ನೆಮ್ಮದಿ ಕೊಡದ ಆಸ್ತಿ ಏಕೆ?
ಎಂದಾದರೂ ಪ್ರಶ್ನಿಸಿಕೊಂಡಿದ್ದೀರ?
ಕೈಗೆಟುಕುವಷ್ಟೇ ನಿಮಗೆ ದಕ್ಕುವುದು
ಅತಿಯಾದದ್ದು ಕಸವೇ ಅಲ್ಲವೇ?
ನೂರು-ಸಾವಿರ ಜನರ ದಂಡು ಹೋಗುತಿದೆ
ಹಣದ ದಾರಿಯಲ್ಲಿ ಹಣದ ಹಿಂದೆ
ಹಣವೆಂಬ ಮೋಹಿನಿ ವೈಯ್ಯಾರದಿ ಬಳುಕುತ್ತಾ ಸಾಗಿದೆ
ಎಲ್ಲರನ್ನೂ ಮರುಳುಗೊಳಿಸಿ
ಮಾತಿಲ್ಲ, ಕತೆಯಿಲ್ಲ ಹಣವಿದ್ದರೆ ಹತ್ತಿರ
ನಿಮ್ಮ ನೀವು ಮರೆತು ದುಡಿದು ಕೂಡಿಡುವಿರಿ ಹಣ
ಚಂಚಲೆ ಹಣ ಇವತ್ತು ನಿಮ್ಮ ಹತ್ತಿರ ನಾಳೆ ಯಾರೋ!
ಗೊತ್ತಿದೆ ಜನಕ್ಕೆ ಹಣ ಇರುವುದಿಲ್ಲ ಹತ್ತಿರ ಆದರೂ ಬೇಕು
ಕೈಕೊಟ್ಟ ಪ್ರೇಯಸಿಯಂತೆ ಹಣ
ಕೈ ಜಾರಿ ಹೋದಾಗ ಆಗುವುದು ಚಿಂತೆ
ಮತ್ತೆ ಹುಡುಕಾಟ ಹಣವ ಪಡೆಯಲು
ಈ ಲೋಕಕ್ಕೆ ಹಣದ ಹುಚ್ಚು ಹಿಡಿದಿದೆ
ಏನೂ ಬೇಡ ಹಣವನ್ನು ಪಡೆದರಷ್ಟೇ ಸಾಕು
ಹಣ ಹಣವೆಂದು ಬಡಿದಾಡಿ ಸಾಯುವರು ಏಕೋ?
ಹಣದ ವ್ಯಾಮೋಹ ಯಾರನೂ ಬಿಟ್ಟಿಲ್ಲ
ಹಣ ಹಣವೆಂದು ಹೆಣವಾಗುವರೆಗೂ ಬಿಡರು
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment