ಬೆಳಗೆಂದರೆ ಅಚ್ಚರಿ
ಅಮೋಘ ಅನುಭವದ ರಸಸಮಯ
ಹಾರುವ ಹಕ್ಕಿಗಳ ಕಂಡಾಗ
ಮನಸ್ಸು ಹಗುರ,ಅತ್ಯುತ್ಸಾಹ
ಕಾಯುತ್ತಿದುವ ರಣಹದ್ದುಗಳ ಕಂಡಾಗ
ಮನಸ್ಸು ಅಯೋಮಯ,ಭಯದ ಕೂಪ
ಪಾರಾಗುವುದೆಂತೋ?......
ಪ್ರಕೃತಿ ನಿಯಮ ಮೀರಿದವರಾರು?
ಇಂದೇನೋ ಶಕ್ತಿಯಿಂದ ಪಾರಾಗಬಹುದು
ಆದರೆ ನಾಳೆ, ನಾಳೆಗಳ ನಂತರ
ನಿಶಕ್ತಿಯು ಕಾಡದೇ?...
ಬಲಿಯಾಗುವುದು ನಿಶ್ಚಿತವೇ!
ದಾರಿಯಾವುದು?
ರಕ್ಷಿಸುವವರಾರು?
ಆದರೂ ಬೆಳಗೆಂದರೆ ಅಚ್ಚರಿ
ನಾಳೆ,ನಾಳೆಗಳ ತೀರದ ಭರವಸೆ//
No comments:
Post a Comment