ಏಕೆ ನಿಂತೆ ನಾನು?
ಯಾವ ಪ್ರೀತಿಯ ಹೊಂಗನಸ ಬಯಸಿದೆ ನಾನು?
ಕಣ್ಣು ತವಕಿಸುತ್ತಿದೆ
ಹೃದಯ ತಲ್ಲಣಗೊಂಡಿದೆ
ಈ ಹೃದಯದ ಲಹರಿಗೆ ಸ್ಪಂದಿಸುವ
ಹೆಣ್ಣು ಹೃದಯಕ್ಕೆ ಕಾಯುತಿಹೆನು\\
ಕೆಂಪು ಗುಲಾಬಿ ಕೈಯಲ್ಲಿ
ನಡೆಯದ ದಾರಿ ಯಾವುದೂ ಇಲ್ಲ ಇಲ್ಲಿ
ಕಂಡ ಕಂಡ ದೇವರಿಗೆ ಕಟ್ಟು ಬಿದ್ದು
ಮುಡಿಪು ಕಟ್ಟಿಟ್ಟು ಸಾಕಾಗಿದೆ ಜಿದ್ದಿಗೆ ಬಿದ್ದು
ಈ ಹುಡುಗಿ,ಆ ಹುಡುಗಿ ಬಂದವರೆಲ್ಲಾ ತಿರಸ್ಕರಿಸಿದವರೇ!
ಕಣ್ಣೆತ್ತಿ ನೋಡದೇ ಹೋದರಲ್ಲಾ
ಸಾಕಾಗಿದೆ ಈ ಜೀವನ ಜೊತೆಗಾತಿ ಇಲ್ಲದೆ\\
ಕಣ್ಣ ಮುಂದೆ ಎಷ್ಟೋ ಅಪ್ಸರೆಯರ ಚಿತ್ರ
ಜೊತೆಯಾಗಿ ಕೈಹಿಡಿಯುವರು ಯಾರೂ ಇಲ್ಲ
ಕಂಡ ಕನಸೆಲ್ಲವೂ ನೀರ ಮೇಲಿನ ಬರಹದಂತೆ
ಜಾರಿ ಹೋಗುತ್ತಿದೆ-ಕಳಚಿ ಹೋಗುತ್ತಿದೆ\\
ತವಕಿಸುವ ಹೃದಯಕ್ಕೆ ಕಾದು ಸಾಕಾಗಿದೆ
ಇಂದು ಬದುಕಿಹೆನು ನಾನು ನಾನಾಗಿಲ್ಲದೆ
ಪ್ರೀತಿಯ ಅಮೃತ ಹನಿಗಾಗಿ ಹೃದಯ ಬಾಯಾರಿದೆ\\
Saturday, September 4, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment