Sunday, December 31, 2017

ಮರೆತು ಎಲ್ಲೋ ಬಿಟ್ಟಿದ್ದೇವೆ

ಮರೆತು ಎಲ್ಲೋ ಬಿಟ್ಟಿದ್ದೇವೆ
ಆ ವಸ್ತುವನ್ನು ಹೃದಯವೆನ್ನುತ್ತಾರೆ
ಭರವಸೆಯೂ ಅಪರಿಚಿತವಾಗಿದೆ
ನೋವೂ ಕೂಡ ಪರಕೀಯವಾಗಿದೆ
ಕನ್ನಡಿಯಲ್ಲಿ ಕಂಡ ಮುಖವೂ
ಕಳಚಿದ ಪೊರೆಯಂತೆ ತೋರಿದೆ
ಎಲ್ಲಿ ಬಿಟ್ಟೆವೋ ಜ್ಞಾಪಕ ಬರುತ್ತಿಲ್ಲ 
ನಮಗೆ ತಿಳಿದ ಅ ವ್ಯಕ್ತಿಯ ಮುಖ
ಎಲ್ಲೋ ಬಿಟ್ಟು ಮರೆತ್ತಿದ್ದೇವೆ
ಆ ವಸ್ತುವನ್ನು ಹೃದಯವೆನ್ನುತ್ತಾರೆ

ಪ್ರೇರಣೆ: ಹಿಂದಿ ಕವಿತೆ

Saturday, December 30, 2017

ಬನ್ನಿ ಮತ್ತೆ ದೀಪ ಬೆಳಗೋಣ

ಬನ್ನಿ ಮತ್ತೆ ದೀಪ ಬೆಳಗೋಣ
ಗಾಳಿ ಬೀಸಿ ಉರಿವ ದೀಪ ಆರಿದೆ
ಕತ್ತಲು ಕವಿದು ಭಯವನೆ ಬಿತ್ತಿದೆ
ಕತ್ತಲು ನುಂಗುವ ಮುನ್ನ ,
ದಾರಿ ಕಾಣದೆ ಬೀಳುವ ಮುನ್ನ,
ಕೃೆಹಿಡಿದು ಬಾ,ಬೆಳಕ ತಾ
ಮನದಲಿ ಕಿಡಿಯ ಹೊತ್ತಿಸು
ಲೋಕವೆಲ್ಲಾ ಬೆಳಗಲಿ
ಮನ ಮನಗಳು ಬೆಳಗಲಿ
ಗಾಳಿ ಬೀಸಿ ಉರಿವ ದೀಪ ಆರಿದೆ
ಬನ್ನಿ ಮತ್ತೆ ದೀಪ ಬೆಳಗೋಣ//

ಸೋಲೇ ಇರಲಿ,ಗೆಲುವೇ ಇರಲಿ

ಸೋಲೇ  ಇರಲಿ,ಗೆಲುವೇ ಇರಲಿ
ಸ್ವಲ್ಪವೂ ಭಯವಿಲ್ಲವೆನೆಗೆ:
ಕರ್ತವ್ಯದ ದಾರಿಯಲ್ಲಿ ಏನೇ ಸಿಗಲಿ
ಇದು ಸರಿಯೇ,ಅದು ಸರಿಯೇ
ವರವನೆಂದೂ ಬೇಡುವುದಿಲ್ಲ
ಸೋಲಿಗೆಂದೂ ತಲೆಬಾಗುವುದಿಲ್ಲ:

-ವಾಜಪೇಯಿ

ನೋವೇ ಬಾ ನೋವೇ

ನೋವೇ ಬಾ ನೋವೇ ನೀ ಬಂದಾಗಲೇ
ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಧ್ಯ:
ಬಿಳಿಯಾಗಿ ಕಾಣುವುದೆಲ್ಲಾ ಹಾಲಲ್ಲ,
ಎಂಬುದಾಗಲೇ ತಿಳಿಯುವುದು:
ಜನರ ಮುಖವಾಡ ಕಳಚುವುದು:
ಗೋಮುಖ ವ್ಯಾಗ್ರತನ ಕಾಣುವುದು:
ಕಡೆಗಣಿಸುವವರು ನಮ್ಮವರೇ,
ನಮ್ಮ ನಂಬಿಕೆ ಸುಳ್ಳಾಗುವುದು:
ಮನವು ಕೊರಗುವುದು:
ಅವರ ಜೊತೆಯೇ ಹೆಜ್ಜೆ ಹಾಕಬೇಕು:
ಮುಳ್ಳುಗಳ ನಡುವಿನ ಪಯಣ
ನೋವುಗಳು ಸಹಜ:
ಅರಗಿಸಿಕೊಳ್ಳಬೇಕು,
ಗಟ್ಟಿಯಾಗಬೇಕು,
ಎದೆಗುಂದಬೇಡ,
ಮುನ್ನುಗ್ಗು:

ವರುಷಗಳುರುತಿದೆ

ವರುಷಗಳುರುತಿದೆ 
ಕಾಲಚಕ್ರದಣತಿಯಂತೆ:
ಜೊತೆಜೊತೆಗೆ ಹೆಜ್ಜೆ ಹಾಕು
ಹಿಂದೆ ಬೀಳದಂತೆ:
ಏಳೋ,ಬೀಳೋ
ಮುಂದುವರಿಯಲಿ ಪಯಣ:
ನೋವೋ,ನಲಿವೋ
ಅನುಭವಿಸು ಜೀವನ:
ನೂರಿರಲಿ ಹಳೆಯ ವರುಷದ
ನೋವುಗಳು:
ಕಣ್ಣೀರಲಿ ಎಲ್ಲವೂ ಕರಗಲಿ:
ನಂಬಿದವರು ಕೆೃಕೊಟ್ಟರೂ
ಹೃದಯ ಕೊರಗದಿರಲಿ:
ಕ್ಷಣ-ಕ್ಣಣಗಳಲಿ ಜೀವಿಸು:
ಅಣು-ಅಣುವಿನಲಿ ಸಂತಸಬಡು:
ಮನ-ಮನಗಳ ಪ್ರೀತಿಸು:

Friday, December 29, 2017

ಬೆರಗಿನ ಬೆಳಕೆ

ಬೆರಗಿನ ಬೆಳಕೆ
ಏರಲಿ ದಿಗಂತಕೆ:
ಹೊತ್ತಿಸಿ ಹೊರಟಿ
ಸಾಲು ಸಾಲು  ಹಣತೆ
ಸಂತಸದ ಗಳಿಗೆ,
ಬೆಳಕ ಚೆಲ್ಲಬೇಕು ಇಳೆಗೆ
ಬೆಳಕ ಚೆಲ್ಲಿ ಪರಮಾರ್ಥದ ಗಳಿಕೆ:
ತಾನುರಿದು ಪರರಿಗೆ 
ಬದುಕುವುದು ಏಳಿಗೆ:
ಮುಂದೆ ಸಾಗಲಿ ,
ಹೆಜ್ಜೆ ಹೆಜ್ಜೆ ಸೇರಲಿ,
ಮನಕುಲ ಬೆಳಗಲಿ:
ಮಾನವತೆಯ ಕಕ್ಕುಲತೆ 
ದಿಗಂತಕ್ಕೇರಲಿ//

