ಒಂದು ಮುಂಜಾನೆಯಲ್ಲಿ ರವಿ ಕಣ್ಣ ಬಿಡುವ ಮುನ್ನ
ಕೋಗಿಲೆ ಮರಿಯೊಂದು ಮಾವಿನ ಮರದಲ್ಲಿ ಕುಳಿತಿತ್ತು
ಮಧುರ ಕಂಠದಿ ಹಾಡ ಹಾಡುತಿತ್ತು
ಕುಹೂ....ಕುಹೂ... ಗಾನ ಮುಂಜಾನೆಯ ಆವರಿಸಿತ್ತು\\
ಆಹಾ! ಎಂಥ ಮಾಧುರತೆ
ನೀರವತೆಯ ಮರಗಳಲ್ಲಿ ಮಾಧುರ್ಯದ ಮರ್ಮರ
ಗಂಧರ್ವ ಗಾನದ ಲಹರಿಯೇ ಹೊಮ್ಮುತಿತ್ತು
ಬಾನೆತ್ತರಕೆ ಹಾರಿತು ಇಳೆಯ ಗಾನ\\
ಮೈಮನಗಳಲ್ಲಿ ಎಬ್ಬಿಸಿತು ಚೈತನ್ಯದ ಗಾನ
ತೇಲಿ ತೇಲಿ ದೇವಲೋಕದ ರವಿಯ ಸ್ತುತಿಸುತ್ತಿತ್ತು
ಕೋಗಿಲೆಯ ಗಾನಕೆ ಮನಸೋತ ಮುಗಿಲುಗಳು
ಭಾವುಕತೆಯ ಪನ್ನೀರ ಸುರಿಸುತ್ತಿತ್ತು\\
ಕಣ್ಣ ಹೊರಳಿಸಿ ರವಿಯು ಜಗದ ಕಡೆಗೆ ಬಣ್ಣವೆರಚಿ ಬಾನಿಗೆ
ಓಕುಳಿಯಾಟಕ್ಕೆ ಮುನ್ನುಡಿಯ ಬರೆಯುತ್ತಿತ್ತು
ಸುಯ್! ಗಾಳಿ ಆನಂದದಿ ನಲಿದಾಡಿ ಮರಗಿಡಗಂಟಿಗಳಲ್ಲಿ
ದೇವಲೋಕದ ಗಾನವ ಇಳೆಗೆ ಪರಿಚಯಿಸುತ್ತಿತ್ತು\\
Saturday, September 4, 2010
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment