Saturday, September 4, 2010

ಬಾಯಾರಿದೆ!

ರವಿ ಜಾರಿದ ಕೆಲಸವಾಯ್ತೆಂದು
ಲೋಕರೂಡಿ ಹಕ್ಕಿಗಳು ಗೂಡು ಸೇರಿದವು
ಕತ್ತಲಾವರಿಸಿ,ನೀರವತೆ ಪಸರಿಸಿ
ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ.....
ಹೊನ್ನ ಚಂದ್ರಿಕೆಗೆ ಈಗ ಬೆಳಕಾಯಿತು
ಹಾಲಿ ಚೆಲ್ಲಿ ತಾರಾಲೋಕದಲ್ಲಿ ಒಂದು ಪಯಣ
ಕಾಮದ ರಥವನೇರಿ ಹೊರಡುವನು
ರತಿಯ ಸೊಕ್ಕಡಗಿಸಲು
ಸ್ಪರ್ಶ, ಪಿಸುಮಾತು, ಬಾಹುಬಂದನ, ಚುಂಬನ, ಮರ್ಧನ, ಸಿಹಿಮುತ್ತು, ಬಿಸಿಯುಸಿರು....ಕಾಲ ಕಳೆಯಿತು
ಕಾಮದ ಹುಟ್ಟಡಗಿಸಿ ದಣಿವಾಯಿತು ದೇಹಕ್ಕೆ
ಕ್ಷಣಮಾತ್ರದಲ್ಲಿ ನಿದ್ದೆಗೆ ಪರವಶ
ಚಂದ್ರಿಕೆಯ ಪಯಣ ಮುಗಿದಿಲ್ಲ
ವಿರಹಿಗಳ ವಿಹ್ವಲ ಪ್ರೇಮಜ್ವರ
ಮಗ್ಗುಲು ಮಲಗಿದರೂ ಹತ್ತದ ನಿದ್ದೆ
ಕೊನೆಗೆ ಶಪಿಸಬೇಕು
" ಏಕೆ ಬರುವೆ ಚಂದ್ರಿಕೆ?
ಸುಡಬೇಡ ತೊಲಗು ಸಾಕಾಗಿದೆ ವಿರಹ,
ಇಲ್ಲಾ ಹೆಣ್ಣಾಗಿ ಬಾ ಮಧುಮಂಚಕ್ಕೆ
ಜೊನ್ನ ಜೇನಿಗೆ ಬಾಯಾರಿದೆ ತಣಿಸು ಬಾ"

1 comment:

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...