Thursday, December 28, 2017

ಬೆಳಗೊಂದು ಹೋಮ-ಹವನದಂತೆ

ಬೆಳಗೊಂದು ಹೋಮ-ಹವನದಂತೆ
ಸೂರ್ಯನೇ ಅಗ್ನಿ,
ಮನಸ್ಸು, ಆಲೋಚನಾ ಲಹರಿಯೇ ಸಮಿದೆಗಳು,
ಸ್ವಾರ್ಥ,ಮೋಹ,ಮದಗಳನ್ನೇ ಆಹುತಿಯಾಗುಸುವೆವು
ಬೆಳಕೇ ಹೋಮದ ಫಲ
ಪ್ರತಿ ದಿನವೂ ಒಂದು ಹೆಜ್ಜೆಯ ಮುನ್ನಡೆ
ಕ್ರಮಿಸುವ ದಾರಿ ಬಹಳಷ್ಟು
ಸಹನೆ ಮೀರದೆ ದಿನವು ಕರ್ತವ್ಯ
ಕಾಯಕ ತಳೆದಿದೆ ಜಂಗಮ ನಡೆ:

Wednesday, December 27, 2017

ಸಣ್ಣ ಮನಸ್ಸಿನಿಂದ

ಸಣ್ಣ ಮನಸ್ಸಿನಿಂದ
ಯಾರೂ ದೊಡ್ಡವರೆನಿಸಿಕೊಂಡಿಲ್ಲ:
ಮುರಿದ ಮನಸ್ಸಿನಿಂದ
ಜೀವನವ ಎದುರಿಸಲಾಗುವುದಿಲ್ಲ:

- ಅಟಲ್ ಬಿಹಾರಿ ವಾಜಪೇಯಿ

ಏನ ಬೇಡಲಿ ನಿನ್ನ ದೇವ?

ಏನ ಬೇಡಲಿ ನಿನ್ನ ದೇವ?
ಬಿನ್ನಹಗಳಿವೆ ಅನಂತ
ಕೇಳಿದ ವರಗಳ ಕೊಡುವ 
ಕಲ್ಪವೃಕ್ಷ ನೀನು,ನಾ ಬಲ್ಲೆ
ಅಪರಿಮಿತ ಸುಖಗಳು ಬೇಕೆನ್ನಲೇ!
ಅಗಣಿತ ಸಂಪತ್ತಿಗೆ ಆಸೆ ಪಡಲೇ!
ಮನವು ಗೊಂದಲದಲ್ಲಿದೆ
ಆಯ್ಕೆಯೇ ಇಲ್ಲಿ ಕಠಿಣ
ನಾ ಬಲ್ಲೆ  ,ಅವುಗಳಲ್ಲಿ ನೀನಿಲ್ಲ
ಈ ಲೋಕದಷ್ಟೃೆಶ್ವರ್ಯಗಳೂ ಬೇಡ
ಈ ಲೋಕದ ಯಾವ ಸುಖಗಳೂ ಬೇಡ
ಇಲ್ಲಿ ಎಲ್ಲವೂ ತಾತ್ಕಾಲಿಕ
ನೀ ಮನದೊಳು ನಿಲ್ಲು
ನಿನ್ನದೇ ಧ್ಯಾನವಿರಲಿ ಮನದಲ್ಲಿ
ಅನವರತ ನೀ ನನ್ನ ಉಸಿರಾಗು ,
ಶರಣಾಗಿಹೆನು ಸಲಹೆನ್ನನು ತಂದೆ//

Tuesday, December 26, 2017

ನೆಮ್ಮದಿ ಜಗದಲಿ ಆವರಿಸಲಿ

ಆಗಸದೆಲ್ಲಡೆ ಧೂಳು ತುಂಬಿದೆ:
ರಥವನೇರಿ ಹೊರಟಿಹನು ರವಿ
ಕುದುರೆಗಳ ನಾಗಾಲೋಟಕ್ಕೆ ಬೆದರಿ ಬೆವೆತಿದೆ ಮಂಜು:
ಹನಿ ಹನಿಯಾಗಿ ಜಾರುತಿದೆ ಇಳೆಗೆ,
ಹೊನ್ನಬೆಳಕಿಗೆ ಇಳೆಯು ನಾಚಿದೆ:
ಹಕ್ಕಿಗಳ ಚಿಲಿಪಿಲಿ ಗಾಯನ ಹೊಮ್ಮಿದೆ:
ಮನದ ತುಂಬೆಲ್ಲಾ ಚೆೃತನ್ಯ ತುಂಬಿದೆ:
ಸೂರ್ಯೋದಯದ ರಸಾನುಭವಕೆ ಮೆೃನವಿರೇಳುತಿದೆ:
ಹೊಸ ಹೊಸ ದರ್ಶನಕೆ ಮನವು ತೆರೆದಿದೆ:
ಒಳ್ಳೆಯ ವಿಚಾರಗಳು ದಶದಕ್ಕುಗಳಿಂದಲೂ ಮನವ ತಲುಪಲಿ:
ಜೀವನ ಪ್ರೀತಿ ಹೆಚ್ಚಾಗಲಿ,
ಧ್ವೇಷಭಾವಗಳು ತೊಲಗಲಿ,
ಶಾಂತಿ,ನೆಮ್ಮದಿ ಜಗದಲಿ ಆವರಿಸಲಿ:

Monday, December 25, 2017

ಭರವಸೆ

ಆಗಸವೆಲ್ಲಾ ಶುಭ್ರವಾಗಿದೆ
ಮನಸುಗಳಲ್ಲಿ ಗೊಂದಲ ತುಂಬಿದೆ
ದಾರಿ ದೂರ ಸವೆಸಬೇಕಿದೆ:

ಪ್ರಜಾ ಸೇವಕರು ದಾರಿ ತಪ್ಪಿದ್ದಾರೆ:
ಗುರುಗಳು ಯೋಗ್ಯತೆ ಕಳೆದುಕೊಂಡಿದ್ದಾರೆ:
ಜನರು ಸ್ವಾರ್ಥಿಗಳಾಗಿದ್ದಾರೆ:
ಗುರಿಯಿಲ್ಲ,ದಾರಿಯುೂ ಕಾಣುತ್ತಿಲ್ಲ:

ಅಗಸದ ಅಂಚಿಗೆ ಕಣ್ಣು ನೆಟ್ಟಿದೆ:
ಭರವಸೆಯಿದೆ ನಾಳೆ ರವಿ ಮೂಡುವನೆಂದು:
ಬದಲಾವಣೆಯ ಗಾಳಿ ಬರುವುದಿದೆ
ಪೂರ್ವದಿಂದಲೋ?
ಉತ್ತರದಿಂದಲೋ?
ಬದಲಾವಣೆಯ ಹರಿಕಾರ ಬರುವನು
ಎಲ್ಲರ ಮನದಲ್ಲೂ ಚೆೃತನ್ಯಬಿತ್ತುವನು
ನಾಳೆ,ನಾಳೆ ನಮ್ಮವು
ಅದೊಂದೇ ಭರವಸೆ ಇಂದು ನಿದ್ರಿಸಲು

Friday, December 22, 2017

ಅನನ್ಯ ಬೆರಗು

ವರುಷಗಳಾಗಿದೆ ಕಣ್ಣು ಮುಚ್ಚಿ ಕುಳಿತು
ಧ್ಯಾನದಲ್ಲಿ ಮಗ್ನನಾಗಿಹೆನೆಂಬ ಭ್ರಮೆ:
ಕಳಚತೊಡಗಿದಾಗಲೇ ಅರಿವಾದುದು
ವ್ಯರ್ಥ ಪ್ರಯತ್ನ ನನ್ನದಾಯಿತೆಂದು:
ಕಣ್ಣು ಮುಚ್ಚಿದಾಗಲೇ ಕತ್ತಲು:
ಯಾರೋ ಕದ ತಟ್ಟಿದ ಅನುಭವ,
ನನಗೋ ಧ್ಯಾನದ ಭ್ರಮೆ:
ತೆರೆಯಲಿಲ್ಲ ಕದವ,ಭದ್ರವಾಗಿದೆಯೇ
ಮತ್ತೆ ಮತ್ತೆ ಪರಾಮರ್ಶಿಸಿದೆ:
ಹಲವು ಸಲ ಕದ ತಟ್ಟಿದ ಶಬ್ದ,
ನಿರ್ಲಿಪ್ತನಾಗಿ ಭ್ರಮೆಯಲಿ ತೇಲಿದೆ:
ಅಂತೂ ಒಮ್ಮೆ ಎಚ್ಚರವಾಯಿತು,
ಯಾರೋ ನನ್ನ ಹೆಸರೇಳಿ ಕೂಗಿದರೆಂದು ಕಣ್ಣು ತೆರೆದೆ ಸುತ್ತಲೂ
ಕತ್ತಲ ಕಡಲು ಜೊತೆಗೆ ಯಾರೋ ಜೊರಾಗಿ ಕದ ತಟ್ಟುವ ಶಬ್ದ 
"ಬಂದೆ,ಬಂದೆ ಒಂದು ನಿಮಿಷ"
ಕೂಗಿಕೊಂಡರೂ ಕೊರಳಿಂದ ದನಿ ಹೊರಡಲಿಲ್ಲ,
ಸುತ್ತಲೂ ಕತ್ತಲು ಬಾಗಿಲೆಲ್ಲಿದೆ? ಹುಡುಕಾಟ,ತಡಕಾಟ
ಅಗುಳಿಯ ತೆಗೆದು ಕದವ ತೆರೆದೆ
ಓ ಪಕ್ಕನೆ ಕಣ್ಣಿಗೊಡೆದ ಬೆಳಕು,
ಮೂಡಣದ ಬೆಳಕಿನ ಬೆಡಗು,
ಮುಂಜಾನೆಯ ಸೂರ್ಯೋದಯ
ಮನದಲಿ ಮೂಡಿಸಿದೆ ಅನನ್ಯ ಬೆರಗು:

Thursday, December 21, 2017

ಬಾಲ್ಯದ ಕಾಲವೊಂದಿತ್ತು

ಬಾಲ್ಯದ ಕಾಲವೊಂದಿತ್ತು,
ಅದರಲ್ಲಿ ಖುಷಿಯೆಂಬ
ಸಂಪ್ಪತ್ತಡಗಿತ್ತು:

ಚಂದಮಾಮನ ಹಿಡಿಯುವ
ಆಕಾಂಕ್ಷೆಯಿತ್ತು,
ಹೃದಯವೊ ಚಿಟ್ಟೆಗಳಿಗೆ 
ಮನಸೊತಿತ್ತು:

ಬೆಳಗಾಗುವುದರ
ಪರಿವೆಯೇ ಇರಲಿಲ್ಲ:
 ಸಂಜೆಯಲ್ಲಿ ಆಡದ
ಜಾಗಗಳಿಲ್ಲ:

ದಣಿದು, ಆತುರದಿಂದ ಶಾಲೆಯಿಂದ ಬಂದು,
ಆಟ ಆಡಲು ಹೋಗಬೇಕಿತ್ತು
ಅಮ್ಮನ ಕಥೆಗಳು,
ಸಂತಸದ ಮಾಯಾಲೋಕವದು:
ಮಳೆಯಲ್ಲಿ ಕಾಗದದ ಹಡುಗುಗಳಿದ್ದವು,
ಎಲ್ಲಾ ಕಾಲವೂ ಸಂತಸದ ಕ್ಷಣಗಳು:

ಪ್ರತಿ ಆಟಗಳಲ್ಲೂ ಗೆಳೆಯರಿದ್ದರು,
ಎಲ್ಲಾ ಸಂಬಂದಗಳನ್ನೂ ನಿಭಾಯಿಸಬೇಕಿತ್ತು:
ಆಟದಲ್ಲಾದ ನೋವಿಗೆ ನಾಲಗೆಯಿಲ್ಲ,
ಗಾಯಗಳಿಗೂ ಲೆಕ್ಕವಿಲ್ಲ:

ಅಳುವುದಕ್ಕೆ ಕಾರಣಗಳೇ ಇರಲಿಲ್ಲ,
ನಗುವುದಕ್ಕೆ ಕಾರಣಗಳೇ ಬೇಕಿರಲಿಲ್ಲ:
ಏಕಾದರೂ ಇಷ್ಟು ದೊಡ್ಡವರಾದೆವೊ,
ಇಂದಿನಕ್ಕಿಂತ ಬಾಲ್ಯದ ಕಾಲವೇ ಸೊಗಸಾಗಿತ್ತು.........😀


ಪ್ರೇರಣೆ: ಹಿಂದಿ ಕವಿತೆ
ಕವಿ:ಅನಾಮಿಕ 

ಮೂಡಣದ ದೀಪ

ಇದೇನು?, ನೀನೇ ಹೇಳು ಗೆಳೆಯ
ಮೂಡಣದಲ್ಲಿ ದೀಪವೊಂದು
ಉರಿಯುತಿಹುದು,ಯಾರು ಹಚ್ಚಿದ ದೀಪವೊ?
ಬೆಳಕೆಷ್ಟೆಂದರೆ ಲೋಕವೆಲ್ಲಾ ಸ್ಪಷ್ಟವಾಗಿ ಕಾಣುತಿಹುದು
ಕತ್ತಲಿನಿಂದ ಆವರಿಸಿದ್ದ ಈ ಲೋಕ,
ಒಮ್ಮೆಲೆ ಚೆೃತನ್ಯ ಬಂದಂತಾಗಿದೆ
ಚಳಿ,ಗಾಳಿಗೆ ನಲುಗುತ್ತಿದೆವು
ಏನೂ ಕಾಣದಾಗಿ ದಿಕ್ಕೇ ತೋಚದಂತಾಗಿತ್ತು
ಬಹು ನಿರೀಕ್ಷೆಯಿಂದ ನೀ ಬರುವುದ ಕಾಯುತ್ತಿದ್ದೆ
ಯಾರು ಆ ದೀಪವ ಹೊತ್ತು ತಂದವರು?
ಈ ಕತ್ತಲ ಲೋಕವ ಬೆಳಗಿದವರಾರು?

Wednesday, December 20, 2017

ಏಳು,ಎದ್ದೇಳು

ಏಳು,ಎದ್ದೇಳು ಬೆಳಗಾಯಿತೆಂದುಲಿಯುತಿದೆ 
ಹಕ್ಕಿಗಳು:
ಮೂಡಣದಲ್ಲಿ ಕೆಂಪುಚೆಲ್ಲಿ ಉದಯವಾಯಿತೆಂದುಲಿಯುತಿದೆ 
ಹಕ್ಕಿಗಳು:
ಮಂಜು ತುಂಬಿದಾಗಸದಲ್ಲಿ
ಬೆಂಕಿಯ ಚೆಂಡು ಮೇಲೆರುತಿರೆ
ಸೃಷ್ಟಿಯ ಸೊಬಗಿಗೆ ಬೆರಗಾಗಿ
ಹಾಡುತಿದೆ ಹಕ್ಕಿಗಳು:
ಲೋಕಯಾತ್ರೆಯ ಪಥಿಕ ಮೋಡಗಳ 
ಮೇಲೆ ಸೂರ್ಯರಶ್ಮಿಯು ಬಿದ್ದು 
ಕಾಮನಬಿಲ್ಲು ಮೂಡಿ ಬೆಳಗಾಯಿತೆಂದು ಸ್ವಾಗತಿಸಿದೆ:
ಹಸಿರು ಎಲೆಗಳ ಮೇಲೆ ಸಲಿಲ ನರ್ತನ ಮಾಡಿ 
ಬೆಳಗಿನ ಕಿರಣಗಳಿಂದ ಮುತ್ತಾಗಿ ರೋಮಾಂಚನ 
ಮೂಡಿಸಿ ಬೆಳಗಾಯಿತೆಂದು ಸ್ವಾಗತಿಸಿದೆ:

ಮೊದಲು ಮಾನವನಾಗು

ಮುಕ್ತಿ ಯಾವುದರಿಂದ?
ಕೆಲವರೆಂದರು
               "ಮುಸ್ಲಿಮನಾಗುವುದರಿಂದ"
ಮತ್ತೆ ಕೆಲವರೆಂದರು
               "ಕ್ರಿಶ್ಚಿಯನ್ನಾಗುವುದರಿಂದ"
ನನ್ನ ಮಣ್ಣು ನುಡಿಯಿತು
   "ಮೊದಲು ಮಾನವನಾಗುವುದರಿಂದ"

ಯಾರನ್ನು ಅನುಸರಿಸಲಿ?
ಕೆಲವರೆಂದರು
    "ಪ್ರವಾದಿಯ ಅನುಯಾಯಿಯಾಗು"
ಮತ್ತೆ ಕೆಲವರೆಂದರು
 "ಜೀಸಸ್ ನ ಅನುಯಾಯಿಯಾಗು"
ನನ್ನ ಮಣ್ಣು ನುಡಿಯಿತು
  "ನಿನ್ನ ಅಂತರಾತ್ಮದ ದನಿಕೇಳು"

ದೇವನೆಲ್ಲಿಹನು?
ಕೆಲವರೆಂದರು
                      "7ನೇ ಅಂತರಿಕ್ಷದಲ್ಲಿ"
ಮತ್ತೆ ಕೆಲವರೆಂದರು
                       "4ನೇ ಅಂತರಿಕ್ಷದಲ್ಲಿ"
ನನ್ನ ಮಣ್ಣು ನುಡಿಯಿತು
          "ನಿನ್ನಲ್ಲೇ,ನಿನ್ನ ಜೊತೆಯಲ್ಲೇ"

ದೇವರ ಕೆಲಸವೇನು?
ಕೆಲವರೆಂದರು
                      "ಪರೀಕ್ಷಿಸುವುದು"
ಮತ್ತೆ ಕೆಲವರೆಂದರು
                       "ಶಿಕ್ಷಿಸುವುದು"
ನನ್ನ ಮಣ್ಣು ನುಡಿಯಿತು
                  "ಬೆಂಬಲಿಸುವುದು"

Tuesday, December 19, 2017

ಕರ್ಮಯೋಗಿ

ಲೋಕವ ಬೆಳಗಲು ದೀಪವೊಂದು
ಪ್ರತಿದಿನವೂ ತನ್ನೆತಾನುರಿಯುತಿದೆ
ಆವ ಪ್ರಶಸ್ತಿ,ಬಿರಿದು ಬಾವಲಿಗೂ
ಆಸೆ ಪಡದೆ ಕರ್ಮಯೋಗಿ ತಾನೆಂದು
ಜಗಕೆ ಶೃತಪಡಿಸುತಿದೆ
ಯಾರಪ್ಪಣೆಗೂ ಕಾಯದೆ
ನಡೆಯುತಿದೆ ನಿತ್ಯಕಾಯಕ
ಜಗದ ಚೆೃತನ್ಯ,ಜೀವನ ಪ್ರೀತಿ ನೀನೇ

Monday, December 18, 2017

ಭ್ರಮೆ

ಹೇಳುವುದೇನಿದೆ? ಏನೂ ಇಲ್ಲ
ಹೇಳುವ ಮನಸೂ ಇಲ್ಲ
"ಕೋಣನ ಮುಂದೆ ಕಿಂದರಿ ಉಾದಿದಹಾಗೆ"
ಹೇಳಿ ಏನೂ ಪ್ರಯೋಜನವಿಲ್ಲ
ಮಾತಿಗೆ ಬೆಲೆ ಇರಬೇಕು
ಕಾಟಾಚಾರದ ಮಾತು
ನೋವುಂಟುಮಾಡುವುದು
ಅವಶ್ಯಕತೆ ಇರುವಾಗ
ಕೇಳಿಸಿಕೊಳ್ಳಲಾರದವರಿಂದ
ಏನ್ನಾದರೂ ನಿರೀಕ್ಷಿಸಬಹುದೇ
ಭ್ರಮೆಯಷ್ಟೇ ,
ನೀರಮೇಲಣ ಗುಳ್ಳೆಯಂತೆ ಶಾಶ್ವತವಲ್ಲ
ನಂಬಿಕೆಬಾರದು
ನಂಬಲು ಅರ್ಹವೂ ಅಲ್ಲ

ಲೋಕಯಾತ್ರೆಯಲಿ ನೀ ಮಿಯ್ದು

ಮಂತ್ರಘೋಷಗಳಿಲ್ಲ
ಛತ್ರ ಚಾಮರಗಳಿಲ್ಲ
ಫಲಪುಷ್ಪಗಳ ನೆೃವೇದ್ಯವಿಲ್ಲ
ಧೂಪ ಮಂಗಳಾರತಿಯಿಲ್ಲ
ರಂಗೋಲಿ ರಕ್ತದೋಕುಳಿ ಚೆಲ್ಲಿ
ಪೂರ್ವದಂಚಿನಲಿ ಮುಂಜಾವಿನ
ರಥೋತ್ಸವ ನಿಶಬ್ದವಾಗಿ ನೆರವೇರುತಿದೆ
ಕಂಡವರ ಕಣ್ಣುತುಂಬುವುದು
ಜೀವನ ಶುಭಯಾತ್ರೆಯ ಪಲ್ಲಕ್ಕಿ
ತೆರೆಳುತಿದೆ ಮೆಲ್ಲಗೆ ಸುಳಿವುಕೊಡದೆ
ಅನುಭವಿಪನೇಬಲ್ಲ ಅಮೃತದ ರುಚಿ
ಮಂದಭಾಗ್ಯರಿಗಿದು ಕಷ್ಟಸಾಧ್ಯ
ಲೋಕಯಾತ್ರೆಯಲಿ ನೀ ಮಿಯ್ದು
ಧನ್ಯತೆ ಪಡೆಯುವೆಯೋ ನೀ ಹೇಳು
ಕಣ್ಮರೆಯಾಗುವ ಮುನ್ನ ಅನುಭವಿಸು

Sunday, December 17, 2017

ಕೇಳಿಸದೆ ಹಕ್ಕಿಗಳಿಂಚರ.?

ಕೇಳಿಸದೆ ಹಕ್ಕಿಗಳಿಂಚರ
ಬೆಳಗಾಯಿತೆಂದುಲಿಯುತಿದೆ:
ಕತ್ತಲೆ ಕಳೆದು ಬೆಳಕನೆ ಚೆಲ್ಲಿ,
ಅವ್ಯಕ್ತಭಾವ ಅನುಭವಿಸೆಂದುಲಿಯುತಿದೆ:

ಮಂಜಿನ ತೆರೆಯೇರುತಿದೆ 
ಹೋಮದ ಹೊಗೆಯಂತೆ:
ಚೆೃತನ್ಯ ಹೊಮ್ಮುತಿದೆ ಬೆಳಗಾಯಿತೆಂದು:
ಹೃದಯದ ಬಾಗಿಲ ತಟ್ಟಿದೆ
ಸಾಕು ನಿದಿರೆಯ ಸಹವಾಸ
ಕಾಯಕದ ಕೆೃಹಿಡಿಯೆಂದು:
ತಿಮಿರವ ದಾಟಿ ಮುನ್ನಡೆಯೆಂದು:
ಅತೀಂದ್ರಿಯ ಶಬ್ದತರಂಗಗಳ ಹೊಮ್ಮಿಸಿ ಎಚ್ಚರಿಸುತಿದೆ :
ಬಂಗಾರದ ಬೆಳಗಾಯಿತೆಂದು:
ಜೀವನವ ಬಂಗಾರಗೊಳಿಸಿಕೋಯೆಂದು:

Friday, December 15, 2017

ಇದೇ ಸು-ಸಮಯ

ಇದೇ ಸು-ಸಮಯ ವ್ಯರ್ಥ ಮಾಡದಿರು
ಚೆೃತನ್ಯವನೇ ತರುತಿರುವವನ ಆರಾದಿಸು
ಅನುದಿನವು ಬಿಡದೇ ಹೊತ್ತು ತರುತಿಹನು
ಚಿನ್ನದ ಕಿರಣಗಳ,ಸಾವಿರ ಸಾವಿರ ಮೆೃಲಿಗಳಾಚೆಯಿಂದ,
ಮನದೊಳಡಗಿ ನಿದಿರೆಯ ಸೆರೆಯಾಗಿರುವ,
ನಿನ್ನೊಳಂತರಂಗದ ನೂರು ಸೂರ್ಯರ ಪ್ರಚೋದಿಸು
ಆರಾದಿಸು,ಅನುಭವಿಸು,ಪ್ರಚೋದಿಸು
ಲೋಕದೊಳು,ಅಂತರಂಗದೊಳು
ಶಾಂತಿಯ ನೆಲೆಸು

Thursday, December 14, 2017

ಬಾ ರವಿ, ಬಾ ಉದಯಿಸು ಬಾ

ಬಾ ರವಿ, ಬಾ ಉದಯಿಸು ಬಾ
ನಿನಗಾಗಿಯೇ ಕಾಯುತಿಹೆನು,
ಧ್ಯಾನಾಸಕ್ತನಾಗಿ ಆಹ್ವಾನಿಸುವೆ
ಬಾ ಮನಸಿಗೆ,ಬಾ ಹೃದಯಕೆ

ದಿನವೂ ಮನವ ತೊಳೆಯುತಿಹೆನು
ಧ್ಯಾನದಿಂದಲಿ ಜನ್ಮಗಳ ಪಾಪಕೊಳೆ,
ಕರಗದು ಇಂದು ಅಂಟಿದೆ ಬಲವಾಗಿ
ನಿನ್ನ ಕರುಣೆಯಿರೆ ಅಸಾಧ್ಯವದಾವುದು

ಮನಕೆ ತಾಳ್ಮೆಯ  ನೀಡು
ಸತತ ಪ್ರಯತ್ನದ ಕಡೆ ಗಮನವೀಯುವಂತೆ ಮಾಡು
ಸೋಲೋ,ಗೆಲುವೋ ಸದಾ ಕಾಯಕದಲ್ಲಿಡು
ಮರತೆಯೆನ್ನದಿರು ಆಸರೆ ನೀಡು

ಹೇಳದೆ ಏಕೆ ಬರುವೆ?

ಹೇಳದೆ ಏಕೆ ಬರುವೆ?
ಬಾ ಎಂದು ಆಹ್ವಾನಿಸಿಲ್ಲ
ಕಾಡಿಸಿ ಬರುವೆ , ಮನವ ಕೆಡಿಸಿಹೋಗುವೆಯೇಕೆ?

ಅದೇ ರಾಗ,ಅದೇ ಹಾಡು
ಕೇಳಲಾರೆ  ನಿನ್ನ ಮಾತು
ಮನವು ಮುರಿದ ಕನ್ನಡಿ
ನೋಡಲಾರೆ ನನ್ನದೇ ಮುಖವಾಡ

ನೆನಪೇ ಏಕೆ ಕಾಡುವೆ?
ಅಂಡಲೆದು ಸಾಕಾಗಿ ತಣಿದಿರುವೆ
ಮತ್ತೆ ನೆನಪಾಗಿ ಕಾಡಬೇಡ
ನೆಮ್ಮದಿಯ ಬಯಸಿ ಕಾದಿರುವೆ

ಎಲ್ಲವನೂ ಮರೆತು ಹಾಯಾಗಿ
ಬದುಕ ಬಯಸಿ ಬಂದವನು
ಕಳೆದುಹೋದುದೆಲ್ಲಾ ಮತ್ತೆ ನೆನಪಾಗಿ
ಮನದ ಮೇಲೆ ದಾಳಿಮಾಡಿ ಹಗೆ ತೀರಿಸಿಕೊಳ್ಳುತ್ತಿಹರೇನು?

ನನ್ನ ತಪ್ಪೇನು?

ನನ್ನ ತಪ್ಪೇನು?
ನಾನೇಕೆ ಬಲಿಯಾದೆ?
ನಾನೊಂದು ಸಣ್ಣ ಗಿಡವಾಗಿದ್ದಾಗ
ಎಲ್ಲಿಂದಲೋ ತಂದು ಜಾಗ ಕೊಟ್ಟವರು
ಬೆಳೆ ಆಗಸದೆತ್ತರಕೆ ಎಂದವರು,
ಕರುಣೆಯ ನೀರುಣಿಸಿ ಪೋಷಿಸಿದ
ಕರುಣಾಳು ನೀವೇ ಅಲ್ಲವೇ!

ನಿಮ್ಮ ಮುಂದೆ ಬೆಳೆದು ನಿಂತು
ಹೂವ ಸುರಿಸಿದೆ ಬರುವ ಹಾದಿಯಲ್ಲಿ:
ಉಸಿರಿಗೆ ಉಸಿರಾಗಿ ಪ್ರಾಣವಾಯುವನಿತ್ತೆ,
ಬೆವರಿ ಬಂದವರಿಗೆ ನೆರಳ ಕೊಟ್ಟೆ:
ಬಿಸಿಲ ಬೇಗುದಿಗೆ ಬೆಂದಾಗ ಮೋಡಗಳ
ತಡೆದು ಮಳೆಯ ಹನಿಸಿದೆ:
ಗಾಳಿ-ಶಬ್ದ ಮಾಲಿನ್ಯವನುಂಡು ಸಂರಕ್ಷಿಸಿದೆ:

ನನ್ನ ಉದ್ದೇಶಕ್ಕಾಗಿ ನೆಲೆ ನಿಂತಿದ್ದೆ:
ಸೋಮಾರಿಯಾಗಿರಲಿಲ್ಲ:
ಅನಾರೋಗ್ಯವಂತೂ ಕಾಡಿರಲಿಲ್ಲ:
ವಯಸ್ಸಿನ್ನೂ ಹದಿನಾರು
ಆದರೂ ನನ್ನ ಮೇಲೆ ಈ ಧಾಳಿ ಸರಿಯೇ?
ನನ್ನ ತಪ್ಪೇನು?
ನಾನೇಕೆ ಬಲಿಯಾದೆ?

Wednesday, December 13, 2017

ಸೊಬಗ ಸವಿ

ಕಣ್ಣ ತೆರೆಯುತಿದೆ
ಪುಟ್ಟ ಮಗುವಿನ ತೆರದಿ
ಮಂದಹಾಸವ ಬೀರುತಾ
ಮತ್ತೆ ಬಂದಿಹೆನೆನ್ನುತ್ತಾ ಕೆೃಬೀಸಿದೆ
ಮಂಜು,ನೀರವತೆ,ಸೋಮಾರಿತನ
ಗಂಟು ಮೂಟೆ ಕಟ್ಟಿವೆ 
ಮೂಡಣವು ಕೆಂಪು ಸೂಸುತಿರೆ
ಬಿಟ್ಟುಹೋಗುವಾಗಿನ ತೀವ್ರಭಾವ
ಹೊದ್ದು ಮಲಗಲು ಪ್ರೇರೇಪಿಸಿದೆ
ಮುಗ್ದಮಗುವಿನ ಮಂದಹಾಸ
ಮುಂಜಾನೆಯ ಪ್ರಕೃತಿಲೀಲೆಯ
ಸೊಬಗ ಸವಿಯಲು ಸ್ವಾಗತಿಸಿದೆ

Tuesday, December 12, 2017

ಸೊಬಗ ತುಂಬಿಕೊಳ್ಳೋಕಣ್ಣಾ:

ಮಂಜಿನ ತೆರೆ ಸರಿಯುತ್ತಿದೆ
ದೂರ ದೂರದಿಂದ ಹರಿದು ಬರುತ್ತಿದೆ 
ಬೆಳಕೆಂಬ ಅದ್ಭುತ:
ಬೆಳಕೆಂಬ ಬೆಡಗು:
ಇಳೆಯು ಆ ಬೆಡಗಿಗೆ ಮೋಹಗೊಂಡಿದೆ
ಮಂಜಿನ ಹೊದಿಕೆ ಮಾಯವಾಗಿ
ಹಸಿರ ಸೊಬಗು ಅನಾವರಣಗೊಂಡಿದೆ
ಹಕ್ಕಿಗಳೆಲ್ಲಾ ಮೋಡಿಗೊಳಗಾಗಿ ಕಲರವ ಮಾಡಿವೆ
ಇದು ಬರಿ ಬೆಳಗಲ್ಲೋ ಅಣ್ಣ
ಸೃಷ್ಟಿಯ ಸೊಬಗ ತುಂಬಿಕೊಳ್ಳೋಕಣ್ಣಾ:

ಅಂಧಕಾರವೇಕಿದೆ?

ಲೋಕದ ಕಣ್ಣು ತೆರೆಯುತಿದೆ
ಮೆೃಮನಗಳು ಅರಳುತಿದೆ
ಸೃಷ್ಟಿಯ ಸೊಬಗಿಗೆ ಏನೆನ್ನಲಿ?
ಅದ್ಭುತವೆನ್ನಲೋ?ಚಮತ್ಕಾರವೆನ್ನಲೋ?
ಜಗವ ಬೆಳಗಲು ನೀನಿರಲು
ಈ ಜಗದಲ್ಲಿನ್ನೂ ಅಂಧಕಾರವೇಕಿದೆ?
ವಿಚಿತ್ರ ಆದರೂ ನಿಗೂಢ
ದ್ವೇಷ,ಮತ್ಸರ,ಸ್ವಾರ್ಥಗಳು ನಲಿದಿವೆ
ಒಳಗಣ್ಣಿಗೆ ಭ್ರಮೆಯಾವರಿಸಿದೆ
ಕಂಡದ್ದೇ ಸತ್ಯ,ವಿವೇಚನಾರಹಿತ
ಬತ್ತಿಯಿಡಲನೇಕರು ಸರದಿಯಲ್ಲಿದ್ದಾರೆ
ಒಳಗಣ್ಣಿದೆಯೆಂಬುದೇ ಮರೆತಿದೆ
ಒಳಗಣ್ಣ ತೆರೆಯಲದಾವ 
ಸೂರ್ಯನುದಯಿಸಬೇಕೋ?

Saturday, December 9, 2017

ಸೂರ್ಯನುದಿಪುದ ನೋಡಲ್ಲಿ

ಸೂರ್ಯನುದಿಪುದ ನೋಡಲ್ಲಿ
ಕಣ್ಮುಚ್ಚಿ ಅಂತರಂಗದೊಳಗಿಳಿ
ಮನದ ಕಶ್ಮಲವನೆಲ್ಲಾ ತೊಳಿ
ನಿಯತಿಯಿಂದಲಿ ಕಾಯಕಕ್ಕಿಳಿ

ಅರಿವು ಮೂಡಿಸುವ  ಬೆಳಕದು
ಜಡತ್ವವ ಓಡಿಸುವ ಚೃೆತನ್ಯವದು
ಆಂತರ್ಯದೊಳು ನೆಲೆಗೊಳಿಸು
ಲೋಕದ ಜಂಜಡಗಳಿಂದ ಮುಕ್ತಿಗೊಳಿಸು

Friday, December 8, 2017

ಹಗಲುವೇಷ

ಎನ್ನ ಮನದ ದುಗುಡವ ನಿನಗೆ ಹೇಳಲೇ
ಏಕೆ ಹೀಗೆಲ್ಲಾ ಆಗುತಿದೆ ನಾನರಿಯೆ?
ಮನವು ಹೀಗೆಳೆಯುತಿದೆ ನನ್ನದಲ್ಲದ ತಪ್ಪಿಗೆ:

ಎಲ್ಲರೂ ನಗುವವರೆ ಒಳಗೊಳಗೆ
ಮುಖವು ಹರಳೆಣ್ಣೆ ಕುಡಿದವರ ಹಾಗೆ
ನನಗೆ ನನ್ನದೇ ಚಿಂತೆ ನನ್ನದೇನು ತಪ್ಪೆಂದು?:

ರಾಜಕೀಯ, ಮಸಲತ್ತು
ನೋವಾಗುವುದು ಮನಸ್ಸಿಗೆ
ಈ ನಾಟಕ,ಮುಖವಾಡ  ತಿಳಿದೂ
ಜೊತೆಜೊತೆಯಾಗೆ ನಡೆಯಬೇಕಿದೆ:

ಇಂದೋ,ನಾಳೆಯೋ
ಬೇಗನೆ ಮುಗಿಯಲಿ ಇವರ ನಾಟಕ
ಮೊದಲಿನಂತಾಗಲಿ ಅವರ ನಡುವಳಿಕೆ
ನಾನು ಅವರಿಗೆ ತೊಡರುಗಲ್ಲಲ್ಲ:

ನಿರ್ಮಲಚಿತ್ತ ನನ್ನದು,
ಹರಿವ ನದಿಯ ತೊರೆಯು ನಾನು
ನಾ ನಿಲ್ಲಲಾರೆ, 
ಗುರಿಯ ಹಾದಿಯ ಬಿಡಲಾರೆ:

ಗೆಲ್ಲಲೇಬೇಕು ಒಳ್ಳೆತನ

ಗೊತ್ತಾಗಬಾರದೆಂದು ಎಷ್ಟೇ 
ಮುಚ್ಚಿಟ್ಟರೂ ಅರ್ಥವಾಗುವುದೆನಗೆ
ಬದಲಾಗುವ ನಡುವಳಿಕೆಗಳು,
ಮಾತುಗಳು,ನಗುವಿಗಿಂತ ಬೇರೆ ಸಾಕ್ಷಿ ಬೇಕೆ?

ಒಳಗೊಳಗೆ ನಡೆಸುವ ಮಸಲತ್ತು
ಕಡೆಗಣಿಸುವ ಪರಿ ಅರಿಯಲಾರದ
ವಯಸ್ಸು ನನ್ನದಲ್ಲ:
ನಗೆಯು ಬರುವುದು ಇವರಾಡುವ ನಾಟಕಗಳಿಗೆ

ಎಷ್ಟುದಿನ ಈ ನಾಟಕ?
ಕೊನೆಯೆಂಬುದಿದೆ
ನಾನಾದರೋ ನಿರ್ಲಿಪ್ತ
ಇಂದಲ್ಲ ನಾಳೆ ಗೆಲ್ಲಲೇಬೇಕು ಒಳ್ಳೆತನ

Thursday, December 7, 2017

ಇದೆಂಥ ಬೆಳಗು ನೋಡು

ಇದೆಂಥ ಬೆಳಗು ನೋಡು

ಮಂಜಿನ ತೆರೆ ಮೇಲೇಳುತಿರೆ
ಮೆೃ-ಮನ ನವಿರೇಳುವುದು
ಪೂರ್ವದ ದಿಗಂತದ ಸೂರ್ಯೋದಯ
ರಕ್ತವರ್ಣ ಮನದಿ ಚೆೃತನ್ಯವ ಬಿತ್ತಿಹುದು

ಹೊಸ ಹೊಸ ಆಸೆಯ ಬಿತ್ತಿ
ತೆರೆಯ ಮರೆಯಲ್ಲಿ ಅವಿತಿಹ
ಉದಯ ರವಿ ಏನು ಅರಿಯದ
ಬಾಲಕನಂತೆ ಆಟವನ್ನಾಡುತಿಹನು

ಸೋಲಿನ ಭಾವದಲೇ  ಒದ್ದಾಡುವ ನಮಗೆ
ಸೂರ್ಯೋದಯ ಪ್ರತಿ ದಿನದ ಗೋಳಿನ  ವ್ಯಥೆ
ಏನಾದರೂ ಸಾಧಿಸೋ ಅವಕಾಶದ ಹೆದ್ದಾರಿಯಾಗಿರದೆ
ಕಾಲ ಕಳೆದು ನೋವ ಮೆಲುಕು ಹಾಕುವ ಇಳಿ ಸಂಜೆಯಾಗಿದೆ

ಒಂದಕ್ಕೂಂದು ತಾಳೆಯಾಗದ
ಬೇಡದ ಸಮಸ್ಯೆಗಳನ್ನೇ ಉಸಿರಾಗಿಸಿ
ಎಲ್ಲೋ ಏನನ್ನೋ ಹುಡುಕುತಾ
ನಮ್ಮ ನಾವೇ ಹಳಿಯುವ ಸಂತೆಯಾಗಿದೆ

ಇದೆಂಥ ಬೆಳಗು ನೋಡು
"ಸುಪ್ರಭಾತ" ಮನವ ಮುದಗೊಳಿಪ ಹಾಡು
"ಸ್ವರ್ಗ" ಅನುಭವಿಪಗೇ ಗೊತ್ತು
ಸಾವಿರ ಸಂದೇಶಗಳ  ಅರಿವ ಹೊತ್ತು

Wednesday, December 6, 2017

ಕಣ್ಣೀರೆ,ಓ ಕಣ್ಣೀರೆ

ಕಣ್ಣೀರೆ,ಓ ಕಣ್ಣೀರೆ ನೀ ಬಾರದಿರು
ಬಂದು ನೀ ಸಮಯ ಹಾಳುಮಾಡದಿರು
ನೋವಿಲ್ಲಿ ಸಹಜ, ಮರುಗದಿರು
ನೋವ ಕೊಡುವವರಿಲ್ಲಿ ಬಹಳ
ಕೊರಗದಿರು

ಕನಸೇ,ಓ ಕನಸೇ ಎಲ್ಲಿ ಹೋದೆ ನೀ
ಬಾ ಈ ಮನಕ್ಕೆ,ಮುದಗೊಳಿಸು ಬಾ
ನಿನಗಾಗಿ ಕಾಯುತ್ತಲೇ ರಾತ್ರಿ ಕಳೆದೆ
ನೀ ಬರುವ ದಾರಿ ಕಾಯುತ್ತಲೇ ಇರುವೆ

ಮನಸೇ,ಓ ಮನಸೇ ಎಲ್ಲಿರುವೆ
ದುಗುಡದಿ ನೊಂದು ಅವಿತಿರುವೆಯಾ
ನೋವು ಹಂಚುವವರೇ ಇಲ್ಲಿ ಹೆಚ್ಚು
ನಲುಗದಿರು ಪುಟಿದೇಳು ಆಗಸಕೆ

ಗೆಲುವೇ,ಓ ಗೆಲುವೇ ನೀ ಬಾರದಿರು
ಬಂದು ನೀ ಸಮಯ ಹಾಳುಮಾಡದಿರು
ನೀ ಬಂದು ನಿಂತಾಗ ತಲೆಯೇ ನಿಲ್ಲದು
ನಿನ್ನ ಅಮಲು ಹೆಚ್ಚಾಗಿ ಗುರಿಯ ದಾರಿ ತಪ್ಪುವುದು

Tuesday, December 5, 2017

ನಾನು ನಾನಾಗಿಯೇ..

ನಾನು ನಾನಾಗಿಯೇ ಇದ್ದೇನೆ
ಬದಲಾವಣೆಗೆ ಮನವ ತೆರೆದು:
ಹಾರಲಾಗದಿದ್ದರೂ
ಪುಟ್ಟ-ಪುಟ್ಟ ಹೆಜ್ಜೆಗಳನಂತೂ
ಇಡುತ್ತಿದ್ದೇನೆ ಬೇಸರಿಸದೆ:
ಮನದ ಕೊಳೆಯ ಜಾಡಿಸಿ
ತುಕ್ಕುಹಿಡಿಯದ ಹಾಗೆ ನೋಡಿಕೊಳ್ಳುತ್ತಿದ್ದೇನೆ:
ಹಲವು ಏರಿಳಿತಗಳಿದ್ದರೂ
ಸಮಸ್ಯೆಗಳೆದುರಿಸಲು ಸಿದ್ದವಾಗಿದ್ದೇನೆ:
ತನು-ಮನಗಳವನಿಗೆ ಅರ್ಪಿಸಿ
ಗುರಿಯ ಕಡೆಗೆ ಹೊರಳುತ್ತಿದ್ದೇನೆ:

ಗಹಗಹಸಿ ನಗುತಿದೆ

ಇದು ಹೊಸತಲ್ಲವೆನಗೆ
ಹೃದಯ ಮರುಗುವುದು
ಇವರ ಮನಸ್ಥಿತಿಯ ಕಂಡು
ಬಯಸುವುದಿಲ್ಲ ಪರರ ಏಳಿಗೆ
"ಸರಿ" ಕಾಣದಿವರ ಕಣ್ಣಿಗೆ
"ತಪ್ಪೇ" ಕಾಣುವುದೆಲ್ಲೆಡೆ
ಪರರ ಮಾತುಗಳಿಗೆ ಕಿವುಡಿವರ ಕಿವಿ
ಬಾಯಿಮುಚ್ಚಿ ಮೖೆಯೆಲ್ಲಾ ಕಿವಿಯಾಗಬೇಕಿವರ ಮಾತಿಗೆ
ಸವಿಯಾದ ಮಾತಿಲ್ಲ,
ಮೊನಚು ಮಾತಿನ ಚುಚ್ಚು ನುಡಿ
ಕುಟುಕುವುದಿವರ ಕಾಯಕ
ತಾವು ಮೇಲು, ನಾವು ಕೀಳು
ಬೇರೆಲ್ಲರಿವರ ಸೇವಕರು
ಕಾಲಲ್ಲಿ ತೋರುವುದ ಶಿರಸ್ತ್ರಾಣವಾಗಿಸಬೇಕು 
ಇವರಾಜ್ಞೆಗೆ ಕಾಯುವುದು
ಸದಾ" ಜಿ ಹುಜೂರ್" ಎನ್ನಬೇಕು
ಇವರ ಸಿಟ್ಟಿಗೆ ಬಲಿಯಾಗಬೇಕು
ಇವರ ಅಸಡ್ಡೆಗೆ,
ಕಾಲ ಕಸವಾಗಬೇಕು
ದೌರ್ಜನ್ಯವೇ ಉಸಿರು
ಅಂಧಕಾರ ಇವರಲ್ಲಿ ಸದಾ ಹಸಿರು
ತಿಮಿರವನೇ ನುಂಗಿಹರು
ಪರರಿಗೆ ಕತ್ತಲೇ ಆಗಿಹರು
ನೋವೆನಗೆ ಇವರ ಕಂಡು
ಕಸವಾಗುತಿಹರು ಕಾಲವುರುಳುತಿರಲು
ಕಾಲಚಕ್ರ ಉರುಳುತಿಹುದು
ಬೆಳಗು,ಸಂಜೆ,ರಾತ್ರಿ ಬದಲಾಗುತಿದೆ
ಬದಲಾಗದಿವರ ಅಜ್ಞಾನಕೆ
ಗಹಗಹಸಿ ನಗುತಿದೆ ಇವರ ಕಂಡು

ಮನವು ಕೊರಗಿದೆ

ಮನವು ಕೊರಗಿದೆ
ಒಳ ಭಾವಗಳ ತೊಳಲಾಟಕೆ
ಆರ್ತನಾದ ನಿಲ್ಲದಾಗಿದೆ
ಒಳತೋಟಿಗಳ  ಸಂಚಿಗೆ
ನೋವು ಹೆಚ್ಚಾಗಿದೆ
ನಿಲ್ಲದ ಪ್ರಹಾರಗಳಿಗೆ
ದಿಕ್ಕುಗೆಟ್ಟು ಓಡುತಿದೆ
ತಲ್ಲಣ ಸುನಾಮಿಯಂತಾಗಿದೆ
ನಿನ್ನ ಆಟ ಬಲವಾಗಿದೆ
"ನಾನು" ಎಂಬಾಟ ಸವಕಲಾಗಿದೆ
ಅರಿವಿನ ಬೆಳಕು ತೆರೆಕಂಡಿದೆ
"ನಾನು" ಎಂಬ ಭಾವ ಶರಣಾಗಿದೆ

ಹಾರಾಟ

ಮುೂಡಣದ ಅಂಚಿನಲ್ಲಿ
ಮುೂಡುತಿದೆ ಚಿನ್ನದುಂಗುರ
ಆಗಸವೆಲ್ಲಾ ರಕ್ತವರ್ಣ
ಮನದ ತಿಮಿರವ ಗೖೆದ
ಗುರುತಿಗೆ ರಕ್ತಧೋಕುಳಿ
ದಿನಂಪ್ರತಿ ನಡೆಯಬೇಕು
ಈ ಕದನ ,ಹೋರಾಟ
ರವಿಯ ಕಿರಣಗಳು
ಹೊತ್ತು ತಂದಿವೆ ನೂರು ಸಂದೇಶ
ಅರಿಯದಾಗಿದೆ
ಅಜ್ಞಾನದ ಕತ್ತಲಲ್ಲಿ ಮುಳುಗಿದೆ
ಅರಿವಿಗಾಗಿ ಈ ಹೋರಾಟ
ಉಳಿವಿಗಾಗಿ ಈ ಹೋರಾಟ
ಉಸಿರಿರುವವರೆಗೆ ಈ ಹೋರಾಟ
ಉಸಿರುನಿಂತ ಮೇಲೆ ಮಣ್ಣಾಗುವುದೀ ಹಾರಾಟ

Friday, December 1, 2017

ಪ್ರಾಮಾಣಿಕ ಪ್ರಯತ್ನ

ಓ ಮನವೇ ವ್ಯಥೆಯ ಪಡದಿರು
ಇಂದು ಸಿಗದಿದ್ದರೇನಂತೆ
ಇಂದೇ ಕೊನೆಯಲ್ಲ
ನಾಳೆ ನಿನ್ನದೇ, 
ಕೊರಗದಿರು,ಮರುಗದಿರು
 ಅಗಾಧ ಶಕ್ತಿಯ ಕೊರಗಿ
ವ್ಯಯಿಸದಿರು
ಇದೊಂದು ಸತ್ವ ಪರೀಕ್ಷೆಯಷ್ಟೇ
ಕೊರಗಿ ಸೋಲದಿರು
ಏನು ಆಗಿಲ್ಲವೆಂದು ತಾಳ್ಮೆಯಿಂದಿರು
ತಾಳುವಿಕೆಗಿಂತ ತಪವು ಇಲ್ಲ
ತಿಳಿದವರ ನುಡಿಯ ಕೇಳು
ಮುಂದೆ ಗೆಲುವು ನಿನ್ನದೇ
ಪ್ರಯತ್ನ ನಿನ್ನದಾಗಿರಲಿ
ಫಲಾಫಲಗಳ ಅಪೇಕ್ಷೆ ಬೇಡ 
ಲವಲೇಶವೂ ಲೋಪವಿರದ 
ಪ್ರಾಮಾಣಿಕ ಪ್ರಯತ್ನ ಮಾತ್ರ ನಿನ್ನದಾಗಲಿ

ತುಂತುರು ಮಳೆ

ತುಂತುರು ಮಳೆ 
ಝುಳು ಝುಳು ಹರಿವ ನೀರ ಮಂಜುಳ ಗಾನ
ಮುದಗೊಂಡು ತೇಲುವ ಮನ
ನೀರವ ಬೆಳಗು
ಚುಮು ಚುಮು ಕೊರವ ಚಳಿ
ಹಸಿರು ಹೊದ್ದು ಮಲಗಿಹ ಇಳೆ
ಸುಯ್ ಗುಟ್ಟುವ ಗಾಳಿ
ಹಕ್ಕಿಗಳ ಕಲರವದ ಸುಪ್ರಭಾತ
ಆಗಸದಂಚಲ್ಲಿ ಚಿನ್ನದ ಕಿರಣಗಳು
ಹೃದಯಲ್ಲಿ ಗುರಿಯ ಮುಟ್ಟುವ ಆಸೆ
ದಿನದ ಅವಕಾಶಗಳ ಹೆದ್ದಾರಿಯ ತೆರೆಯುವ ಓ ದಿನಕರ ನಿನಗೆ ನಮನ

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...