ನೂರು ಕನಸಿದೆ
ಒಂದು ಮನಸಿದೆ
ಕನಸು ಒಡೆಯುವುದಕ್ಕೆ ಕಾರಣವಿದೆ
ಚಿಗುರಿದ ಕನಸು ಬೆಳೆಯುವಮುನ್ನವೇ ಮುರುಟಿದೆ
ಆಸೆಯಿದೆ
ಸಾಧಿಸುವ ಛಲವಿದೆ
ಆಸೆಯು ನುಚ್ಚುನೂರಾಗುವುದಕ್ಕೆ ಸಂಚುನಡೆದಿದೆ
ಚಿಗುರಿದ ಆಸೆ ಬತ್ತುವುದಕ್ಕೆ ಮನದಲ್ಲಿ ಗೊಂದಲವಿದೆ
ಹಲವು ದಾರಿಯಿದೆ
ಸರಿಯಾವುದೆಂದು ತಿಳಿದಿದೆ
ಮುಂದೆಹೋಗುವ ಇರಾದೆ ಖಂಡಿತವಾಗಿಯೂ ಉಳಿದಿದೆ
ಮನದಲ್ಲಿ ದ್ವಂದ್ವದ ಘರ್ಷಣೆ ಹೆಚ್ಚಾಗುವ ಸೂಚನೆ ದೊರೆತಿದೆ
ಯೋಚನೆಯಿದೆ
ಮನಸ್ಸಿನ ಶಕ್ತಿ ತಿನ್ನುತ್ತಿದೆ
ಇಂದು-ನಾಳೆ ತೂಗುಯ್ಯಾಲೆಯಲ್ಲಿ ತೊಳಲುತ್ತಿದೆ
ಕಾರ್ಯಪ್ರವೃತ್ತನಾಗದೆ ಕೆಲಸವಾಗದೆಂದು ಅರ್ಥವಾಗಿದೆ
ಇಂದಾಗಬೇಕು
ತೊಂದರೆಯಿಲ್ಲ ನಾಳೆಯಾದರೂ..
ಮರೆತು ನಾಳೆ..ನಾಳೆ ಮುಂದೆ ಮುಂದೆ ಹೋಗಬಾರದು
ಹೋಗುತಲಿರಲು ಸುಮ್ಮನೆ ನೋಡುತ್ತಾ ಕುಳಿತರೆ ಕಾದಿದೆ ನಿರಾಸೆ
Sunday, September 19, 2010
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment