ಕತ್ತಲ್ಲಲೆಲ್ಲೋ ಹುಡುಕುತ್ತಿದ್ದೆ
ನನ್ನ ಕನಸನ್ನ, ಜೀವನವನ್ನ .....
ಅರೆರೆ! ಈ ಮಿಂಚುಹುಳ .......
ಬೆಳಕ ಚಿಮುತ್ತಾ, ಕತ್ತಲ ಸೀಳುತ್ತಾ,....
ಎಲ್ಲೆಲ್ಲೋ ಹೊರಟಿದ್ದು, ನನ್ನ ಏಕೆ ಸೆಳೆದಿದೆ?
ಎಲ್ಲಿ ಹೋದವು ನನ್ನ ಕನಸು, ಜೀವನ?
ಹೇ...! ನನ್ನ ಮನಸ್ಸನ್ನೇಕೆ ಸೆಳೆದ ಎನ್ನುವ
ಹೊತ್ತಿಗಾಗಲೇ ದೃಷ್ಟಿಯಿಂದಲೇ ಪರಾರಿ
ಅನಾಥ ಬೇತಾಳಗಳಾಗಿ ಅದರ ಸೆಳೆತಕ್ಕೆ ಒಳಗಾಗಿದ್ದ
ಕನಸು, ಜೀವನ ಮತ್ತೆ ಕತ್ತಲಲ್ಲಿ ಅಲೆವಂತಾಯಿತು.
ಹೋ...! ಅನೈತಿಕತೆಗೆ ಸೆಳೆತ ಹೆಚ್ಚೇಕೆ?
ಮಧುರತೆಯಿರುವುದು ಶಾಂತತೆಗೆ ಹೊರತು ಸುಳ್ಳಿಗಲ್ಲ.
ಜನರ ಪರೀಕ್ಷೆಲೋಸುಗವೇ ಸರಿ?
ಅನೈತಿಕತೆಯೆಂದರೆ ಸಾವೇ ಅಲ್ಲವೇ?
ಸಾವನ್ನಪ್ಪುವರು ಹೇಡಿ, ಮೂರ್ಖರೇ ಅಲ್ಲವೇ?
ಧೈರ್ಯವೇ ಸಾಧನೆಯ ಮೊದಲ ಹೆಜ್ಜೆ........
Tuesday, September 21, 2010
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment