ನೀನಿರದ ಸಮಯದಲ್ಲಿ
ನಿನ್ನ ನೆನಪು ಕಾಡಿದೆ ಹೃದಯದಲ್ಲಿ
ಮನಸ್ಸಿಗೆ ಕಾಣದ ನೋವು ಆವರಿಸಿದೆ
ಹೃದಯ ಭಾರವಾಗಿ ನನ್ನ ಮಾತು ಕೇಳದಾಗಿದೆ\\
ಈ ಸಂಜೆ ನಿನ್ನ ನೆನೆಪು ಕಾಡಿತು
ಹಳೆಯ ಮಧುರ ಕ್ಷಣಗಳು ಕಣ್ಣ ಮುಂದೆ ಹಾಯಿತು
ಹಾಂ! ಎಂಥ ಮಧುರ ಎಂಥ ಮಧುರ
ಮತ್ತೆ ಮತ್ತೆ ಬರಲಿ ಎಂದು ಚಿತ್ತ ಬೇಡಿತು\\
ಆ ಸಂಜೆ ಏಕಾಂಗಿಯಾಗಿ ಚಿತ್ತ ನೆಟ್ಟಿತ್ತು ಆಕಾಶದತ್ತ
ಹಾದು ಹೋಗುವ ಪ್ರತಿ ಹಕ್ಕಿಯೂ ಪ್ರಶ್ನೆ ಹಾಕಿತು
ಗೆಳತಿ ಎಲ್ಲಿ? ಏಕೆ ಒಂಟಿಯಾಗಿಹೆ?
ಕಪ್ಪು ಮೋಡಗಳು ದುಃಖದ ಮಡುಗಟ್ಟಿ ಕಣ್ಣೀರು ಸುರಿಸಿತು\\
ನಿನ್ನ ಸ್ಮರಿಸಲು ಅದೆಷ್ಟು ಖುಷಿ ಮನಸಿಗೆ
ಆದರೂ ನಿನ್ನ ಚಿಂತೆ ಮನಸಿಗೆ ಕಾಡಿದೆ
ನೀನೆಂಬ ಚಿಂತೆ ಗುಣವಾಗದ ಖಾಯಿಲೆಯಾಗಿದೆ
ನೀನೇ ಚುಚ್ಚುಮದ್ದು ಜೀವನದ ಹಾದಿಗೆ\\
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment