Friday, December 8, 2017

ಹಗಲುವೇಷ

ಎನ್ನ ಮನದ ದುಗುಡವ ನಿನಗೆ ಹೇಳಲೇ
ಏಕೆ ಹೀಗೆಲ್ಲಾ ಆಗುತಿದೆ ನಾನರಿಯೆ?
ಮನವು ಹೀಗೆಳೆಯುತಿದೆ ನನ್ನದಲ್ಲದ ತಪ್ಪಿಗೆ:

ಎಲ್ಲರೂ ನಗುವವರೆ ಒಳಗೊಳಗೆ
ಮುಖವು ಹರಳೆಣ್ಣೆ ಕುಡಿದವರ ಹಾಗೆ
ನನಗೆ ನನ್ನದೇ ಚಿಂತೆ ನನ್ನದೇನು ತಪ್ಪೆಂದು?:

ರಾಜಕೀಯ, ಮಸಲತ್ತು
ನೋವಾಗುವುದು ಮನಸ್ಸಿಗೆ
ಈ ನಾಟಕ,ಮುಖವಾಡ  ತಿಳಿದೂ
ಜೊತೆಜೊತೆಯಾಗೆ ನಡೆಯಬೇಕಿದೆ:

ಇಂದೋ,ನಾಳೆಯೋ
ಬೇಗನೆ ಮುಗಿಯಲಿ ಇವರ ನಾಟಕ
ಮೊದಲಿನಂತಾಗಲಿ ಅವರ ನಡುವಳಿಕೆ
ನಾನು ಅವರಿಗೆ ತೊಡರುಗಲ್ಲಲ್ಲ:

ನಿರ್ಮಲಚಿತ್ತ ನನ್ನದು,
ಹರಿವ ನದಿಯ ತೊರೆಯು ನಾನು
ನಾ ನಿಲ್ಲಲಾರೆ, 
ಗುರಿಯ ಹಾದಿಯ ಬಿಡಲಾರೆ:

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...