Tuesday, September 21, 2010

||ದ್ವಂದ್ವ ||

ಕತ್ತಲ್ಲಲೆಲ್ಲೋ ಹುಡುಕುತ್ತಿದ್ದೆ
ನನ್ನ ಕನಸನ್ನ, ಜೀವನವನ್ನ .....
ಅರೆರೆ! ಈ ಮಿಂಚುಹುಳ .......
ಬೆಳಕ ಚಿಮುತ್ತಾ, ಕತ್ತಲ ಸೀಳುತ್ತಾ,....
ಎಲ್ಲೆಲ್ಲೋ ಹೊರಟಿದ್ದು, ನನ್ನ ಏಕೆ ಸೆಳೆದಿದೆ?
ಎಲ್ಲಿ ಹೋದವು ನನ್ನ ಕನಸು, ಜೀವನ?

ಹೇ...! ನನ್ನ ಮನಸ್ಸನ್ನೇಕೆ ಸೆಳೆದ ಎನ್ನುವ
ಹೊತ್ತಿಗಾಗಲೇ ದೃಷ್ಟಿಯಿಂದಲೇ ಪರಾರಿ
ಅನಾಥ ಬೇತಾಳಗಳಾಗಿ ಅದರ ಸೆಳೆತಕ್ಕೆ ಒಳಗಾಗಿದ್ದ
ಕನಸು, ಜೀವನ ಮತ್ತೆ ಕತ್ತಲಲ್ಲಿ ಅಲೆವಂತಾಯಿತು.

ಹೋ...! ಅನೈತಿಕತೆಗೆ ಸೆಳೆತ ಹೆಚ್ಚೇಕೆ?
ಮಧುರತೆಯಿರುವುದು ಶಾಂತತೆಗೆ ಹೊರತು ಸುಳ್ಳಿಗಲ್ಲ.
ಜನರ ಪರೀಕ್ಷೆಲೋಸುಗವೇ ಸರಿ?
ಅನೈತಿಕತೆಯೆಂದರೆ ಸಾವೇ ಅಲ್ಲವೇ?
ಸಾವನ್ನಪ್ಪುವರು ಹೇಡಿ, ಮೂರ್ಖರೇ ಅಲ್ಲವೇ?
ಧೈರ್ಯವೇ ಸಾಧನೆಯ ಮೊದಲ ಹೆಜ್ಜೆ........

No comments:

Post a Comment

ಅಪರಿಚಿತ ಅತಿಥಿ

  ಬಾ , ಓ   ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।।   ಚಳಿಗಾಳಿ ಹೆದರಿ ಓಡಿಹೋ...