Thursday, December 14, 2017

ಬಾ ರವಿ, ಬಾ ಉದಯಿಸು ಬಾ

ಬಾ ರವಿ, ಬಾ ಉದಯಿಸು ಬಾ
ನಿನಗಾಗಿಯೇ ಕಾಯುತಿಹೆನು,
ಧ್ಯಾನಾಸಕ್ತನಾಗಿ ಆಹ್ವಾನಿಸುವೆ
ಬಾ ಮನಸಿಗೆ,ಬಾ ಹೃದಯಕೆ

ದಿನವೂ ಮನವ ತೊಳೆಯುತಿಹೆನು
ಧ್ಯಾನದಿಂದಲಿ ಜನ್ಮಗಳ ಪಾಪಕೊಳೆ,
ಕರಗದು ಇಂದು ಅಂಟಿದೆ ಬಲವಾಗಿ
ನಿನ್ನ ಕರುಣೆಯಿರೆ ಅಸಾಧ್ಯವದಾವುದು

ಮನಕೆ ತಾಳ್ಮೆಯ  ನೀಡು
ಸತತ ಪ್ರಯತ್ನದ ಕಡೆ ಗಮನವೀಯುವಂತೆ ಮಾಡು
ಸೋಲೋ,ಗೆಲುವೋ ಸದಾ ಕಾಯಕದಲ್ಲಿಡು
ಮರತೆಯೆನ್ನದಿರು ಆಸರೆ ನೀಡು

No comments:

Post a Comment

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...