ಇಲ್ಲಿ ನನ್ನದೊಂದು ಜೀವ ನರಳುತಿದೆ
ಬಿಡುಗಡೆಯ ಬಯಸಿ
ಸುಖ-ಸಂತೋಷ ಕಾಣದೆ
ಹೊರಟಿದೆ ಕಾಣದ ಸುಖವ ಅರಸಿ\\
ಹಲವು ವರುಷಗಳ ಹಿಂದೆ
ಹುಟ್ಟು ಬಯಸದೆ ಧರೆಗಿಳಿದು ಬಂದೆ
ತಾಯಿ-ತಂದೆಯರ ಸಂತೋಷಗೊಳಿಸಿ
ಕಾಡಿದ ಮನೋವ್ಯಥೆ ಅಭಿವೃದ್ದಿಯ ಕಡೆಗಣಿಸಿ\\
ನೋವೇ ಜೀವನದ ಪ್ರತಿ ಕ್ಷಣಗಳು
ನೋವನ್ನು ಅನುಭವಿಸಲೇ ಬಂದವಳು
ಯಾರನ್ನು ಜರಿದು ಫಲವೇನು?
ನಾನು ಪಡೆದ ಭಾಗ್ಯವಲ್ಲದೆ ಮತ್ತೇನು?\\
ರೋಗ-ರುಜಿನಗಳು ಬಂದು ಮುಗಿಬೀಳಲು
ಶಕ್ತಿ ಯುಕ್ತಿಗಳೆಲ್ಲಾ ಮೂಲೆ ಸೇರಲು
ಅನುಭವಿಸದೇ ವಿಧಿಯಿಲ್ಲ
ಅನಾಮಿಕಳಾಗಿ ನೊಂದೆನಲ್ಲಾ\\
ಜೀವದ ಗೆಳೆಯನಲ್ಲಿ ಗೆಲುವಿಲ್ಲ
ಕಟ್ಟಿಕೊಂಡ ಕರ್ಮಕ್ಕೆ ಅನುಭವಿಸಬೇಕಿದೆಲ್ಲಾ
ಕೂಡಿಟ್ಟ ಹಣವೆಲ್ಲಾ ಗುಡಿಸಿದ್ದಾಯಿತು
ನನ್ನೇ ನಾನು ನಕ್ಕೆ ಇಂದು ನಾನು ಮುಕ್ತ
ಆಯಿತು ಲೆಕ್ಕಾ ಚುಕ್ತ\\
Sunday, September 19, 2010
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment