Sunday, September 19, 2010

ಚುನಾವಣೆ

ಚುನಾವಣೆ ಬಂತು
ಚಿತಾವಣೆ ಬಂದೇ ಬಂತು
ಹೆಂಡ,ಹಣದ ಹೊಳೆ ಹರಿಯಲು ಶುರುವಾಯಿತು
ಆಕಾಶದಲ್ಲಿ ಕರಿ ಮೋಡಗಳಿಲ್ಲ
ಮಳೆಬರುವ ಲಕ್ಷಣಗಳಿಲ್ಲ
ಮೋಹದ ಬಲೆ ಎಲ್ಲೆಲ್ಲೂ ಹರಡಿದೆ
ಕೈಕಟ್ಟಿ ಕುಳಿತರೆ ಮತ್ತೈದು ವರ್ಷಕಾಯಬೇಕಿದೆ


ರಾಜಕಾರಣೀಗಳು ಸಿದ್ದರಾಗಿದ್ದಾರೆ ಹಣ,ಹೆಂಡ ಹಂಚಲು
ಮತ್ತೊಮ್ಮೆ ಜನ ಸಿದ್ದರಾಗಿದ್ದಾರೆ ಪಂಗನಾಮ ಹಾಕಿಸಿಕೊಳ್ಳಲು
ಮಾತಿಗೆ ತಲೆದೂಗುತ್ತಾರೆ
ಹೆಂಡಕ್ಕೆ ಮೈಮರೆಯುತ್ತಾರೆ
ಮತದ ಹಕ್ಕನ್ನು ಮಾರಾಟ ಮಾಡಿಕೊಳ್ಳುತ್ತಾರೆ
ನಶೆ ಇಳಿದಮೇಲೆ ಕೈ ಕೈ ಹಿಸುಕಿಕೊಳ್ಳುತ್ತಾರೆ
ಮತದಾರ ಪ್ರಭು ಮತ್ತೆ ಮತ್ತೆ ಮೋಸಹೋಗುತ್ತಾನೆ


ಉಪಯೋಗವಿಲ್ಲದ ಪಕ್ಷವೆಂದು
ಅಭ್ಯರ್ಥಿಗಳೆಲ್ಲಾ ಅಯೋಗ್ಯರೆಂದು
ಜನರ ಒಳಿತು ಯಾವ ಪಕ್ಷಕ್ಕೂ ಬೇಡವೆಂದು
ಅರಚುತ್ತಾ, ಕೆಸರೆರಚುತ್ತಾ ನೊಂದುಕೊಳ್ಳುತ್ತಾನೆ ಪ್ರಜೆ
ಕದ್ದು ಮುಚ್ಚಿ ಹಂಚುವ ಪಕ್ಷಗಳು
ಎಲ್ಲವೂ ಸಭ್ಯ ಪಕ್ಷಗಳೇ!
೧೨೫ ವರ್ಷದ ಪಕ್ಷ,ಕೋಮುವಾದಿ, ಜಾತ್ಯಾತೀತ ಪಕ್ಷ
ಹರುಕು ಮುರುಕು ಪಕ್ಷಗಳಿಗೆ ಗೊತ್ತಿದೆ ಜನರನ್ನು ಹೇಗೆ
ಕೊಂಡುಕೊಳ್ಳುವುದೆಂದು

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...