ಯಾರಲೂ ಹೇಳಿಲ್ಲ ಮನದ ನೋವನು
ನೋವು ಯಾಕೋ ತಿಳಿದಿಲ್ಲ
ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ\\
ಹಕ್ಕಿ ಹಾರುವಾಗ ಕುತೂಹಲ ಏನೋ!
ಹಾರಲಾರೆನೆಂದು ಮನಸಿನಲ್ಲಿ ಖಿನ್ನತೆ ಏಕೋ?
ನಾನು ಅವರಂತಲ್ಲವೆಂಬ ಬಿನ್ನತೆ ಏಕೋ?\\
ಹೃದಯದಲ್ಲಿ ನೋವಿದೆ ಏನೋ?
ಏನೆಂದು ತಿಳಿಯೆನು ಏಕೋ?
ಏನನ್ನೋ ಹುಡುಕುವ ತವಕವಿಂದೇಕೋ?\\
ನಾನು ಏನೆಂದು ಅರಿವಿಲ್ಲವೇಕೋ?
ಕಾಣದ ಶಕ್ತಿಯು ಸತಾಯಿಸುತಿದೇಕೋ?
ನಾನು ಕಾಣದ ಚೈತನ್ಯವೆಲ್ಲೋ?\\
ಮನಸು ದುಃಖಿಸುತಿದೆ ಕಾರಣ ತಿಳಿಯದೆ
ಉತ್ತರ ಸಿಗದೆ ದಾರಿ ಕಾಣದಾಗಿದೆ
ಪ್ರಶ್ನೆಗಳು ಕಾಡಿದೆ ನಿದ್ದೆಮಾಡದೆ\\
ಇಂದು ನಾಳೆ ವರುಷಗಳು ಉರುಳಿದೆ
ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ
ಮನಸಿನ ನೋವು ಉತ್ತರ ಕಾಣದೆ ಬತ್ತಿದೆ\\
Sunday, September 19, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment