Saturday, September 4, 2010

ವಿರಹ

ಹೊರಟು ನಿಂತೆ ಬರುವೆನೆಂದು
ಅವಳ ಕಣ್ಣಲ್ಲಿ ಕಂಬನಿ
ಮಾತು ಕ್ಷೀಣಿಸಿತ್ತು
ಮೌನ ಆವರಿಸಿತ್ತು
ಕೈ ಹಿಡಿದೆ
ತಲೆಯ ಸವರಿದೆ
ಒಂದು ಕ್ಷಣ ಕಣ್ಣು-ಕಣ್ಣು ಸೇರಿತು
"ಅಳ ಬಾರದು ಹುಚ್ಚು ಹುಡುಗಿ" ಎಂದಿತು ಹೃದಯ
ಮುಂದಿನ ವಾರ ಬರುವೆನೆಂದಿತು ಮನಸ್ಸು
ಕಣ್ಣಲ್ಲಿ ಕಂಬನಿ ಮರೆಯಾದರೂ
ಮಾತು ಹೊರಡದೆ
ಮೊಕ ಭಾಷೆ ಕೈ ಮೇಲಾಯಿತು
ಬಸ್ಸಿನಲ್ಲಿ ಕುಳಿತರೂ ಅವಳದೇ ಯೋಚನೆ
ಮೌನವಾದ ಹೃದಯ ಯಾಚನೆ
ಮನದಲೇನೋ ಕಾಣದ ಯಾತನೆ\\

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...