Tuesday, December 5, 2017

ಹಾರಾಟ

ಮುೂಡಣದ ಅಂಚಿನಲ್ಲಿ
ಮುೂಡುತಿದೆ ಚಿನ್ನದುಂಗುರ
ಆಗಸವೆಲ್ಲಾ ರಕ್ತವರ್ಣ
ಮನದ ತಿಮಿರವ ಗೖೆದ
ಗುರುತಿಗೆ ರಕ್ತಧೋಕುಳಿ
ದಿನಂಪ್ರತಿ ನಡೆಯಬೇಕು
ಈ ಕದನ ,ಹೋರಾಟ
ರವಿಯ ಕಿರಣಗಳು
ಹೊತ್ತು ತಂದಿವೆ ನೂರು ಸಂದೇಶ
ಅರಿಯದಾಗಿದೆ
ಅಜ್ಞಾನದ ಕತ್ತಲಲ್ಲಿ ಮುಳುಗಿದೆ
ಅರಿವಿಗಾಗಿ ಈ ಹೋರಾಟ
ಉಳಿವಿಗಾಗಿ ಈ ಹೋರಾಟ
ಉಸಿರಿರುವವರೆಗೆ ಈ ಹೋರಾಟ
ಉಸಿರುನಿಂತ ಮೇಲೆ ಮಣ್ಣಾಗುವುದೀ ಹಾರಾಟ

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...