Sunday, September 19, 2010

ನಿರಾಸೆ

ನೂರು ಕನಸಿದೆ
ಒಂದು ಮನಸಿದೆ
ಕನಸು ಒಡೆಯುವುದಕ್ಕೆ ಕಾರಣವಿದೆ
ಚಿಗುರಿದ ಕನಸು ಬೆಳೆಯುವಮುನ್ನವೇ ಮುರುಟಿದೆ


ಆಸೆಯಿದೆ
ಸಾಧಿಸುವ ಛಲವಿದೆ
ಆಸೆಯು ನುಚ್ಚುನೂರಾಗುವುದಕ್ಕೆ ಸಂಚುನಡೆದಿದೆ
ಚಿಗುರಿದ ಆಸೆ ಬತ್ತುವುದಕ್ಕೆ ಮನದಲ್ಲಿ ಗೊಂದಲವಿದೆ


ಹಲವು ದಾರಿಯಿದೆ
ಸರಿಯಾವುದೆಂದು ತಿಳಿದಿದೆ
ಮುಂದೆಹೋಗುವ ಇರಾದೆ ಖಂಡಿತವಾಗಿಯೂ ಉಳಿದಿದೆ
ಮನದಲ್ಲಿ ದ್ವಂದ್ವದ ಘರ್ಷಣೆ ಹೆಚ್ಚಾಗುವ ಸೂಚನೆ ದೊರೆತಿದೆ


ಯೋಚನೆಯಿದೆ
ಮನಸ್ಸಿನ ಶಕ್ತಿ ತಿನ್ನುತ್ತಿದೆ
ಇಂದು-ನಾಳೆ ತೂಗುಯ್ಯಾಲೆಯಲ್ಲಿ ತೊಳಲುತ್ತಿದೆ
ಕಾರ್ಯಪ್ರವೃತ್ತನಾಗದೆ ಕೆಲಸವಾಗದೆಂದು ಅರ್ಥವಾಗಿದೆ


ಇಂದಾಗಬೇಕು
ತೊಂದರೆಯಿಲ್ಲ ನಾಳೆಯಾದರೂ..
ಮರೆತು ನಾಳೆ..ನಾಳೆ ಮುಂದೆ ಮುಂದೆ ಹೋಗಬಾರದು
ಹೋಗುತಲಿರಲು ಸುಮ್ಮನೆ ನೋಡುತ್ತಾ ಕುಳಿತರೆ ಕಾದಿದೆ ನಿರಾಸೆ

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...