ಕಾಯುತಿಹೆನು ಬಹಳ ವರ್ಷಗಳಿಂದೆ
ತಾಳ್ಮೆಗೆಡದೆ ತಗ್ಗಿ-ಬಗ್ಗಿ ನಡೆಯುತಿಹೆನು|
ಈ ಪರಿತಾಪಕೆ ಕೊನೆ ಎಂದೋ ತಿಳಿಯದಾಗಿದೆ
ಇಂದೋ-ನಾಳೆಯೋ ನನ್ನದು ದಕ್ಕುವುದೆಂದು||
ಬಂದದೆಲ್ಲಾ ಸ್ವೀಕರಿಸಿರುವೆ ಸರಿ-ಸಮನಾಗಿ
ಸಿಹಿಯೋ-ಕಹಿಯೋ ಬಯಕೆಯಿಂದಲೇ|
ಅನುಭವಕೆ ಮಣೆಹಾಕಿ ಅಮೃತವುಂಡಿದ್ದೇನೆ
ಅರಿವ ಬೆಳಕಲ್ಲೇ ಧನಾತ್ಮಕವಾಗಿಯೇ ಚಿಂತಿಸಿದ್ದೇನೆ||
ಕಾಲ ಮುಂದೆ ಓಡುತ್ತಿದೆಯಾದರೂ
ಮನದ ಹೆಬ್ಬಯಕೆಯ ರಾಮನ ಬರುವಿಕೆಯಿಲ್ಲ|
ಕಾಯುತಿಹೆನು,ಕಾಯುತಿಹೆನು ರಾಮ-ರಾಮ
ಕಣ್ಣತುಂಬಿಕೊಳ್ಳಲು ಹೃದಯ ಬರಿದು ಮಾಡಿಹೆನು||
ರಾಮ ನೀ ಬರುವಿಯೆಂದು ಕಾಯುತಿಹೆನು ಆಶಾವಾದದಿಂದಲೇ......
Saturday, December 15, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment