ಬೆಳಗೆಂದರೆ ಅಚ್ಚರಿ
ಅಮೋಘ ಅನುಭವದ ರಸಸಮಯ
ಹಾರುವ ಹಕ್ಕಿಗಳ ಕಂಡಾಗ
ಮನಸ್ಸು ಹಗುರ,ಅತ್ಯುತ್ಸಾಹ
ಕಾಯುತ್ತಿದುವ ರಣಹದ್ದುಗಳ ಕಂಡಾಗ
ಮನಸ್ಸು ಅಯೋಮಯ,ಭಯದ ಕೂಪ
ಪಾರಾಗುವುದೆಂತೋ?......
ಪ್ರಕೃತಿ ನಿಯಮ ಮೀರಿದವರಾರು?
ಇಂದೇನೋ ಶಕ್ತಿಯಿಂದ ಪಾರಾಗಬಹುದು
ಆದರೆ ನಾಳೆ, ನಾಳೆಗಳ ನಂತರ
ನಿಶಕ್ತಿಯು ಕಾಡದೇ?...
ಬಲಿಯಾಗುವುದು ನಿಶ್ಚಿತವೇ!
ದಾರಿಯಾವುದು?
ರಕ್ಷಿಸುವವರಾರು?
ಆದರೂ ಬೆಳಗೆಂದರೆ ಅಚ್ಚರಿ
ನಾಳೆ,ನಾಳೆಗಳ ತೀರದ ಭರವಸೆ//
Monday, November 19, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment