ನೂರು ಕನಸಿದೆ
ಒಂದು ಮನಸಿದೆ
ಕನಸು ಒಡೆಯುವುದಕ್ಕೆ ಕಾರಣವಿದೆ
ಚಿಗುರಿದ ಕನಸು ಬೆಳೆಯುವಮುನ್ನವೇ ಮುರುಟಿದೆ
ಆಸೆಯಿದೆ
ಸಾಧಿಸುವ ಛಲವಿದೆ
ಆಸೆಯು ನುಚ್ಚುನೂರಾಗುವುದಕ್ಕೆ ಸಂಚುನಡೆದಿದೆ
ಚಿಗುರಿದ ಆಸೆ ಬತ್ತುವುದಕ್ಕೆ ಮನದಲ್ಲಿ ಗೊಂದಲವಿದೆ
ಹಲವು ದಾರಿಯಿದೆ
ಸರಿಯಾವುದೆಂದು ತಿಳಿದಿದೆ
ಮುಂದೆಹೋಗುವ ಇರಾದೆ ಖಂಡಿತವಾಗಿಯೂ ಉಳಿದಿದೆ
ಮನದಲ್ಲಿ ದ್ವಂದ್ವದ ಘರ್ಷಣೆ ಹೆಚ್ಚಾಗುವ ಸೂಚನೆ ದೊರೆತಿದೆ
ಯೋಚನೆಯಿದೆ
ಮನಸ್ಸಿನ ಶಕ್ತಿ ತಿನ್ನುತ್ತಿದೆ
ಇಂದು-ನಾಳೆ ತೂಗುಯ್ಯಾಲೆಯಲ್ಲಿ ತೊಳಲುತ್ತಿದೆ
ಕಾರ್ಯಪ್ರವೃತ್ತನಾಗದೆ ಕೆಲಸವಾಗದೆಂದು ಅರ್ಥವಾಗಿದೆ
ಇಂದಾಗಬೇಕು
ತೊಂದರೆಯಿಲ್ಲ ನಾಳೆಯಾದರೂ..
ಮರೆತು ನಾಳೆ..ನಾಳೆ ಮುಂದೆ ಮುಂದೆ ಹೋಗಬಾರದು
ಹೋಗುತಲಿರಲು ಸುಮ್ಮನೆ ನೋಡುತ್ತಾ ಕುಳಿತರೆ ಕಾದಿದೆ ನಿರಾಸೆ
Sunday, September 19, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment