||ದ್ವಂದ್ವ ||

ಕತ್ತಲ್ಲಲೆಲ್ಲೋ ಹುಡುಕುತ್ತಿದ್ದೆ
ನನ್ನ ಕನಸನ್ನ, ಜೀವನವನ್ನ .....
ಅರೆರೆ! ಈ ಮಿಂಚುಹುಳ .......
ಬೆಳಕ ಚಿಮುತ್ತಾ, ಕತ್ತಲ ಸೀಳುತ್ತಾ,....
ಎಲ್ಲೆಲ್ಲೋ ಹೊರಟಿದ್ದು, ನನ್ನ ಏಕೆ ಸೆಳೆದಿದೆ?
ಎಲ್ಲಿ ಹೋದವು ನನ್ನ ಕನಸು, ಜೀವನ?

ಹೇ...! ನನ್ನ ಮನಸ್ಸನ್ನೇಕೆ ಸೆಳೆದ ಎನ್ನುವ
ಹೊತ್ತಿಗಾಗಲೇ ದೃಷ್ಟಿಯಿಂದಲೇ ಪರಾರಿ
ಅನಾಥ ಬೇತಾಳಗಳಾಗಿ ಅದರ ಸೆಳೆತಕ್ಕೆ ಒಳಗಾಗಿದ್ದ
ಕನಸು, ಜೀವನ ಮತ್ತೆ ಕತ್ತಲಲ್ಲಿ ಅಲೆವಂತಾಯಿತು.

ಹೋ...! ಅನೈತಿಕತೆಗೆ ಸೆಳೆತ ಹೆಚ್ಚೇಕೆ?
ಮಧುರತೆಯಿರುವುದು ಶಾಂತತೆಗೆ ಹೊರತು ಸುಳ್ಳಿಗಲ್ಲ.
ಜನರ ಪರೀಕ್ಷೆಲೋಸುಗವೇ ಸರಿ?
ಅನೈತಿಕತೆಯೆಂದರೆ ಸಾವೇ ಅಲ್ಲವೇ?
ಸಾವನ್ನಪ್ಪುವರು ಹೇಡಿ, ಮೂರ್ಖರೇ ಅಲ್ಲವೇ?
ಧೈರ್ಯವೇ ಸಾಧನೆಯ ಮೊದಲ ಹೆಜ್ಜೆ........

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...