ರವಿ ಜಾರಿದ ಕೆಲಸವಾಯ್ತೆಂದು
ಲೋಕರೂಡಿ ಹಕ್ಕಿಗಳು ಗೂಡು ಸೇರಿದವು
ಕತ್ತಲಾವರಿಸಿ,ನೀರವತೆ ಪಸರಿಸಿ
ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ.....
ಹೊನ್ನ ಚಂದ್ರಿಕೆಗೆ ಈಗ ಬೆಳಕಾಯಿತು
ಹಾಲಿ ಚೆಲ್ಲಿ ತಾರಾಲೋಕದಲ್ಲಿ ಒಂದು ಪಯಣ
ಕಾಮದ ರಥವನೇರಿ ಹೊರಡುವನು
ರತಿಯ ಸೊಕ್ಕಡಗಿಸಲು
ಸ್ಪರ್ಶ, ಪಿಸುಮಾತು, ಬಾಹುಬಂದನ, ಚುಂಬನ, ಮರ್ಧನ, ಸಿಹಿಮುತ್ತು, ಬಿಸಿಯುಸಿರು....ಕಾಲ ಕಳೆಯಿತು
ಕಾಮದ ಹುಟ್ಟಡಗಿಸಿ ದಣಿವಾಯಿತು ದೇಹಕ್ಕೆ
ಕ್ಷಣಮಾತ್ರದಲ್ಲಿ ನಿದ್ದೆಗೆ ಪರವಶ
ಚಂದ್ರಿಕೆಯ ಪಯಣ ಮುಗಿದಿಲ್ಲ
ವಿರಹಿಗಳ ವಿಹ್ವಲ ಪ್ರೇಮಜ್ವರ
ಮಗ್ಗುಲು ಮಲಗಿದರೂ ಹತ್ತದ ನಿದ್ದೆ
ಕೊನೆಗೆ ಶಪಿಸಬೇಕು
" ಏಕೆ ಬರುವೆ ಚಂದ್ರಿಕೆ?
ಸುಡಬೇಡ ತೊಲಗು ಸಾಕಾಗಿದೆ ವಿರಹ,
ಇಲ್ಲಾ ಹೆಣ್ಣಾಗಿ ಬಾ ಮಧುಮಂಚಕ್ಕೆ
ಜೊನ್ನ ಜೇನಿಗೆ ಬಾಯಾರಿದೆ ತಣಿಸು ಬಾ"
Saturday, September 4, 2010
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment