Tuesday, December 5, 2017

ಮನವು ಕೊರಗಿದೆ

ಮನವು ಕೊರಗಿದೆ
ಒಳ ಭಾವಗಳ ತೊಳಲಾಟಕೆ
ಆರ್ತನಾದ ನಿಲ್ಲದಾಗಿದೆ
ಒಳತೋಟಿಗಳ  ಸಂಚಿಗೆ
ನೋವು ಹೆಚ್ಚಾಗಿದೆ
ನಿಲ್ಲದ ಪ್ರಹಾರಗಳಿಗೆ
ದಿಕ್ಕುಗೆಟ್ಟು ಓಡುತಿದೆ
ತಲ್ಲಣ ಸುನಾಮಿಯಂತಾಗಿದೆ
ನಿನ್ನ ಆಟ ಬಲವಾಗಿದೆ
"ನಾನು" ಎಂಬಾಟ ಸವಕಲಾಗಿದೆ
ಅರಿವಿನ ಬೆಳಕು ತೆರೆಕಂಡಿದೆ
"ನಾನು" ಎಂಬ ಭಾವ ಶರಣಾಗಿದೆ

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...