ಬೆಳಿಗ್ಗೆ ಕೆಲಸವಿತ್ತು,
ಬ್ಯಾಂಕಿಗೆ ಹೋದೆ ಹಣ ಕಟ್ಟಲು,ಡಿ.ಡಿ ತರಲು.
ಬ್ಯಾಂಕ್ ಅಂದರೆ ಒಂದು ತರಾ ಅಲರ್ಜಿಯಾಗುತ್ತೆ
ಅಲ್ಲಿನ ಜನ ನಮ್ಮ ಸಮಯವನ್ನು ತಿಂದುಬಿಡುತ್ತಾರೆ
ಕಮೀಷನ್ ಕೊಟ್ಟು ನಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಕಲ್ಲಿ
ಜನರೂ ಹಾಗೆಯೇ ಇದ್ದಾರೆ ಬಿಡಿ!
ಅಲ್ಲಿನ Sಟiಠಿ ನಲ್ಲಿ ಎಲ್ಲವನ್ನೂ ಬರೆದು ಡಿ.ಡಿಗೆ ಕಮೀಷನ್
ಕೇಳಲು ಅಲ್ಲಿದ್ದ ವನಿತೆಯನ್ನು ಕೇಳಿದೆ
ಬೊಗಸೆ ಕಂಗಳ ಯುವತೆ ನಗುತ್ತಾ ‘ಏನು ಬೇಕು ಸಾರ್’
ಎಂದಳು ಆಕೆಯ ಕಣ್ಣುಗಳು ಬಲು ಸುಂದರವಾಗಿತ್ತು ಹಾಗೇ ಕಣ್ಣುಗಳ ಮಿಂಚು, ತುಟಿಯಲ್ಲಿ ನಗು ಖುಷಿಕೊಟ್ಟಿತು.
ಸದಾ ಮುಖಗಂಟಿಕ್ಕಿ, ತಮ್ಮ account ನಿಂದಲೇ ದುಡ್ಡು
ಕೊಡುತ್ತಿದ್ದೇವೆಂಬ ನಂಬಿಕೆಯಿಂದ ,ಕೊಡಬೇಕಲ್ಲಾ ಎಂದು
ಕೊಡುತ್ತಾ ದುಡ್ಡು ತೆಗೆದುಕೊಳ್ಳುವವರಲ್ಲೂ ಅದೇ ವಾತಾವರಣವನ್ನು ಬಿತ್ತುತ್ತಿದ್ದರು.
ಇಂದು ವಾತಾವರಣೆವೇ ಬೇರೆ ಎನಿಸಿತು
ಅವಳ ಕಣ್ಣೋಟ, ಮುಗುಳು ನಗು ಅಲ್ಲಿನ ವಾತಾವರಣವೇ ಬದಲಾಯಿಸಿತ್ತು, ಹೆಣ್ಣಿನ ಮುಗುಳು ನಗೆಗೆ ಎಷ್ಟು ಶಕ್ತಿಯಿದೆಯವೇ! ಅದಕ್ಕೆ ಹೇಳುವುದು ‘ಹೆಣ್ಣು ಮನೆಯ ಬೆಳಕು’
ಎಂದು ಸತ್ಯದ ಅರಿವು ನನಗಂತೂ ಅಯಿತು.
ನನ್ನ ಕೆಲಸವೂ ಅಷ್ಟೇ ಸಲೀಸಾಗಿ ಆಯಿತು.
ಆದರೂ ಬ್ಯಾಂಕಿನ ಜನ ‘commission’ ತೆಗೆದುಕೊಂಡು
ನಮ್ಮ ಸಮಯವನ್ನು ತಿನ್ನುತ್ತಾರೆ.
ಅವಳ ಕಣ್ಣೋಟಕ್ಕೆ, ಮುಗುಳು ನಗೆಗೆ ‘ಧನ್ಯವಾದಗಳು’
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
No comments:
Post a Comment