Saturday, September 4, 2010

ಅಮೃತ

ಏಕೆ ನಿಂತೆ ನಾನು?
ಯಾವ ಪ್ರೀತಿಯ ಹೊಂಗನಸ ಬಯಸಿದೆ ನಾನು?
ಕಣ್ಣು ತವಕಿಸುತ್ತಿದೆ
ಹೃದಯ ತಲ್ಲಣಗೊಂಡಿದೆ
ಈ ಹೃದಯದ ಲಹರಿಗೆ ಸ್ಪಂದಿಸುವ
ಹೆಣ್ಣು ಹೃದಯಕ್ಕೆ ಕಾಯುತಿಹೆನು\\

ಕೆಂಪು ಗುಲಾಬಿ ಕೈಯಲ್ಲಿ
ನಡೆಯದ ದಾರಿ ಯಾವುದೂ ಇಲ್ಲ ಇಲ್ಲಿ
ಕಂಡ ಕಂಡ ದೇವರಿಗೆ ಕಟ್ಟು ಬಿದ್ದು
ಮುಡಿಪು ಕಟ್ಟಿಟ್ಟು ಸಾಕಾಗಿದೆ ಜಿದ್ದಿಗೆ ಬಿದ್ದು
ಈ ಹುಡುಗಿ,ಆ ಹುಡುಗಿ ಬಂದವರೆಲ್ಲಾ ತಿರಸ್ಕರಿಸಿದವರೇ!
ಕಣ್ಣೆತ್ತಿ ನೋಡದೇ ಹೋದರಲ್ಲಾ
ಸಾಕಾಗಿದೆ ಈ ಜೀವನ ಜೊತೆಗಾತಿ ಇಲ್ಲದೆ\\

ಕಣ್ಣ ಮುಂದೆ ಎಷ್ಟೋ ಅಪ್ಸರೆಯರ ಚಿತ್ರ
ಜೊತೆಯಾಗಿ ಕೈಹಿಡಿಯುವರು ಯಾರೂ ಇಲ್ಲ
ಕಂಡ ಕನಸೆಲ್ಲವೂ ನೀರ ಮೇಲಿನ ಬರಹದಂತೆ
ಜಾರಿ ಹೋಗುತ್ತಿದೆ-ಕಳಚಿ ಹೋಗುತ್ತಿದೆ\\

ತವಕಿಸುವ ಹೃದಯಕ್ಕೆ ಕಾದು ಸಾಕಾಗಿದೆ
ಇಂದು ಬದುಕಿಹೆನು ನಾನು ನಾನಾಗಿಲ್ಲದೆ
ಪ್ರೀತಿಯ ಅಮೃತ ಹನಿಗಾಗಿ ಹೃದಯ ಬಾಯಾರಿದೆ\\

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...