ಏಕೆ ನೆನಪಾಗುತಿಹೆ ಇಂದು
ಇಷ್ಟು ದಿನವೂ ಇಲ್ಲದ ನೆನಪು
ಇಂದೇಕೆ ಕಾಡುತಿದೆ ಬಿಡದೆ ನನ್ನನು;
ಕಣ್ಣುಗಳು ತವಕಿಸುತಿದೆ
ನಿನ್ನ ಕಾಣುವ ಬಯಕೆಯಿಂದೆ
ಹೃದಯ ಬಾಯಾರಿದೆ
ನಿನ್ನ ಒಲವ ವಿರಹದಿಂದೆ;
ಹೋದವನು ಹೋದೆ ಕಣ್ಣು ತಪ್ಪಿಸಿ
ವಿಷಯಗಳ ಸುಳಿವಿಲ್ಲ ಬಾರದೆ
ವಿರಹದಿ ಕೋಪಾಗ್ನಿಗೆ ಬಲಿಯಾದೆ
ಮುರುಟಿದ ಬಯಕೆಗಳ ಸಮಾಧಿ ಮಾಡಿದೆ;
ಇಂದೇಕೆ ಕಾಡುತಿಹೆ ಬಿಡದೆ?
ಬದುಕಿಹ ಸುಳಿವಿಲ್ಲ
ಬರುವ ಮುನ್ಸೂಚನೆಯೂ ಇಲ್ಲ
ಸುಖಾಸುಮ್ಮನೆ ಮನದಲಿ ಬಂದು ನೆಮ್ಮದಿ ಕೆಡಿಸಿಹೆ:
ಏಕೆ ನೆನಪಾಗುತಿಹೆ ಇಂದು
ಇಷ್ಟು ದಿನವೂ ಇಲ್ಲದ ನೆನಪು
ಇಂದೇಕೆ ಕಾಡುತಿದೆ ಬಿಡದೆ ನನ್ನನು
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment