ಹೊರಟು ನಿಂತೆ ಬರುವೆನೆಂದು
ಅವಳ ಕಣ್ಣಲ್ಲಿ ಕಂಬನಿ
ಮಾತು ಕ್ಷೀಣಿಸಿತ್ತು
ಮೌನ ಆವರಿಸಿತ್ತು
ಕೈ ಹಿಡಿದೆ
ತಲೆಯ ಸವರಿದೆ
ಒಂದು ಕ್ಷಣ ಕಣ್ಣು-ಕಣ್ಣು ಸೇರಿತು
"ಅಳ ಬಾರದು ಹುಚ್ಚು ಹುಡುಗಿ" ಎಂದಿತು ಹೃದಯ
ಮುಂದಿನ ವಾರ ಬರುವೆನೆಂದಿತು ಮನಸ್ಸು
ಕಣ್ಣಲ್ಲಿ ಕಂಬನಿ ಮರೆಯಾದರೂ
ಮಾತು ಹೊರಡದೆ
ಮೊಕ ಭಾಷೆ ಕೈ ಮೇಲಾಯಿತು
ಬಸ್ಸಿನಲ್ಲಿ ಕುಳಿತರೂ ಅವಳದೇ ಯೋಚನೆ
ಮೌನವಾದ ಹೃದಯ ಯಾಚನೆ
ಮನದಲೇನೋ ಕಾಣದ ಯಾತನೆ\\
Saturday, September 4, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment