ಪಾರ್ಕಿನ ಮರ

ನಾನು ಬೆಂಗಳೂರಿನ ಮೂಲೆಯೊಂದರ ಬಡಾವಣೆಯ
ಬಡ ಮರ, ನನ್ನ ಹೆಸರು ಅಶೋಕ
ಉದ್ದುದ್ದಕ್ಕೆ ಬೆಳೆದು ಮುಗಿಲಿಗೇರಿ ಮೋಡಗಳೊಡನೆ
ಸರಸವಾಡಿ ಮಳೆಯ ತರುವುದು ನನ್ನ ಕಾಯಕ
ಸದಾ ಜನರ ಸೇವಕ
ನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದು ನಗರದ
ಸರ್ಕಾರಿ ಕಟ್ಟಡಗಳ ಬಳಿ ಇಲ್ಲವೇ ಇಂತಹ ಪಾರ್ಕಿನಲ್ಲಿ,
ಬಡಾವಣೆಯ ರಸ್ತೆ ಪಕ್ಕಗಳಲ್ಲಿ ಬೆಳೆಯುವುದಕ್ಕೂ ಜಾಗ
ಕೊಟ್ಟಿದ್ದಾರೆ ಬಿ.ಬಿ.ಎಂ.ಪಾಲಿಕೆಯವರು.
ನನ್ನದು ಅದೃಷ್ಟವೋ, ದುರಾದೃಷ್ಟವೋ ತಿಳಿಯೆ!
ನನಗೆ ವಯಸ್ಸು ಇಷ್ಟೇ ಎಂದು ಹೇಳಲು ಬರದು
ಏಕೆಂದರೆ ಬೆಳೆಸಿದವರೇ ಯಾವಾಗ ಕೊಡಲಿ ಪೆಟ್ಟು ನೀಡುತ್ತಾರೋ ತಿಳಿಯೆ? ಅಭಿವೃದ್ದಿಯ ನೆಪ ಸಾಕು ನನ್ನ ಕೊಲ್ಲಲು.
ನನಗೆ ಹಲವಾರು ಶತೃಗಳಿದ್ದಾರೆ,
ಕೆ.ಪಿ.ಟಿ.ಸಿ.ಎಲ್ ನವರು ನನಗೆ ಬಹು ತೊಂದರೆ ಕೊಡುತ್ತಾರೆ
ಎತ್ತರಕ್ಕೆ ಬೆಳೆದು ಮೋಡಗಳ ನಡುವೆ ಸರಸವಾಡುವದರೊಳಗೆ
ಬಂದು ನನ್ನನ್ನು ಕತ್ತರಿಸುತ್ತಾರೆ, ಅವರಿಂದ ನಾನಾಗಿಹೆನು ವಿರಹಿ.
ಈ ಪಾಲಿಕೆಯವರಿಗೆ ನಾನೇನು ಮಾಡಿರುವೆನೋ ತಿಳಿಯೆ ನನ್ನನ್ನು ವಿಧ್ಯುತ್ ತಂತಿಯ ಕೆಳಗೇ ಬೆಳೆಸುತ್ತಾರೆ. ಅವರ ಅವರ ದ್ವೇಷಕ್ಕೆ ಬಲಿಯಾಗುವವನು
ನಾನು ಹೇಗಿದೆ ವಿಚಿತ್ರ ನೋಡಿ!
ಮತ್ತೊಬ್ಬ ಶತೃವೆಂದರೆ ಬಡಾವಣೆಯ ಜನ ಹಾಗೂ ಬೀದಿ ನಾಯಿಗಳು
ನನ್ನ ಕಷ್ಟ ಯಾರಬಳಿ ಹೇಳಬೇಕು ನೀವೇ ಹೇಳಿ?
ಜನ ತಾವು ತಿಂದು ರಾತ್ರಿ ಕತ್ತಲಾದ ಮೇಲೆ ತಿಂದ ಕಸವೆಲ್ಲವನ್ನೂ ನನ್ನ ಮಡಿಲಿಗೆ ತಂದು ಸುರಿಯುತ್ತಾರೆ ಗಬ್ಬು ವಾಸನೆ ರಾತ್ರಿಯೆಲ್ಲಾ ನನಗೆ ನಿದ್ದೇ ಬರುವುದೇ ಇಲ್ಲ. ಇನ್ನೂ ಬೀದಿ ನಾಯಿಗಳ ಹಾವಳಿ ಅಪಾರ- ಅದೆಷ್ಟು ನಾಯಿಗಳು ಇಲ್ಲಿ ಜನರಿಗಿಂತ ನಾಯಿಗಳೇ ಹೆಚ್ಚು, ಪಾಲಿಕೆಯವರು ಕ್ಷಮಿಸಿ
ಇನ್ಫೋಸಿಸ್ ನವರು ನಿರ್ಮಲ ಬೆಂಗಳೂರು ಶೌಚಾಲಯವನ್ನು ಇಲ್ಲಿ ಕಟ್ಟಿಸಿಲ್ಲ ಹೀಗಾಗಿ ಜನ, ಬೀದಿ ನಾಯಿಗಳಿಗೆ ನನ್ನ ಬುಡವೇ ಶೌಚಾಲಯವಾಗಿದೆ.
ಇನ್ನು ಸರ್ಕಾರಿ ಕಟ್ಟಡಗಳ ಬಳಿಯ ನನ್ನ ಗೋಳು ಅಪಾರ, ಸ್ವಾಮಿ ಅಲ್ಲಿಗೆ ಬರುವರೆಲ್ಲಾ ಅಲ್ಲಿನ ಅಧಿಕಾರಿಗಳಿಗೆ ಬಯ್ಯಲಾಗದೆ, ಅವರಿಗೆ ಇವರು ಲಂಚಕೊಟ್ಟು ನನಗೆ ಉಗಿದು ಹೋಗುತ್ತಾರೆ ನೋಡಿ ಹೇಗಿದ್ದಾರೆ? ಈ ಜನ!. ಆ ಸರ್ಕಾರಿ ಜನಗಳನ್ನು, ರಾಜಕಾರಣಿಗಳನ್ನು ನೋಡಿದರೆ ನನಗೆ ಮಯ್ಯೆಲ್ಲಾ ಉರಿಯುತ್ತೆ, ಪಕ್ಕದಲ್ಲಿ ಬಂದು ನಿಂತಾಗ ಹಾಗೆ ಮುರಿದು ಅವರ ಮೇಲೆ ಬಿದ್ದು ಘಾಸಿಗೊಳಿಸ ಬೇಕೆಂಬ ಹಂಬಲವಿದೆ. ಈ ದೇಶಕ್ಕೆ ಎರಡು ಬಗೆಯುವುದನ್ನು ನೋಡಿದರೆ ಭಯೋತ್ಪಾದಕರಂತೆ ಸುಟ್ಟು ಬಿಡೋಣವೆನಿಸುತ್ತೆ- ಇಂತಹ ಜನರ ನಡುವೆ ನೀವೆಲ್ಲಾ ಅದು ಹೇಗೆ ಜೀವನ ಮಾಡುತ್ತಿರುವಿರೋ ನನಗಂತೂ ಆಶ್ಚರ್ಯವಾಗುತ್ತಿದೆ.
ಇನ್ನು ಪಾರ್ಕಿಗೆ ಬರುವ ಜನರ ಬಗ್ಗೆ ಹೇಳುತ್ತೇನೆ ಅವರ ಪರಿಸ್ಥಿತಿ ಕಂಡು ಮರುಗಿದ್ದೇನೆ, ಕಷ್ಟಕ್ಕೆ ಸ್ಪಂದಿಸುವಂತೆ ತಣ್ಣನೆ ಗಾಳಿ ಬೀಸಿ ಸಂತೈಸಿದ್ದೇನೆ.
ಯಾಂತ್ರಿಕ ಬಧುಕಿನ ಜನಗಳ ನೋಡಿ ಅಯ್ಯೋ ಎನಿಸುತ್ತದೆ. ದಡೂತಿ ದೇಹ,
ಮಧುಮೇಹ ರೋಗ ಅದ್ಯಾವ ರೋಗಗಳೊ ತಿಳಿಯೇ? ಬರುವ ಶೇ.೮೫ ರಷ್ಟು ಮಂದಿ ರೋಗಿಗಳೇ, ನಾನು ಹಾಗು ನನ್ನ ಇತರ ಮರಗಳು ಅವರನ್ನು ಸಾಧ್ಯವಾದಷ್ಟು ನೆಮ್ಮದಿ ಕೊಡುವ ಪ್ರಯತ್ನವನ್ನು ಮುಂದುವರಿಸಿದ್ದೇವೆ.
ಧ್ಯಾನ ಮಾಡುವವರು, ವೇಗವಾಗಿ ನಡೆದಾಡುವವರು, ಮನೆಯಲ್ಲಿ ನಿದ್ದೆ ಮಾಡಲಾಗದವರು, ಸೌಂದರ್ಯ ಪ್ರಜ್ನೆಯಿರುವವರು, ಹದಿಹರೆಯದ ಹಕ್ಕಿಗಳು,
ವಿಚಿತ್ರವಾಗಿ ನಗುವವರು. ಚಿತ್ರ ವಿಚಿತ್ರ ಕಪಿಚೇಷ್ಟೆ, ಅಂಗಚೇಷ್ಟೆ ಮಾಡುವವರು,
ಮಾತಾನಾಡುವುದಕ್ಕೇ ಬರುವವರು ಪಟ್ಟಿ ಇನ್ನೂ ಉದ್ದ ಬೆಳೆಯುತ್ತೆ.
ಎಲ್ಲರೂ ನಮ್ಮಿಂದ ದಿನಕ್ಕಾಗುವ ಹೊಸ ಚೈತನ್ಯವನ್ನು ಪಡೆದುಹೋಗುತ್ತಾರೆ.
ನಾವು ಚೈತನ್ಯದ ATM ಎಂದರೆ ತಪ್ಪಲ್ಲ. ನೀವೂ ಬನ್ನಿ, ನಿಮ್ಮ ಸ್ನೇಹಿತ,ಬಂಧು-ಬಾಂಧವರನ್ನೂ ಕರೆ ತನ್ನಿ ಚೈತನ್ಯದ ಕಲ್ಪವೃಕ್ಷವೆಂದರೆ ನಾವುಗಳೇ! ಬನ್ನಿ ಬನ್ನಿ....

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...