Sunday, September 19, 2010

ಉಷಾ

ಇಲ್ಲಿ ನನ್ನದೊಂದು ಜೀವ ನರಳುತಿದೆ
ಬಿಡುಗಡೆಯ ಬಯಸಿ
ಸುಖ-ಸಂತೋಷ ಕಾಣದೆ
ಹೊರಟಿದೆ ಕಾಣದ ಸುಖವ ಅರಸಿ\\


ಹಲವು ವರುಷಗಳ ಹಿಂದೆ
ಹುಟ್ಟು ಬಯಸದೆ ಧರೆಗಿಳಿದು ಬಂದೆ
ತಾಯಿ-ತಂದೆಯರ ಸಂತೋಷಗೊಳಿಸಿ
ಕಾಡಿದ ಮನೋವ್ಯಥೆ ಅಭಿವೃದ್ದಿಯ ಕಡೆಗಣಿಸಿ\\


ನೋವೇ ಜೀವನದ ಪ್ರತಿ ಕ್ಷಣಗಳು
ನೋವನ್ನು ಅನುಭವಿಸಲೇ ಬಂದವಳು
ಯಾರನ್ನು ಜರಿದು ಫಲವೇನು?
ನಾನು ಪಡೆದ ಭಾಗ್ಯವಲ್ಲದೆ ಮತ್ತೇನು?\\


ರೋಗ-ರುಜಿನಗಳು ಬಂದು ಮುಗಿಬೀಳಲು
ಶಕ್ತಿ ಯುಕ್ತಿಗಳೆಲ್ಲಾ ಮೂಲೆ ಸೇರಲು
ಅನುಭವಿಸದೇ ವಿಧಿಯಿಲ್ಲ
ಅನಾಮಿಕಳಾಗಿ ನೊಂದೆನಲ್ಲಾ\\


ಜೀವದ ಗೆಳೆಯನಲ್ಲಿ ಗೆಲುವಿಲ್ಲ
ಕಟ್ಟಿಕೊಂಡ ಕರ್ಮಕ್ಕೆ ಅನುಭವಿಸಬೇಕಿದೆಲ್ಲಾ
ಕೂಡಿಟ್ಟ ಹಣವೆಲ್ಲಾ ಗುಡಿಸಿದ್ದಾಯಿತು
ನನ್ನೇ ನಾನು ನಕ್ಕೆ ಇಂದು ನಾನು ಮುಕ್ತ
ಆಯಿತು ಲೆಕ್ಕಾ ಚುಕ್ತ\\

No comments:

Post a Comment

ಅಪರಿಚಿತ ಅತಿಥಿ

  ಬಾ , ಓ   ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।।   ಚಳಿಗಾಳಿ ಹೆದರಿ ಓಡಿಹೋ...