Monday, December 25, 2017

ಭರವಸೆ

ಆಗಸವೆಲ್ಲಾ ಶುಭ್ರವಾಗಿದೆ
ಮನಸುಗಳಲ್ಲಿ ಗೊಂದಲ ತುಂಬಿದೆ
ದಾರಿ ದೂರ ಸವೆಸಬೇಕಿದೆ:

ಪ್ರಜಾ ಸೇವಕರು ದಾರಿ ತಪ್ಪಿದ್ದಾರೆ:
ಗುರುಗಳು ಯೋಗ್ಯತೆ ಕಳೆದುಕೊಂಡಿದ್ದಾರೆ:
ಜನರು ಸ್ವಾರ್ಥಿಗಳಾಗಿದ್ದಾರೆ:
ಗುರಿಯಿಲ್ಲ,ದಾರಿಯುೂ ಕಾಣುತ್ತಿಲ್ಲ:

ಅಗಸದ ಅಂಚಿಗೆ ಕಣ್ಣು ನೆಟ್ಟಿದೆ:
ಭರವಸೆಯಿದೆ ನಾಳೆ ರವಿ ಮೂಡುವನೆಂದು:
ಬದಲಾವಣೆಯ ಗಾಳಿ ಬರುವುದಿದೆ
ಪೂರ್ವದಿಂದಲೋ?
ಉತ್ತರದಿಂದಲೋ?
ಬದಲಾವಣೆಯ ಹರಿಕಾರ ಬರುವನು
ಎಲ್ಲರ ಮನದಲ್ಲೂ ಚೆೃತನ್ಯಬಿತ್ತುವನು
ನಾಳೆ,ನಾಳೆ ನಮ್ಮವು
ಅದೊಂದೇ ಭರವಸೆ ಇಂದು ನಿದ್ರಿಸಲು

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...