ಕಣ್ಣುಮುಚ್ಚಿ ತೆಗೆಯುವುದರೊಳಗೆ
ವರುಷಗಳೇ ಉರುಳಿಹೋಗಿದೆ
ಅಂತರಾಳದ ದುಃಖ ಬಾಯ್ತೆರೆದು
ಸಂತಸದ ಕ್ಷಣಗಳನೆ ನುಂಗಿದೆ ।।
ನಾನು ಪ್ರೀತಿಸಿದ ಗೆಳೆಯರು
ಬಂದರು, ಅಲೆಯಂತೆ ಹೋದರು
ಕಾಲಮಾತ್ರ ಮುಂದೆ ಸಾಗಿದೆ ನಿಲ್ಲದೆ
ಗಾಳಿ ಬಂಡ ಕಡೆ ನಾವು ತೆರೆಳಿದೆವು||
ಜೀವನ ಎಂದೂ ಸುಖದ ಹಾದಿಯಲ್ಲ
ಕಷ್ಟ ಪರಿಶ್ರಮಗಳೇ ತುಂಬಿವೆ ದಿನನಿತ್ಯ
ದಿನದ ಪಾತ್ರಯೊಳ ಮೌಲ್ಯವೀ ಕಾಲ
ಹಾಳುಮಾಡಿದೆವು ಅರ್ಥಮಾಡಿಕೊಳ್ಳದೆ।।
ನಮ್ಮ ಕಾಲ ಮೇಲೆ ನಾವು ನಿಂತಿದ್ದೇವೆ
ನಮ್ಮ ದಾರಿಯೂ ನಮಗೆ ತಿಳಿದಿದೆ
ರಾತ್ರಿಯ ಕತ್ತಲ್ಲಲ್ಲಿ ಜೋಗುಳದ ಕಣ್ಣೀರು
ಕತ್ತಲು ಕಳೆದು ಹೊಸದಿನ ಮೂಡಲು ತಿಳಿಮನ||
ಹತ್ತು ಹಲವು ವಸ್ತುಗಳ ಖರೀದಿಸಿದೆವು
ಯಾವುವೂ ನೀಡಲಿಲ್ಲ ಮನದಲ್ಲಿ ತೃಪ್ತಿ
ನೋವು,ಸಂಕಟ ದುಗುಡ ದಿನವೂ
ಬೆಳೆಯುತ್ತಿದೆ ನಾವೇ ಬೆಳೆಸಿದ ಬೆಳೆಯಾಗಿ||
ಎಲ್ಲಿಂದ ಬಂದವೋ ನಾ ಕಾಣೆ
ದುಗುಡವೆಲ್ಲವೂ ಮಂಗಮಾಯ ದಿನದಾಂತ್ಯದಲ್ಲಿ
ನಿಟ್ಟುಸಿರು ,ಸಮಾಧಾನ ಎಲ್ಲಾ ದಿಕ್ಕಿನಿಂದ
ನಾವು ಮಾಡಿದ ಅದಾವುದೋ ಉಪಕಾರದಿಂದ||
ಪ್ರೇರಣೆ: ಅನಾಮಿಕ
Wednesday, January 15, 2020
ಜೀವನ ಆನಂದ
ನನ್ನ ಜೀವನ ದಾರಿಕಾಣದೆ
ಒಮ್ಮೊಮ್ಮೆ ಬೇಸರ ಮೂಡಿಸುತ್ತದೆ
ಇರಲಾರದೆ ಮನ ಚಡಪಡಿಸುತ್ತಿದೆ
ದೂರದಿಂದ ನೋಡುವವರಿಗೆ ಅದೇ ಅಚ್ಚರಿ
ನನ್ನ ಜೀವನದ ಕನಸು ಅವರಿಗೆ .....
ಹಳ್ಳಿಯ ಕಾಲುದಾರಿಯಲ್ಲಿ ಸಾಗುವ ಮಗುವಿಗೆ
ಆಕಾಶದಲ್ಲಿ ಹಾರುವ ವಿಮಾನದಲ್ಲಿ ತೇಲುವ ಕನಸು
ಸ್ವಚ್ಚಂದವಾಗಿ ಓಡಾಡುವ ಹಳ್ಳಿಯ ಮಗುವ
ಕಾಣುವ ವಿಮಾನದ ಚಾಲಕನಿಗೆ
ಹಳ್ಳಿಯ ಮಗುವಾಗುವ ಕನಸು ಅವನಿಗೆ....
ಅದೇ ಜೀವನ, ನಮ್ಮದು ಅದ ಅನುಭವಿಸಬೇಕು
ಸಂಪ್ಪತ್ತೇ ಜೀವನದ ಸುಖವಾದಲ್ಲಿ
ಶ್ರೀಮಂತರೆಲ್ಲಾ ರಸ್ತೆಗಳಲ್ಲಿ ಕುಣಿದಾಡುತ್ತಿದ್ದರು
ಆದರೆ ಬಡವರ ಮಕ್ಕಳು ರಸ್ತೆಗಳಲ್ಲಿ ಕುಣಿವರು....
ಅಧಿಕಾರವೇ ರಕ್ಷಣೆಯ ಪರ್ಯಾಯವಾಗಿದ್ದರೆ
ಅಧಿಕಾರಿಗಳು,ರಾಜಕಾರಣಿಗಳಾರೂ
ಪೋಲೀಸರ ರಕ್ಷಣೆ ಪಡೆಯುತ್ತಿರಲಿಲ್ಲ...
ಸಾಮಾನ್ಯರೇ ಹೆಚ್ಚು ಸುರಕ್ಷಿತರು ಹಾಗು ಪರಮ ಸುಖಿಗಳು ....
ಸೌಂದರ್ಯ ಹಾಗು ಪ್ರಖ್ಯಾತಿ ಒಳ್ಳೆಯ
ಸಂಬಂಧಗಳನ್ನು ಬಲಪಡಿಸುವಂತಿದ್ದರೆ
ಪ್ರಖ್ಯಾತರು,ತಾರೆಗಳೆಲ್ಲರದ್ದೂ ಒಳ್ಳೆಯ ದಾಂಪತ್ಯವೆನಿಸುತ್ತಿತ್ತು...
ಸರಳವಾಗಿ ಬಾಳು,
ನಮ್ರನಾಗಿ ಒಂಟಿಯಾಗಿ ಹೆಜ್ಜೆ ಹಾಕು,
ಪ್ರೀತಿ ಮೌಲ್ಯಯುತವಾಗಿರಲಿ
ಎಲ್ಲವು ಒಳ್ಳೆಯದೇ ಆಗುವುದು
ನಮ್ಮ ಹಾದಿ ಒಳ್ಳೆಯ ದಾರಿಯೇ ಆಗುವುದು ....
ಪ್ರೇರಣೆ: ಅನಾಮಿಕ
ಒಮ್ಮೊಮ್ಮೆ ಬೇಸರ ಮೂಡಿಸುತ್ತದೆ
ಇರಲಾರದೆ ಮನ ಚಡಪಡಿಸುತ್ತಿದೆ
ದೂರದಿಂದ ನೋಡುವವರಿಗೆ ಅದೇ ಅಚ್ಚರಿ
ನನ್ನ ಜೀವನದ ಕನಸು ಅವರಿಗೆ .....
ಹಳ್ಳಿಯ ಕಾಲುದಾರಿಯಲ್ಲಿ ಸಾಗುವ ಮಗುವಿಗೆ
ಆಕಾಶದಲ್ಲಿ ಹಾರುವ ವಿಮಾನದಲ್ಲಿ ತೇಲುವ ಕನಸು
ಸ್ವಚ್ಚಂದವಾಗಿ ಓಡಾಡುವ ಹಳ್ಳಿಯ ಮಗುವ
ಕಾಣುವ ವಿಮಾನದ ಚಾಲಕನಿಗೆ
ಹಳ್ಳಿಯ ಮಗುವಾಗುವ ಕನಸು ಅವನಿಗೆ....
ಅದೇ ಜೀವನ, ನಮ್ಮದು ಅದ ಅನುಭವಿಸಬೇಕು
ಸಂಪ್ಪತ್ತೇ ಜೀವನದ ಸುಖವಾದಲ್ಲಿ
ಶ್ರೀಮಂತರೆಲ್ಲಾ ರಸ್ತೆಗಳಲ್ಲಿ ಕುಣಿದಾಡುತ್ತಿದ್ದರು
ಆದರೆ ಬಡವರ ಮಕ್ಕಳು ರಸ್ತೆಗಳಲ್ಲಿ ಕುಣಿವರು....
ಅಧಿಕಾರವೇ ರಕ್ಷಣೆಯ ಪರ್ಯಾಯವಾಗಿದ್ದರೆ
ಅಧಿಕಾರಿಗಳು,ರಾಜಕಾರಣಿಗಳಾರೂ
ಪೋಲೀಸರ ರಕ್ಷಣೆ ಪಡೆಯುತ್ತಿರಲಿಲ್ಲ...
ಸಾಮಾನ್ಯರೇ ಹೆಚ್ಚು ಸುರಕ್ಷಿತರು ಹಾಗು ಪರಮ ಸುಖಿಗಳು ....
ಸೌಂದರ್ಯ ಹಾಗು ಪ್ರಖ್ಯಾತಿ ಒಳ್ಳೆಯ
ಸಂಬಂಧಗಳನ್ನು ಬಲಪಡಿಸುವಂತಿದ್ದರೆ
ಪ್ರಖ್ಯಾತರು,ತಾರೆಗಳೆಲ್ಲರದ್ದೂ ಒಳ್ಳೆಯ ದಾಂಪತ್ಯವೆನಿಸುತ್ತಿತ್ತು...
ಸರಳವಾಗಿ ಬಾಳು,
ನಮ್ರನಾಗಿ ಒಂಟಿಯಾಗಿ ಹೆಜ್ಜೆ ಹಾಕು,
ಪ್ರೀತಿ ಮೌಲ್ಯಯುತವಾಗಿರಲಿ
ಎಲ್ಲವು ಒಳ್ಳೆಯದೇ ಆಗುವುದು
ನಮ್ಮ ಹಾದಿ ಒಳ್ಳೆಯ ದಾರಿಯೇ ಆಗುವುದು ....
ಪ್ರೇರಣೆ: ಅನಾಮಿಕ
Subscribe to:
Posts (Atom)
ರಾತ್ರಿ ಊಟ: ಧ್ಯಾನ
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
-
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...