Sunday, September 19, 2010

ಸ್ವಾರ್ಥ ಸಾಧನೆ


ಮನದಲಿ ಏನೂ ಇಲ್ಲ
ಎಲ್ಲವೂ ಖಾಲಿ ಖಾಲಿ
ಕಣ್ಣು ಮುಚ್ಚಿದರೆ ಕತ್ತಲು
ಕಟ್ಟಿ ಹಾಕಿದೆ ಮುಂದೆ ಹೋಗದಿರಲು


ನೂರು ದಾರಿಗಳಿವೆ ಮುಂದೆ
ಯಾವುದನ್ನು ಆರಿಸಿಕೊಳ್ಳಲಿ ಪ್ರಶ್ನೆ ಮೊದಲಿದೆ
ನೂರು ಜನರು ಹೋಗುತಿಹರು ಮುಂದೆ
ಯಾರನ್ನು ಕರೆಯಲಿ ಕೈಹಿಡಿದು ನಡೆಸಿರೆಂದು


ನಾಮುಂದು ತಾಮುಂದು ಗೊಡವೆ ಇಲ್ಲಿ ತುಂಬಿದೆ
ಒಬ್ಬರ ಕಾಲು ಒಬ್ಬರು ಹಿಡಿದಿದ್ದಾರೆ ಮೇಲೇರುವನ ಕಾಲೆಳೆಯಲು
ಮತ್ತೇ ಕೆಲವರು ಕೆಸರೆರಚುತ್ತಿದ್ದಾರೆ ಮುಂದೆ ಹೋಗದಂತೆ
ಎಲ್ಲರೂ ನಿಂತಲ್ಲೇ ನಿಂತಿದ್ದೇವೆ ಅಧೋಗತಿಯ ಕಡೆಗೆ ಮುಖಮಾಡಿ


ರುದ್ರನರ್ತನ,ಅಟ್ಟಹಾಸ ಕಣ್ಣಮುಂದೆ ನಲಿದಿದೆ
ಏನು ಮಾಡಬೇಕೆಂದು ತೋಚದಾಗಿದೆ
ಕಾಲೆಳೆಯಬೇಕೆ?,ಕಾಲುಕೀಳಬೇಕೇ? ಮನದಲ್ಲಿ ಶೂನ್ಯ
ಗುಂಪಿನಲ್ಲ್ಲಿ ಗೋವಿಂದ-ಗುಂಪು ಹೋದ ಕಡೆ ನಾವು
-ಕುರಿಗಳು ನಾವು ಕುರಿಗಳು


ಎಲ್ಲವೂ ಸರಿಯಿಲ್ಲ, ಎಲ್ಲರೂ ಸರಿಯಲ್ಲ
ನಮ್ಮ ಮೂಗಿನ ನೇರಕ್ಕೆ
ನಾನು ಸರಿ, ನೀನು ಸರಿಯಿಲ್ಲ
ಎಲ್ಲವೂ ನಮ್ಮ ಸ್ವಾರ್ಥ ಸಾಧನೆಗೆ

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...