ಅವನೇ ಕೃಷ್ಣ!
ಅವಳೇ ರಾಧೇ!
ಪ್ರೀತಿ-ಪ್ರೇಮವೆಂದರೆ ಅವರೇನೇ\\
ಹಾರಿಬರುತಿರುವ ಕರಿ ಮೋಡವೇ ಕೃಷ್ಣ
ಕ್ಷಣ ಮಾತ್ರದಲಿ ಮಿಂಚಿ ಮರೆಯಾದ ಕಣ್ಣ ಮಿಂಚು ರಾಧೇ
ಧರೆಗಿಳಿಯುತಿರುವ ಹೊನ್ನ ಮಳೆ -ಪ್ರಣಯ\\
ಬಳುಕುತ್ತಾ ಹರಿದಾಡುವ ನದಿ ರಾಧೇ
ಕಡಲ ಕಡೆಗೆ ಓಡಿಸುವ ಚೈತನ್ಯ ಕೃಷ್ಣ
ಒಳುಮೆಯಿಂದಲಿ ಬಳುಕುತ ಕಡಲಸೇರುವುದು- ಮಿಲನ\\
ಪ್ರೇಮದ ಒಡಲು ಕಡಲು ರಾಧೇ
ಹನಿ-ಹನಿ ನೀರು ಅವಿಯಾಗಿಸುವ ಶಕ್ತಿ ಕೃಷ್ಣ
ಗಗನಕ್ಕೇರಿ ಮುಗಿಲುಗಳಾಗುವುದೇ-ಪ್ರೀತಿ\\
ಹೂ ಮನಸ್ಸು ರಾಧೇ
ಭಾವನೆಗಳ ತುಡಿತ ಕೃಷ್ಣ
ಮನಸು -ಭಾವನೆ ಕ್ರೀಯಾಶೀಲತೆಯೇ-ಅನುರಾಗ\\
Sunday, September 5, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment