ಯಕೆ;
ಒಳ ಮನದ ಕದವ ತೆರೆದು
ಪ್ರಕೃತಿಯ ಸೌಂದರ್ಯವ ಆಸ್ವಾದಿಸು//

ಮುನ್ಸೂಚನೆ

ಎಂದು ಮೇಲೆರಗುವುವೋ ಕಾಣದ ವಿಧಿಯಾಲಾಪ
ಮುನ್ಸೂಚನೆ ಕಾಣದು, ಕಣ್ಣ ಮುಂದೆ ಬಚ್ಚಿಟ್ಟಹಾಗೆ
ಕಣ್ಣೇ ಕುರುಡೋ ಇಲ್ಲ,ಬುದ್ಧಿಯೇ ಕುರುಡೋ!
ಬಲ್ಲವರಾರು? ಕಂಡವರಾರು?
ಮನಸ್ಸು ಮಾತ್ರ ಜರ್ಝರಿತವಾಗಿದೆ
ಇರಲಾರದೇ! ಓಡಿಹೋಗಲಾಗದೆ!
ಬಂದದ್ದು ಬರಲೆಂಬ ನಿಲರ್ಿಪ್ತತೆ
ಮನದಲ್ಲಿ ಮನೆ ಮಾಡಿದೆ
ಹೆಜ್ಜೆ,ಹೆಜ್ಜೆಗೂ ಕಾತರತೆಯಿದೆ
ಆತಂಕ, ಆಶ್ಚರ್ಯ.....
ಬಿಸಿಲು-ಮಳೆಯ ರೀತಿ ಆಹ್ಲಾದಕರವಾಗಿದೆ/

ಬಚ್ಚಿಟ್ಟ ಭಾವ

ಯಾರು ನೆನಪಿಡುವರು?
ಮುಂದೆ ಕಾಲ ಉರುಳುತಿರುವುದ
ಯಾರು ನಂಬುವರು?
ಈ ನನ್ನ ಪದಗಳ......
ಗೊತ್ತಿದೆಯಾದರೂ ನೋವಿಲ್ಲ
ಗೋರಿಯೊಳಗೆ ಬಚ್ಚಿಟ್ಟ ಭಾವಗಳಂತೆ
ಯಾರೂ ಬಗೆದು ನೋಡುವರಿಲ್ಲ
ಹಳೆಯದೆಲ್ಲವೂ ಇತಿಹಾಸ
ಹೊಸತೆಲ್ಲವೂ ಅನ್ವೇಷಣೆ
ಹಿಂದಿನದೆಲ್ಲವೂ ಕಥೆಗಳ ಗಂಟು
ನಂಬುವರಾರು? ಗೊಡ್ಡು ವೇದಾಂತ;
ನಡೆಯುತ್ತಿರುವರು ಸತ್ಯ ಹರಿಶ್ಚಂದ್ರರು
ಮಾತಿಗೆ ಬೆಲೆಯಿಲ್ಲ, ಬರೀ ಒಣ ವೇದಾಂತ;
ಎಲ್ಲರೂ ಚಪ್ಪಾಳೆ ತಟ್ಟುವವರೇ!
ತಪ್ಪೆಂದು ಹೇಳಬೇಕಾದವರು ತೆಪ್ಪಗಿಹರು
ಮೂಕರಾಗಿ, ನಿಜವಲ್ಲ ಬರೀ ನಾಟಕ;
ಮುನ್ನಡೆಯುತಿಹುದು ಕಾಲ ಗಹಗಹಿಸಿ
ಮುಂದೆ ಕಾದಿದೆ....
ಮುಂದೆ ಕಾದಿದೆ...
ಕಾಣದ ರುದ್ರನರ್ತನ.......

ತೀರದ ಭರವಸೆ

ಬೆಳಗೆಂದರೆ ಅಚ್ಚರಿ
ಅಮೋಘ ಅನುಭವದ ರಸಸಮಯ
ಹಾರುವ ಹಕ್ಕಿಗಳ ಕಂಡಾಗ
ಮನಸ್ಸು ಹಗುರ,ಅತ್ಯುತ್ಸಾಹ
ಕಾಯುತ್ತಿದುವ ರಣಹದ್ದುಗಳ ಕಂಡಾಗ
ಮನಸ್ಸು ಅಯೋಮಯ,ಭಯದ ಕೂಪ
ಪಾರಾಗುವುದೆಂತೋ?......
ಪ್ರಕೃತಿ ನಿಯಮ ಮೀರಿದವರಾರು?
ಇಂದೇನೋ ಶಕ್ತಿಯಿಂದ ಪಾರಾಗಬಹುದು
ಆದರೆ ನಾಳೆ, ನಾಳೆಗಳ ನಂತರ
ನಿಶಕ್ತಿಯು ಕಾಡದೇ?...
ಬಲಿಯಾಗುವುದು ನಿಶ್ಚಿತವೇ!
ದಾರಿಯಾವುದು?
ರಕ್ಷಿಸುವವರಾರು?
ಆದರೂ ಬೆಳಗೆಂದರೆ ಅಚ್ಚರಿ
ನಾಳೆ,ನಾಳೆಗಳ ತೀರದ ಭರವಸೆ//

ನಿನ್ನೊಳು ನಾನು

ಓಹ್! ಕನ್ನಡಿಯೇ,
ನಿನ್ನೊಳು ನಾನು ಹುರುಪಿನಿಂದಿರುವೆ
ಭಾಹ್ಯದ ಈ ದೇಹದಲ್ಲಿ
ಚರ್ಮವೆಲ್ಲಾ ಸುಕ್ಕುಗಟ್ಟಿದೆ
ಮನಸು ಮಾತ್ರ ಅರಳುವ ಮಲ್ಲಿಗೆಯೇ!
ನಿನ್ನೊಳ ದೇಹದಲ್ಲಿದೆ
ನನ್ನ ಹರೆಯದ ಹೃದಯ ಚೈತನ್ಯದಿ
ನಿನ್ನಯ ತರುಣ ಹೃದಯ
ನನ್ನೊಳು ನೆಲೆಸಿದೆ ಹುರುಪಿನಲಿ
ತಿಳಿದಿದೆ ನಾನು ನಿನ್ನ ಮೊದಲು
ಕೊನೆಯುಸಿರೆಳೆಯುವೆ;
ನಾ ಮುಗಿದ ಕಥೆಯಾದರೂ
ನೆನಪಿರಲಿ ನನ್ನಯ ಹೃದಯಗಾನ;
ಮರೆತು ನನ್ನ ಹೃದಯವ ಕೊಲ್ಲದಿರು
ಓ! ಕನ್ನಡಿಯೇ!, ಓ ಕನ್ನಡಿಯೇ!
ನಿನ್ನೊಳ ನಾನು ಜೀವಂತವಾಗಿರುವೆ
ನಿನ್ನ ಹೃದಯವ ಪಡೆದು ಸಂತಸದಿಂದಿರುವೆ//

ಹೊಸತನಕಿದೋ ಸ್ವಾಗತ

ನಾನು ಅವರಂತಲ್ಲ
ಮೋಹ,ವ್ಯಾಮೋಹಗಳಿಗೆ ಒಳಗಾದವನಲ್ಲ
ಬಯಕೆ,ಆಮೀಷಗಳಿಗೆ ಬಲಿಯಾದವನಲ್ಲ
ಸೌಂದರ್ಯ,ಸಂಪತ್ತುಗಳಿಗೆ ಕತ್ತುಕೊಟ್ಟವನಲ್ಲ
ಓತ-ಪ್ರೋತಗಳಿಗೆ ಓಗೊಡುವವನಲ್ಲ
ಆದರೂ ಕೆಲವೊಮ್ಮೆ ನನ್ನದಲ್ಲದ ತಪ್ಪುಗಳಿಗೆ;
ಟೀಕೆಗಳಿಗೆ ತೆರೆದುಕೊಂಡವನು;
ಅನುಭವಗಳಿಗೆ ತೆರೆದ ಹೃದಯದವನು;
ಎಲ್ಲಾ ನಿಜ ಅನುಭವಗಳಿಗಿದೋ ಸ್ವಾಗತ,
ಮನವ ,ಹೃದಯವ ಕಾಪಿಡುವ
ಸಂಗತಿಗಳಿಗಿದೋ ಸ್ವಾಗತ;
ಬೆಳಕಾಗಿ,ಹೊಂಗಿರಣವ ಸೂಸುವ
ಹೊಸತನಕಿದೋ ಸ್ವಾಗತ;

ಓ ಕಾಲವೇ! ಓ ಕಾಲವೇ!

ಓ ಕಾಲವೇ! ಓ ಕಾಲವೇ!
ಸಮಯವು ಸಿಂಹದ ಪಂಜುಗಳನ್ನೂ
ನಿಶಕ್ತಿಯಾಗಿಸುವುದು
ಹುಟ್ಟಿದೆಲ್ಲವುಗಳನ್ನೂ ಮಣ್ಣಿನ
ಗೋರಿಯೊಳಗೆ ಅಡಗಿಸಿಕೊಳ್ಳವುದು
ಅಹಂಕರದಿಂದ ಘಜೆ9ಸಿದವರೂ
ಕೊನೆಯಲ್ಲಿ ಮಣ್ಣಾಗುವರು
ಮಣ್ಣಿಂದ ಮೇಲೆದ್ದು ನಲಿದವರೂ
ಕೊನೆಯಲ್ಲಿ ಮಣ್ಣಾಗುವರು
ಸಂತೋಷವೋ? ದéುಖವೋ?
ಕಾಲವೇ ನಿಧ9ರಿಸುವುದು
ಏನು ಸಂತೋಷವೋ ಅದನ್ನೇ ಮಾಡು
ಸಮಯ ಕಾದಿಹುದು
ಎಲ್ಲವನ್ನೂ ನುಂಗುವುದು
ಸೌಂದರ್ಯವೋ? ಭಯಾನಕವೋ?
ಈ ಮಣ್ಣಲ್ಲೇ ಹುದುಗಿಹುದು
ಯೌವನ, ಸುಕ್ಕುಗಟ್ಟದ ಚಮ9
ಕಾಲವೇ ನಿನ್ನ ನಡೆಯು
ಅನುಭವಿಸು ಕಷ್ಟವೋ? ಸುಖವೋ?
ಕಾಲನಿಗೆ ನಮಿಸು
ಹೆಜ್ಜೆಯ ಮುಂದಿಡು
ಹೆದರದೆ ಮುನ್ನಡೆ/

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...