Monday, December 25, 2017

ಭರವಸೆ

ಆಗಸವೆಲ್ಲಾ ಶುಭ್ರವಾಗಿದೆ
ಮನಸುಗಳಲ್ಲಿ ಗೊಂದಲ ತುಂಬಿದೆ
ದಾರಿ ದೂರ ಸವೆಸಬೇಕಿದೆ:

ಪ್ರಜಾ ಸೇವಕರು ದಾರಿ ತಪ್ಪಿದ್ದಾರೆ:
ಗುರುಗಳು ಯೋಗ್ಯತೆ ಕಳೆದುಕೊಂಡಿದ್ದಾರೆ:
ಜನರು ಸ್ವಾರ್ಥಿಗಳಾಗಿದ್ದಾರೆ:
ಗುರಿಯಿಲ್ಲ,ದಾರಿಯುೂ ಕಾಣುತ್ತಿಲ್ಲ:

ಅಗಸದ ಅಂಚಿಗೆ ಕಣ್ಣು ನೆಟ್ಟಿದೆ:
ಭರವಸೆಯಿದೆ ನಾಳೆ ರವಿ ಮೂಡುವನೆಂದು:
ಬದಲಾವಣೆಯ ಗಾಳಿ ಬರುವುದಿದೆ
ಪೂರ್ವದಿಂದಲೋ?
ಉತ್ತರದಿಂದಲೋ?
ಬದಲಾವಣೆಯ ಹರಿಕಾರ ಬರುವನು
ಎಲ್ಲರ ಮನದಲ್ಲೂ ಚೆೃತನ್ಯಬಿತ್ತುವನು
ನಾಳೆ,ನಾಳೆ ನಮ್ಮವು
ಅದೊಂದೇ ಭರವಸೆ ಇಂದು ನಿದ್ರಿಸಲು

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...